ಗೋಕರ್ಣ : ಕಡಲ ತೀರದಲ್ಲಿ ಬಹಿರಂಗವಾಗಿ ಹೊಸ ವರ್ಷಾಚರಣೆ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಗೋಕರ್ಣ ಠಾಣಾ ಪಿ.ಐ ವಸಂತ್ ಆಜಾರಿ ತಿಳಿಸಿದ್ದಾರೆ.
ಹೊಸ ವರ್ಷಾಚರಣೆಯ ಸಂಭAದ ಹೋಟೆಲ್ ಹಾಗೂ ರೆಸಾರ್ಟ್ ಮಾಲಿಕರ ಜೊತೆ ಸಭೆ ನಡೆಸಿದ ಅವರು, ರೆಸಾರ್ಟ್ ಹಾಗೂ ಹೋಟೆಲ್ ಕೋಣೆಯಲ್ಲಿ ಹೊಸ ವರ್ಷಾಚರಣೆ ಮಾಡಬಹುದು. ಆದರೆ ಬಹಿರಂಗವಾಗಿ ಗುಂಪು ಗುಂಪಾಗಿ ಸೇರಿ ವರ್ಷಾಚರಣೆ ಮಾಡುವುದು, ಪಟಾಕಿ ಸಿಡಿಸುವುದು , ಗಲಾಟೆ ಮಾಡುವುದಕ್ಕಾಗಲಿ, ಸೌಂಡ್ ಸಿಸ್ಟಮ್ಗಳನ್ನ ಹಾಕಿಕೊಳ್ಳುವುದಕ್ಕಾಗಲಿ ಅನುಮತಿ ಇಲ್ಲ ಎಂದಿದ್ದಾರೆ.
ರೆಸಾರ್ಟ್ ನಲ್ಲಿ ಬರುವ ಪ್ರವಾಸಿಗರ ಗುರುತಿನ ಚೀಟಿ ಕಡ್ಡಾಯವಾಗಿ ತೆಗೆದುಕೊಳ್ಳುಬೇಕು. ಸಿಸಿಟಿವಿಗಳನ್ನ ಅಳವಡಿಸಿ ಸುಸ್ಥಿತಿಯಲ್ಲಿಡಬೇಕು. ಡಿಸೆಂಬರ್ ೩೧ ರಂದು ನಡೆಯುವ ಎಲ್ಲಾ ಚಟುವಟಿಕೆ ದಾಖಲಾಗುವಂತೆ ಇಡಬೇಕು. ಏನಾದರೂ ಅವಘಡವಾದರೆ ಪರಶೀಲನೆ ಮಾಡಲು ಸಿಗುವಂತಿರಬೇಕು. ಇಲ್ಲವಾದರೆ ಮಾಲಿಕರನ್ನೇ ಹೊಣೆಯನ್ನಾಗಿ ಮಾಡಲಾಗುವುದು ಎಂದರು.
ಕಡ್ಡಾಯವಾಗಿ ಪ್ರವಾಸಿಗರು ಕೋವಿಡ್ ನಿಯಮ ಪಾಲಿಸಬೇಕು. ರೆಸಾರ್ಟ್ ಹೋಟೆಲ್ ಮಾಲಿಕರು ತಿಳಿಸಬೇಕು. ನಿಯಮಗಳನ್ನು ಒಂದೊಮ್ಮೆ ಮೀರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂಸರ್ಭದಲ್ಲಿ ಪಿ.ಎಸ್.ಐ ನವೀನ ನಾಯ್ಕ, ಮಾತನಾಡಿ ಅನಧಿಕೃತವಾಗಿ ರೆಸಾರ್ಟ್ ನಲ್ಲಿ ವಿದೇಶಿಗರು ತಂಗಲು ಅವಕಾಶವಿಲ್ಲ. ಅಧಿಕೃತ ಮೀಸಾ, ಪಾಸ್ ಪೋರ್ಟ್ ಇದ್ದವರಿಗೆ ಮಾತ್ರ ಅವಕಾಶ ಕೊಡಬೇಕು ಎಂದರು
Leave a Comment