• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಸದ ತೊಟ್ಟಿಗಳ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರ ಆಗ್ರಹ

February 5, 2022 by Jayaraj Govi Leave a Comment

ಯಲ್ಲಾಪುರ : ರಸ್ತೆ ಬದಿ ಕಸ ಎಸೆಯುತ್ತಿರುವ ದುರುಳರು ಹೆಚ್ಚಾಗಿದ್ರಿಂದ ಪಟ್ಟಣದಲ್ಲಿ ಅಲ್ಲಲ್ಲಿ ಕಸದ ತೊಟ್ಟಿಗಳನ್ನು ಇಡುವಂತೆ ಸಾರ್ವಜನಿಕರು ಅಗ್ರಹ್ ಸಿದ್ದಾರೆ. ಅಲ್ಲಲ್ಲಿ ಕಸದ ರಾಶಿಯಿಂದ ಪಟ್ಟಣದ ಸೌಂದರ್ಯವನ್ನಷ್ಟೇ ಹಾಳುಮಾಡುತ್ತಿರುವುದಲ್ಲದೆ, ರೋಗ ಹಾಗೂ ರುಜಿನ ಹರಡುವಂತಾಗಿ ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.

IMG 20220202 WA0243


ಚಿಕ್ಕವಾದರೂ ಚೊಕ್ಕ ಪಟ್ಟಣವೆಂಬ ಬಿರುದನ್ನು ಪಡೆಯಬಹುದಾದ ಎಲ್ಲ ಗುಣಲಕ್ಷಣಗಳನ್ನು ಯಲ್ಲಾಪುರ ಹೊಂದಿದೆಯಾದರೂ, ಯಲ್ಲಾಪುರದ ಸ್ವಚ್ಛತೆಯಲ್ಲಿ ಎಡವಿದಂತೆ ಕಾಣುತ್ತಿದೆ. ಅವುಗಳಲ್ಲಿ ಮುಖ್ಯವಾಗಿ ಘನತ್ಯಾಜ್ಯ ವಸ್ತುಗಳ ನಿರ್ವಹಣೆ. ಪಂಚಾಯಿತಿಯಿಂದ ಪ್ರತಿನಿತ್ಯ ಕಸ ಒಯ್ಯುವ ವಾಹನಗಳು ಮನೆ ಮನೆಗೆ ತೆರಳುತ್ತಿದ್ದರೂ ಸಹ, ಸಾರ್ವಜನಿಕರು ಅದಕ್ಕೆ ಸರಿಯಾಗಿ ಹೊಂದಿಕೊಳ್ಳದಿರುವುದು ಅಥವಾ ಕೆಲವೊಮ್ಮೆ ವಾಹನಗಳು ಬಂರುವ ಸಮಯಕ್ಕೆ ಮನೆಯಲ್ಲಿಯ ಜನ ಹೊರಹೋಗಿರುವುದು ತೊಂದರೆಯಾಗಿ ಪರಿಣಮಿಸಿದೆ. ಇದರಿಂದ ಜನ ರಸ್ತೆ ಕೂಡುವ ಜಾಗಗಳಲ್ಲಿ, ಚರಂಡಿಗಳ ಪಕ್ಕದಲ್ಲಿ, ಪಟ್ಟಣದ ಹೊರಭಾಗಗಳಲ್ಲಿ ಬೇಕಾಬಿಟ್ಟಿ ಕಸವನ್ನು ಎಸೆಯುತ್ತಿದ್ದು, ಇದಕ್ಕೆ ಪಟ್ಟಣದಲ್ಲೆಲ್ಲಿಯೂ ಕಸದ ತೊಟ್ಟಿಗಳನ್ನು ಅಳವಡಿಸದಿರುವುದೇ ಪ್ರಮುಖ ಕಾರಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಕೆಲ ವರ್ಷಗಳ ಹಿಂದೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ, ದೊಡ್ಡ ದೊಡ್ಡ ಕಸದ ತೊಟ್ಟಿಗಳನ್ನು ಇಡುತ್ತಿದ್ದರು. ಜನತೆ ತಮಗನುಕೂಲವಾದಾಗ ಅದರಲ್ಲಿ ಕಸವನ್ನೆಸೆದು ತೆರಳುತ್ತಿದ್ದರು. . ಅದರ ಬದಲಾಗಿ ತ್ಯಾಜ್ಯ ಸಂಗ್ರಹಿಸುವ ವಾಹನಗಳಲ್ಲಿಯೇ ಕಸ ವಿಂಗಡಿಸಿ ನೀಡುವಂತೆ ಪಟ್ಟಣ ಪಂಚಾಯತದಿಂದ ಸಾರ್ವಜನಿಕರಿಗೆ ತಿಳಿಸಲಾಯಿತು. ಆದರೆ ಇದಕ್ಕೆ ಹೊಂದಿಕೊಳ್ಳದ ಕೆಲ ಜನರು ಈಗಲೂ ಸಹ ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದಾರೆ.

IMG 20220202 WA0242 1

ಅಷ್ಟೇ ಅಲ್ಲದೆ ಪಟ್ಟಣದ ವೆಂಕಟ್ರಮಣ ಮಠದ ಹಿಂಭಾಗದಲ್ಲಿ ಮಠದಲ್ಲಿ ನಡೆಯುವ ಕಾರ್ಯಕ್ರಮಗಳ ನಂತರ, ಬಸ್ ನಿಲ್ದಾಣ ದಲ್ಲಿ ಕಸದ ತೊಟ್ಟಿಯೇ ಇಲ್ಲ, ಬೆಲ್‌ ರಸ್ತೆಯಲ್ಲಿ ನಡೆಯುವ ವಾರದ ಸಂತೆಯ ನಂತರ ಭಾರಿ ಪ್ರಮಾಣದಲ್ಲಿ ಕಸದ ರಾಶಿ ಕಂಡುಬರುತ್ತವೆ. ಅಲ್ಲಲ್ಲಿ ಕಸದ ತೊಟ್ಟಿಗಳನ್ನು ಅಳವಡಿಸಿ ಅಲ್ಲಿಯೇ ಕಸವನ್ನು ಹಾಕುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆದಷ್ಟು ಬೇಗ ಕಸದ ತೊಟ್ಟಿಗಳನ್ನು ಅಳವಡಿಸಿಅವುಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು.ಪಟ್ಟಣದ ಸ್ವಚ್ಚತೆ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಕ್ರಮ ವಹಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Yellapur

Explore More:

About Jayaraj Govi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...