ಬೆಂಗಳೂರು : ಸುಮಾರು 57 ವರ್ಷದ ವ್ಯಕ್ತಿಯೋರ್ವನ ಛಿದ್ರವಾಗಿದ್ದ ಹೃದಯದ ಗೋಡೆಯನ್ನು ಬೆಂಗಳೂರು ಸ್ಪೆಷಲಿಸ್ಟ್ ಆಸ್ಪತ್ರೆಯ ವೈದ್ಯರು ಶಾಸ್ತ್ರಚಿಕಿತ್ಸೆ ಮಾಡುವ ಮೂಲಕ ಯಶಸ್ವಿಯಾಗಿದ್ದಾರೆ.
ಮನೆಯಲ್ಲಿ ಬಾರಿ ಹೃದಯಘಾತದಿಂದ ಬಳಲುತ್ತಿದ್ದ ಮಹದೇವರಾವ್ ಎಂಬುವವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಗೆ ಬಂದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅವರು ರಕ್ತದೊತ್ತಡವನ್ನು ಅಳೆಯಲು ಸಾದ್ಯವಿರಲಿಲ್ಲ. ಅವರ ನಾಡಿಮಿಡಿತ ಅತ್ಯಂತ ಕ್ಷೀಣವಾಗಿತ್ತು. ಶೇ.0.1ರಷ್ಟು ಉಳಿದುಕೊಳ್ಳಬಹುದಾದ ಸಾಧ್ಯತೆ ಹೊಂದಿದ್ದ ಈ ರೋಗಿಗೆ ನೇರವಾಗಿ ಶ್ವಾಸಕೋಶಗಳಿಗೆ ಆಮ್ಲಕನಕ ಪೂರೈಸಲು ಎಂಡೋಟ್ರೇಕಿಯಲ್ ಟ್ಯೂಬ್ ಅನ್ನು ಅಳವಡಿಸಿ ಶಾಸ್ತ್ರಚಿಕಿತ್ಸೆ ನಡೆಸಿದರು.
ಹೃದಯರೋಗ ತಜ್ಞರಾದ ಡಾ. ಮಹದೇವಸ್ವಾಮಿ. ಶಾಸ್ತ್ರಚಿಕಿತ್ಸೆ ತಜ್ಞ ಡಾ. ತಮೀಮ್ ಮುಂತಾದ ವೈದ್ಯರು ಶಾಸ್ತ್ರಚಿಕಿತ್ಸೆ ನಡೆಸಿದ್ದರು.
Leave a Comment