ಹುಬ್ಬಳ್ಳಿ : ಫ್ಲಿಪ್ಕಾರ್ಟ್ ಕಂಪನಿಯ ಪ್ರಾಜೆಕ್ಟ್ನಲ್ಲಿ ಹೂಡಿಕೆ ಮಾಡಿದರೆ ಭರ್ಜರಿ ಲಾಭಗಳಿಸಬಹುದು ಎಂಬ ಆಮಿಷ್ ಬಡ್ಡಿ ನಗರದ ಉದ್ಯಮಿಗೆ 32 ಲಕ್ಷ ವಂಚೆಸಲಾಗಿದೆ. ನಗರದ ಹೆಗ್ಗೇರಿ ಕಾಲೋನಿ ಉದ್ಯಮಿ ಗುರುಮೂರ್ತಿ ನಾಣ್ಯದ ಎಂಬುವರಿಗೆ ಅಪರಿಚಿತರು ವಂಚಿಸಿದ್ದಾರೆ.
ದೂರುದಾರರಿಗೆ ಅಪರಿಚಿತ ಮಹಿಳೆ ಲಕ್ಷಿö್ಮÃ ಮೆಹರ್ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದಾಳೆ. ಫ್ಲಿಪ್ ಕಾರ್ಟ್ ಕಂಪನಿಯ ಫ್ರಾಜೆಕ್ಟö್ನಲ್ಲಿ ಹೂಡಿಕೆ ಮಾಡಿದರೆ ತುಂಬಾ ಲಾಭಗಳಿಸಬಹುದು ಎಂದು ನಂಬಿಸಿ, ವಿವಿಧ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಒಟ್ಟು 32 ಲಕ್ಷ ರೂಗಳನ್ನು ಆನ್ ಲೈನ್ ಮೂಲಕ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ. ಪದೇ ಪದೇ ಹಣ ಹಾಕು ಎಂದು ಕೇಳುತ್ತಿದ್ದಾಗ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಹುಬ್ಬಳ್ಳಿ – ಧಾರವಾಡ ಸೈಬರ್ ಕ್ರೆöÊಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
4.20 ಲಕ್ಷ ಮೌಲ್ಯದ ಸಾಮಾಗ್ರಿ ಕಳ್ಳತನ
ಹುಬ್ಬಳ್ಳಿ : ಕೆಎಲ್ಇ ಸಂಸ್ಥೆ ಕಟ್ಟಿಸುತ್ತಿರುವ ಮೆಡಿಕಲ್ ಕಾಲೇಜ್ ಪಕ್ಕದ ಖುಲ್ಲಾ ಜಾಗದಲ್ಲಿ ಇಟ್ಟಿದ್ದ 4.20 ಲಕ್ಷ ಮೌಲ್ಯದ ಸೆಂಟ್ರಿAಗ್ ಮತ್ತು ಬಾರ್ ಬೆಂಡಿAಗ್ ಸಾಮಾಗ್ರಿಗಳನ್ನು ಕಳ್ಳತನ ಮಾಡಿರುವ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಮೀರ ಅಹ್ಮದ ಬೀಳಗಿ ಎಂಬುವರು ದೂರು ದಾಖಲಿಸಿದ್ದಾರೆ. ಬಿಡ್ನಾಳ ಕ್ರಾಸ್ ಪಿ.ಬಿ. ರಸ್ತೆಯ ಎಸ್.ಸಿ ಮಾನಶೆಟ್ಟರ ಗೋಡೌನ್ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಕೆಎಲ್ಇ ಸಂಸ್ಥೆಯ ಮೆಡಿಕಲ್ ಕಾಲೇಜ್ ಪಕ್ಕದ ಖುಲ್ಲಾ ಜಾಗೆಯಲ್ಲಿ ಇಟ್ಟಿದ್ದ ಕಬ್ಬಿಣದ ಸಾಮಾಗ್ರಿ ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವ್ಯಕ್ತಿ ಮೇಲೆ ಹಲ್ಲೆ : ದೂರು ದಾಖಲು
ಹುಬ್ಬಳ್ಳಿ : ವ್ಯಕ್ತಿಯೊಬ್ಬನಿಗೆ ನಾಲ್ವರು ಕಟ್ಟಿಗೆಯಿಂದ ಹಲ್ಲೆ ಮಾಡಿರುವ ಘಟನೆ ಇಲ್ಲಿನ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಶೋಕ ಗಂಗಾಪುತ್ರ ಎಂಬುವರಿಗೆ ಹಲ್ಲೆ ಮಾಡಲಾಗಿದೆ. ನಗರದ ವಿನಾಯಕ, ರವಿ, ಆನಂದ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಾಗಿದೆ.
ಜೂಜುಕೋರರ ಬಂಧನ
ಹುಬ್ಬಳ್ಳಿ : ಒಂದು ರೂಗೆ 90 ರೂಗಳನ್ನು ಕೊಡುವುದಾಗಿ ಜೂಜಾಟ ಆಡುತ್ತಿದ್ದ ಇಬ್ಬರನ್ನು ಕೇಶ್ವಾಪುರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರೇಮಾನAದ, ಮಧು ಎಂಬುವರ ವಿರುದ್ಧ ದೂರು ದಾಖಲಾಗಿದ್ದು, 3740 ರೂ ಜಪ್ತ ಮಾಡಲಾಗಿದೆ.
Leave a Comment