ಯಲ್ಲಾಪುರ : ಘಟ್ಟದ ಮೇಲಿನ ತಾಲೂಕುಗಳ ಗಿರಿಜನ ಸಮಾವೇಶವು ಜ.12 ಬುಧವಾರ ಬೆಳಿಗ್ಗೆ 10.30ಕ್ಕೆ ಪಟ್ಟಣದ ರೈತ ಸಭಾಭವನದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ರಾಮು ನಾಯ್ಕ ಹೇಳಿದರು
ಅವರು ಪಟ್ಟಣದ ಅಡಿಕೆ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ಜಿಲ್ಲೆಯ ಕಾಡುಗಳಲ್ಲಿ ವಾಸವಾಗಿರುವ ಬುಡಕಟ್ಟು ಜನಾಂಗದ ಅಭಿವೃದ್ಧಿ ಕುರಿತು ಚರ್ಚಿಸಿ, ಅವುಗಳನ್ನು ಸರ್ಕಾರದ ಗಮನಕ್ಕೆ ತರಬೇಕು ಎಂಬುದು ಸಮಾವೇಶದ ಮುಖ್ಯ ಉದ್ದೇಶವಾಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ . ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಅವರನ್ನು ಮುಖ ವಾಹಿನಿಗೆ ತಂದು ಸರ್ವತಾಭಿಮುಖ ಅಭಿವೃದ್ಧಿ ಆಗುವಂತೆ ಮಾಡಬೇಕುಅಂತೆಯೇ ಬುಡಕಟ್ಟು ಕುಟುಂಬಗಳಿಗೆ ಈವರೆಗೂ ಜಾಗದ ಹಕ್ಕುಪತ್ರ ನೀಡಲು ಸರ್ಕಾರವು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಇದರಿಂದ ಕೆಲ ಮೂಲಭೂತ ಸೌಕರ್ಯಗಳಿಂದಲೂ ಸಹ ಅವರು ವಂಚಿತ ರಾಗುವಂತಾಗಿದೆ
ದೇಶದಾದ್ಯಂತ ಬುಡಕಟ್ಟು ಜನರ ಮತಾಂತರವಾಗುತ್ತಿದ್ದು, ಅವುಗಳ ನಿಯಂತ್ರಣದೊಂದಿಗೆ ಮತಾಂತರಗೊಂಡ ಕೆಲ ಸಮುದಾಯದವರು ಎಸ್ಸಿ ಹಾಗೂ ಅಲ್ಪಸಂಖ್ಯಾತರಿಗೆ ದೊರೆಯುವ ಎರಡೂ ಅನುಕೂಲಗಳನ್ನು ಪಡೆಯುತ್ತಿದ್ದಾರೆ. ಇದರಿಂದ ಮತಾಂತರಗೊಳ್ಳದ ಮೂಲ ಬುಡಕಟ್ಟುಜನಾಂಗದವರಿಗೆ ಮೋಸವಾಗುತ್ತಿದೆ. ಇದನ್ನು ತಡೆಯುವಂತೆ ಸರ್ಕಾರವು ಕಾನೂನಾತ್ಮಕವಾದ ಕ್ರಮವನ್ನು ಕೈಗೊಳ್ಳಬೇಕು ಎಂದು ದೇಶದಾದ್ಯಂತ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಲಾಗುತ್ತದೆ. ಈ ಎಲ್ಲ ವಿಷಯಗಳ ಕುರಿತು ಚರ್ಚಿಸಿ, ಅವಶ್ಯಕವಿರುವ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವನವಾಸಿ ಕಲ್ಯಾಣ ರಾಜ್ಯ ಹಿತರಕ್ಷಣಾ ಪ್ರಮುಖ ದೋಂಡು ಪಾಟಿಲ್ ಮಾತನಾಡಿ, ಜನಗಣತಿ ಸಂದರ್ಭದಲ್ಲಿ ಆದಿವಾಸಿಗಳನ್ನು ಧರ್ಮರಹಿತಗೊಳಿಸಿ ಇತರೆ ಕಾಲಮ್ಗೆ ಸೇರಿಸಲಾಗುತ್ತಿದ್ದು. ಮೂಲ ಆದಿವಾಸಿಗಳು ಹಿಂದಿನಿಂದಲೂ ಹಿಂದೂ ಧರ್ಮವನ್ನೇ ಪರಿಪಾಲಿಸಿಕೊಂಡು ಬಂದಿರುತ್ತಾರೆ. ಆದ್ದರಿಂದ ಈ ಬಾರಿಯ ಗಣತಿಯಲ್ಲಿ ಅವರನ್ನು ಹಿಂದೂ ಧರ್ಮದಲ್ಲಿಯೇ ಗುರುತಿಸುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಲೆನಾಡು ಸಂಘದ ಅಧ್ಯಕ್ಷ ಎಂ. ಆರ್ ಹೆಗಡೆ, ಬಿಜೆಪಿ ತಾಲೂಕಾಧ್ಯಕ್ಷ ಜಿ. ಎನ್ ಗಾಂವ ಕರ್,ಬಿಜ್ಜು ಪಿಂಗಳೆ,ಪ್ರಸಾದ ಹೆಗಡೆ, ಸಿದ್ದು ಜೋರೆ, ವಿನೋದ್ ತಳೆಕರ್ ಇದ್ದರು
Leave a Comment