ಯಲ್ಲಾಪುರ: ಬಾಸಲ್ ಗ್ರಾಮದಲ್ಲಿ ಕ್ರೀಡಾ ಮೈದಾನದ ಕೊರತೆ ಇದ್ದು ನಮಗೊಂದು ಕ್ರೀಡಾಂಗಣ ಮಾಡಿಕೊಡುವಂತೆ ಬಾಸಲ್ ನ ಯುವಕರು ಯುವ ನಾಯಕ ವಿವೇಕ್ ಹೆಬ್ಬಾರ್ ಅವರ ಮೂಲಕ ಕಾರ್ಮಿಕ ಸಚಿವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ಸಲ್ಲಿಸಿದರು.
ಬಾಸಲ್ ಗ್ರಾಮದಲ್ಲಿ ಇದುವರೆಗೂ ಯಾವುದೇ ಸರಿಯಾದ ಕ್ರೀಡಾ ಮೈದಾನ ಇಲ್ಲ. ಬಾಸಲ್ ಸುತ್ತಮುತ್ತಲಿನ ಕ್ರೀಡಾಪಟುಗಳು ವಜ್ರಳ್ಳಿ ,ಮಲವಳ್ಳಿ, ಬಾರೆಯಂತಹ ದೂರದ ಊರುಗಳಿಗೆ ತೆರಳಿ ಕ್ರೀಡಯಲ್ಲಿ ಭಾಗವಹಿಸಬೇಕು. ಇನ್ನಿತರ ಸಂಘಟನಾತ್ಮಕ ಕಾರ್ಯಕ್ರಮಗಳಿಗೆ ಮೈದಾನದ ಕೋರತೆ ಇದೆ. ಇಲ್ಲಿ ಕ್ರೀಡಾಂಗಣ ಮಾಡುವುದರಿಂದ ಬಾಸಲ್ ,ವಾಗಳ್ಳಿ, ಮಾವಿನಮನೆ , ನೆಲೆಪಾಲ್, ಕಾನೂರ ಹರಣಗದ್ದೆ ಭಾಗದ ಕ್ರೀಡಾ ಪಟುಗಳಿಗೆ ಉಪಯೋಗವಾಗಲಿದ್ದು , ಯಕ್ಷಗಾನ ,ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲು ಸಹಾಯಕಾರಿಯಾಗಿದೆ. ಇದರಿಂದ ನಮ್ಮ ಗ್ರಾಮಕ್ಕೆ ಕ್ರೀಡಾ ಮೈದಾನ ನಿರ್ಮಿಸಿ ಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಗಣಪತಿ ವಾಗಳ್ಳಿ, ಉಮಾಶಂಕರ್ ಮರಾಠಿ, ಮಂಜುನಾಥ ಶೆಟ್ಟಿ , ಎಚ್ ವಿಶ್ವನಾಥ ಭಟ್ ಮುಂತಾದವರಿದ್ದರು. ಮನವಿ ಸ್ವೀಕರಿಸಿದ ವಿವೇಕ್ ಹೆಬ್ಬಾರ್ ಈ ಬಗ್ಗೆ ಸಚಿವರ ಗಮನಕ್ಕೆ ತಂದು ಕ್ರೀಡಾಂಗಣಕ್ಕೆ ಸೂಕ್ತ ಸಹಾಯ ಸಹಕಾರ ನೀಡುದಾಗಿ ಹೇಳಿದರು
Leave a Comment