ಯಲ್ಲಾಪುರ : ತಾಲೂಕಿನ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆ ಈಡೇರುಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರರಿಗೆ ಯಲ್ಲಾಪುರ ದಲ್ಲಿ ಮನವಿ ಸಲ್ಲಿಸಿದರು.ಮನವಿಯಲ್ಲಿ ಕರ್ನಾಟಕ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 14,000 ಕ್ಕಿಂತಲೂ ಹೆಚ್ಚು ಅತಿಥಿ ಉಪನ್ಯಾಸಕರು ಅತ್ಯಂತ ಕಡಿಮೆ ಗೌರವಧನದಲ್ಲಿ (11,000 ಹಾಗೂ 13,000) ಹಲವಾರು ವರ್ಷಗಳಿಂದ ಸೇವೆಸಲ್ಲಿಸುತ್ತಿದ್ದೇವೆ.
ಈ ಎಲ್ಲಾ ಅತಿಥಿ ಉಪನ್ಯಾಸಕರು ಸೇವಾಭದ್ರತೆಗಾಗಿ ಮತ್ತು ವೇತನ ಹೆಚ್ಚಳಕ್ಕಾಗಿ ಕಳೆದ 10 12-2021 ರಿಂದ ಅನಿರ್ದಿಷ್ಟಾವಧಿ ತರಗತಿ ಬಹಿಷ್ಕಾರ ಮತ್ತು ಧರಣಿ ಹೋರಾಟವನ್ನು ಪ್ರಾರಂಭಿಸಿದ್ದು ಇಲ್ಲಿಯವರೆಗೂ ಘನ ಸರ್ಕಾರ ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಇದರಿಂದ ತರಗತಿಗಳೂ ಇಲ್ಲದ ಕಾರಣ ವಿದ್ಯಾರ್ಥಿಗಳೂ ಪರದಾಡುವಂತಾಗಿದೆ ಎಂದು ನಮಗೆ ಅರಿವಿದೆ, ಆದರೆ ಜೀವನದ ಭದ್ರತೆಯಿಲ್ಲದೆ ಸರ್ಕಾರದ ಶೋಷಣೆಗೆ ಒಳಗಾಗಿರುವ ನಮಗೆ ನ್ಯಾಯ ದೊರಕುವವರೆಗೂ ಈ ಹೋರಾಟ ಮುಂದುವರಿಸುವ ನಿರ್ಧಾರ ನಮ್ಮದಾಗಿದೆ.
ಆದ್ದರಿಂದ ಘನ ಸರಕಾರದ ಭಾಗವಾಗಿರುವ ತಮ್ಮಲ್ಲಿ ವಿನಂತಿಸಿಕೊಳ್ಳುವದೇನೆಂದರೆ ಅತಿಥಿ ಉಪನ್ಯಾಸಕರ ಬೇಡಿಕೆಯನ್ನು ಈಡೇರಿಸುವಂತೆ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಒತ್ತಡ ತರುವ ಮೂಲಕ ನಮಗೆ ನ್ಯಾಯ ಒದಗಿಸಬೇಕೆಂದು ನಾವೆಲ್ಲಾ ಅತಿಥಿ ಉಪನ್ಯಾಸಕರು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಎಂದಿದೆ. ಇದಕ್ಕೆ ಸ್ಪಂದಿಸಿದ ಸಚಿವ ಹೆಬ್ಬಾರ್ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಚರ್ಚಿಸಿ ನಿಮ್ಮ ಉದ್ಯೋಗಭದ್ರತೆ ನೀಡಲು ಪ್ರಯತ್ನಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ ಎಂದು ತಾಲೂಕಿನ ಅತಿಥಿ ಉಪನ್ಯಾಸಕರ ಹೋರಾಟದ ಪ್ರಮುಖ ಪರಮಾನಂದ ದುಂಡಿ ತಿಳಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರುಗಳಾದ ಎಸ್. ಆರ್ ಅಲ್ಲಾಪುರ, ಎಂ. ವಿ ಗೇರಗದ್ದೆ, ನಿತೇಶ್ ಮೋರೆ,ಪ್ರಿಯಾ ಗಾಂವಕರ್, ಪ್ರತಿಭಾ ಗೌಡ, ನಾಗಶ್ರೀ ಭಟ್, ಪ್ರಕಾಶ ಉಪಾಧ್ಯ,ಮನೋಜ ನಾಯ್ಕ ಸೇರಿದಂತೆ ಯಲ್ಲಾಪುರ ದ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು 28 ಅತಿಥಿ ಉಪನ್ಯಾಸಕರು ಇದ್ದಾರೆ. ಅವರೆಲ್ಲರ ಸಹಿ ಇರುವ ಮನವಿಯನ್ನು ಸಚಿವರಿಗೆ ನೀಡಿದರು.
Leave a Comment