ಯಲ್ಲಾಪುರ :,ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ , ಕಾಮಗಾರಿಯ ಭರದಲ್ಲಿ ಹಲವು ಸಮಾಧಿಗಳನ್ನು ಕಿತ್ತೆಸೆಯಲಾಗಿದೆ. . ರುದ್ರ ಭೂಮಿ ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸಚಿವ ಶಿವರಾಮ ಹೆಬ್ಬಾರ್ ರವರಿಗೆ ಸವಿತಾ ಸಮಾಜ, ನಾಮಧಾರಿ. ಭೋವಿವಡ್ಡರ, ವಾಲ್ಮೀಕಿ, ಭಜಂತ್ರಿ ಮತ್ತಿತರ ಸಮಾಜದ ಪ್ರಮುಖರು ಮಂಗಳವಾರ ಮನವಿ ನೀಡಿದರು ಮನವಿ ಯಲ್ಲಿ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಪಟ್ಟಣದಲ್ಲಿ ಅಲ್ಪಸಂಖ್ಯಾತರು, ಲಿಂಗಾಯತರು ಅವರದ್ದೇ ಆದ ರುದ್ರಭೂಮಿಹೊಂದಿದ್ದಾರೆ.ಬಹುಸಂಖ್ಯಾತ ಹಿಂದುಗಳಿಗೆ ಅಧಿಕೃತ ರುದ್ರಭೂಮಿ ಇಲ್ಲದಿರುವುದು ಕಾರಣಕ್ಕಾಗಿ ಹಿಂದೂ ರುದ್ರ ಭೂಮಿ ಗೆ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು . ಈ ಸಚಿವ ಶಿವರಾಮ ಹೆಬ್ಬಾರ ಅವರಿಗೆ ನೀಡಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ , ಈ ಸಂದರ್ಭದಲ್ಲಿ ಸಂತೋಷ ನಾಯ್ಕ, ಮಾರುತಿ ಭೋವಿವಡ್ಡರ್, ಜಗನ್ನಾಥ್ ರೇವಣಕರ್, ಪಟ್ಟಣ ಪಂಚಾಯತ್ ಸದಸ್ಯರು ರವಿ ಪಾಠಣಕರ್, ನಾಗರಾಜ ಯಾಮಕೇ, ಮತ್ತು ಅನೇಕ ಹಿಂದೂ ಸಮಾಜದ ಮುಖಂಡರು ಇದ್ದರು.
Leave a Comment