
ಯಲ್ಲಾಪುರ : ಅಂತರಂಗದಲ್ಲಿ ವಿವೇಕ ಜಾಗೃತವಾದಾಗ ನಿಜವಾದ ಆನಂದದ ಅನುಭೂತಿ ಆಗುತ್ತದೆ. ಇದರಿಂದ ನಮ್ಮ ಪರಿಮಿತಿಯನ್ನು ಮೀರಿ ಪರಿಸರದಲ್ಲಿ ಭ್ರಾತೃತ್ವ ಪಸರಿಸಲು ಸಾಧ್ಯವಾಗುತ್ತದೆ ಮಾನವ ವಿಶ್ವಮಾನವ ಆಗುವ ಸಂದೇಶವನ್ನು ವಿವೇಕಾನಂದರ ಜೀವನ ನಮಗೆ ಕಲಿಸುತ್ತದೆ ಎಂದು ಕರೊಡೊಳ್ಳಿ ಗೋವರ್ಧನ ಗೋ ಸೇವಾ ಸಮಿತಿ ಕಾರ್ಯದರ್ಶಿವಿದ್ವಾನ್ ಗಣಪತಿ ಭಟ್ಟ ಕೋಲಿ ಬೇಣ ಹೇಳಿದರು

.ಅವರು ಪತಂಜಲಿ ಯೋಗ ಸಮಿತಿ ಭಾರತ ಸ್ವಾಭಿಮಾನ ಟ್ರಸ್ಟ್ ಆಶ್ರಯದಲ್ಲಿ ಪಟ್ಟಣದ ಅಡಿಕೆ ಭವನದಲ್ಲಿ ಬುಧವಾರ ಪ್ರಾತಃಕಾಲ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ವಿಶೇಷ ಉಪನ್ಯಾಸವನ್ನು ನೀಡಿ ಮಾತನಾಡಿ . ನಾವು ಜೀವಿತದ ಪ್ರತಿ ಕ್ಷಣವನ್ನು ಅನುಭವಿಸಬೇಕು ಆಸ್ವಾದಿಸಬೇಕು ನನ್ನಿಂದ ನನ್ನ ಸಮಾಜಕ್ಕೆ ಎಷ್ಟು ಸಾಧ್ಯವೋ ಅಷ್ಟು ಸಮರ್ಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಆರ್. ವಿ ಹೆಗಡೆಮಾತನಾಡಿ ವಿವೇಕಾನಂದರ ಜಯಂತಿ ಯಂತಹ ಕಾರ್ಯಕ್ರಮಗಳನ್ನು ಆಚರಿಸುತ್ತಾ ಪ್ರತಿನಿತ್ಯ ಯೋಗ ಅಭ್ಯಾಸವನ್ನು ಮಾಡುತ್ತಾ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಪತಂಜಲಿ ಯೋಗ ಸಮಿತಿ ಅಧ್ಯಕ್ಷ ವಿ.ಕೆ ಭಟ್ಟ ಶೀಗೆಪಾಲ್ ಮಹಿಳಾ ಪ್ರಭಾರಿ ಶೈಲಶ್ರೀ ಮಟ್ಟ ಪತಂಜಲಿ ಯೋಗ ಸಮಿತಿ ಪತಂಜಲಿ ಯೋಗ ಸಮಿತಿ ಯಲ್ಲಾಪುರ ಉಪಾಧ್ಯಕ್ಷ ನಾಗೇಶ ರಾಯ್ಕರ್ ಕಾರ್ಯದರ್ಶಿ ಸತೀಶ ಹೆಗಡೆ ಸುಬ್ರಾಯ ಭಟ್ಟ ಜಿ ಎಸ್ ಭಟ್ಟ ಹಳವಳ್ಳಿ ರಾಮಕೃಷ್ಣ ಕವಡಿಕೆರೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸೂರ್ಯನಮಸ್ಕಾರ, ಯೋಗ ಉಪನ್ಯಾಸ ಹಾಗೂ ಕೊನೆಯಲ್ಲಿ ಅಗ್ನಿಹೊತ್ರ ಕಾರ್ಯಕ್ರಮ ನೆರವೇರಿತು ಜಿಲ್ಲಾ ಯುವ ಪ್ರಭಾರಿ ದಿವಾಕರ ಮರಾಠಿ,ನಿರ್ವಹಿಸಿದರು.ಜಿ ಎಸ್ ಭಟ್ಟ ವಂದಿಸಿದರು.
Leave a Comment