ಯಲ್ಲಾಪುರ: ಇಂದಿನ ದಿನಮಾನದಲ್ಲಿ ಪ್ರಜೆಗಳೆಲ್ಲರೂ ಸಂವಿಧಾನದ ಹಕ್ಕುಗಳನ್ನು ಮಾತ್ರ ಕೇಳಿ ತಿಳಿದು ನಡೆಸುವುದು ಅಷ್ಟೇ ಸಾಲದು, ಸಂವಿಧಾನದ ಕರ್ತವ್ಯದ ಪಾಲನೆಯು ಬಹಳ ಮುಖ್ಯವಾಗಿದೆ. ಸಂವಿಧಾನದ ಕರ್ತವ್ಯವನ್ನು ಅರಿತು ಪಾಲಿಸಿದರೆ ಮಾತ್ರ ಇವತ್ತಿನ ಆಚರಣೆಗೆ ಮಹತ್ವಬರುತ್ತದೆ.ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಎಲ್. ಭಟ್, ಹೇಳಿದರು.
ಅವರು ತಾಲೂಕಿನ ಇಡಗುಂದಿಯ ಸ್ನೇಹಸಾಗರ ವಸತಿ ಶಾಲೆಯಲ್ಲಿ ೭೩ ನೇ ಗಣರಾಜ್ಯೋತ್ಸದಂಗವಾಗಿ ಬಿ. ಆರ್ ಅಂಬೇಡ್ಕರ ಅವರ ಬಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಧ್ವಜಾರೋಹಣ ನೇರವೇರಿಸಿ ಮಾತನಾಡಿ ಸಮಾಜದ ನಾಗರಿಕರೂ, ಶಾಲಾ ವಿದ್ಯಾರ್ಥಿಗಳು ರಾಷ್ಟç ನಿರ್ಮಾಣದಲ್ಲಿ ತೊಡಗಿದ ಮಹಾನ್ ನಾಯಕರಾದ ಬಿ. ಆರ್ ಅಂಬೇಡ್ಕರರ ಜೊತೆಗೆ ಕಾರ್ಯನಿರ್ವಹಿಸಿದ ಉಳಿದ ಮಹಾನ್ ಪುರುಷರ ಬಾವಚಿತ್ರಗಳನ್ನು ಸಂಗ್ರಹಿಸುವುದರ ಮುಖೇನ ಅವರೆಲ್ಲರ ಜೀವನ ಸಾಧನೆಗಳನ್ನು ಓದಿ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದರು.
ಪ್ರಾಂಶುಪಾಲ ವಾಸು ಎಸ್ ದತ್ತ, ಉಪಪ್ರಾಂಶುಪಾಲ ಮಂಜುನಾಥ ವಿ. ಜಿ, ಪ್ರಾಥಮಿಕ ವಿಭಾಗದ ಗುರುದತ್ತ ಸ್ಥಳೇಕರ್ ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Leave a Comment