ಯಲ್ಲಾಪುರ : ಗ್ರಾಮ ಅರಣ್ಯ ಹಕ್ಕು ಸಮಿತಿಯ ಕವಡಿಕೆರೆ ವತಿಯಿಂದ ಕವಡಿಕೆರೆಯ ದುರ್ಗಂಬಾ ದೇವಾಲಯದಲ್ಲಿ ಆಯೋಜಿಸಿದ್ದ ಎಲ್.ಪಿ.ಜಿ ಗ್ಯಾಸ್, ಸೋಲಾರ್ ಲೈಟ್ ಹಾಗೂ ಇತರೆ ಪರಿಕರಗಳ ವಿತರಣಾ ಕಾರ್ಯಕ್ರಮವನ್ನು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಉದ್ಘಾಟಿಸಿದರು.ನಂತರ ಸಚಿವರು ಪಾಲಿಸಿದರೇ ಪಾಲು ಗ್ರಾಮ ಅಭಿವೃದ್ಧಿ ನಿಧಿಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಎಲ್.ಪಿ.ಜಿ ಗ್ಯಾಸ್, ಸೋಲಾರ್ ಲೈಟ್, ಸಿಮೆಂಟ್ ಬೇಲಿ ಕಂಬ ಹಾಗೂ ಇತರೆ ಪರಿಕರಗಳನ್ನು ವಿತರಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ನರಸಿಂಹ ಕೋಣೆಮನೆ, ತಾಲೂಕಾ ಪಂಚಾಯತ ಮಾಜಿ ಸದಸ್ಯನಾಗರಾಜ ಕವಡಿಕೆರೆ, ಗ್ರಾಮ ಪಂಚಾಯತ ಸದಸ್ಯ ಆರ್.ಎಸ್.ಭಟ್, ಸ್ಥಳೀಯ ಪ್ರಮುಖರಾದ ತಿಮ್ಮಣ್ಣ ಭಟ್ ಹಾಗೂ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರು,ಅರ ಣ್ಯಾಧಿಕಾರಿ ಅಲ್ತಾಫ್ ಚೌಕ್ ಡಾಕ್ , ಗ್ರಾಮಸ್ಥರು ಉಪಸ್ಥಿತರಿದ್ದರು.
Leave a Comment