
ಯಲ್ಲಾಪುರ :ತಾಲೂಕಿನ ಲಿಂಗನ ಕೊಪ್ಪ ಸ ಹಿ ಪ್ರಾ ಶಾಲೆ ಶಾಲೆಯಲ್ಲಿ 73 ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಶಾಲೆಗೆ ಎಸ್ ಡಿ ಎಂ ಸಿ ಯವರು ಮತ್ತು ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಕೊಡುಗೆ ಯಾಗಿ ನೀಡಿದ ಸ್ಮಾರ್ಟ್ ಟಿವಿ ಯ ನ್ನು ಬಿ ಆರ್ ಸಿ ಸಮನ್ವಯ ಅಧಿಕಾರಿ ಯದ ಶ್ರೀರಾಮ್ ಹೆಗಡೆ ಉದ್ಘಾಟಿಸಿ ಮಾತನಾಡಿ ಇದು ತಾಲೂಕಿನ ಎಲ್ಲ ಶಾಲೆಗಳಿಗೂ ಮಾದರಿ ಆಗುವುದರ ಜೊತೆಗೆ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಲಿ ಎಂದು ಹೇಳಿದರು. ಮುಖ್ಯ ಅತಿಥಿಗಳಾದ ಗ್ರಾ ಪಂ ಸದಸ್ಯ ವಿಶ್ವನಾಥ್ ಭಟ್ ಅಡಿಕೆಸರ್ ಮಾತನಾಡಿ ಸರಕಾರಿ ಶಾಲೆಗೆ ಹೆಚ್ಚಿನ ಮಕ್ಕಳು ಬರಬೇಕು ಇಂತಹ ಶಾಲೆ ಮತ್ತು ಶಿಕ್ಷಕರ ಪ್ರಯೋಜನ ಪಡೆದು ಕೊಳ್ಳಬೇಕು ಎಂದರು. ವೇದಿಕೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಗುರು ಮರಾಠಿ, ಮೈದೀನ್ ಶೇಖ, ಪ್ರವೀಣ್ ಪಾಟೀಲ್,ಮಹಾಬಲೇಶ್ವರ ಗಮ್ಮಾನಿ, ಮತ್ತು ಸಿ ಆರ್ ಪಿ ಆರ್ ಎನ್ ದಬ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕರಾದ ಮಾರುತಿ ಎಂ, ನಾಯ್ಕ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸಹ ಶಿಕ್ಷಕ ವಿನಾಯಕ ಹೆಗಡೆ ನಿರ್ವಹಿಸಿದರು. ಮತ್ತು ಸಹ ಶಿಕ್ಷಕಿ ಸರೋಜಿನಿ ನಾಯ್ಕ್ ವಂದಿಸಿದರು.
[
Leave a Comment