ಯಲ್ಲಾಪುರ : ಪೋಲಿಸರು ಹೆಚ್ಚು ಒಳ್ಳೆ ಯವರಾದರೂ ,ಕೆಟ್ಟವರಾದರೂ ತೊಂದರೆ ನೇ ಅವರಿಗೆ , ಪೊಲೀಸ್ ಇಲಾಖೆ ಯಲ್ಲಿ ಕಾರ್ಯ ನಿರ್ವಹಿಸುವದೆಂದರೆ ಸವಾಲಿನ ಕೆಲಸವೇ ಆಗಿದೆ. ಅದರ ನಡುವೆಯೂ ಪೋಲಿಸ ಇಲಾಖೆ ಹಾಗೂ ಜನ ಸಾಮಾನ್ಯರ ನಡುವೆ ಅನ್ಯೋನ್ಯತೆಯ ಭಾವ ಮೂಡಿಸುವ ಸದುದ್ದೇಶದಿಂದ ಸಾರ್ವಜನಿಕರ ನೆರವಿನಿಂದ ನವೀಕರಿಸಲಾಗಿರುವ ಯಲ್ಲಾಪುರ ಪೊಲೀಸ್ ಠಾಣೆಯು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ ಹೇಳಿದರು
ಅವರು ಪಟ್ಟಣದ ಪೊಲೀಸ್ ಠಾಣೆಯ ನವೀಕೃತ ಆವರಣ ಹಾಗೂ ಹಿರಿಯ ನಾಗರಿಕರ, ಮಹಿಳಾ-ಮಕ್ಕಳ ಸಹಾಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ ಅವರು, ಪೊಲೀಸ್ರನ್ನು ಕಂಡಲ್ಲಿ ಭ್ರಷ್ಟರಿಗೆ ಭಯ ಮೂಡಬೇಕು. ಅಂದಲ್ಲಿ ಮಾತ್ರ ಸಮಾಜದ ಶಾಂತಿ ಸ್ಥಾಪನೆ ಹಾಗೂ ರಕ್ಷಣೆ ಸಾಧ್ಯ. ಶಿಷ್ಠರ ರಕ್ಷಣೆ, ದುಷ್ಟರಿಗೆ ಶಿಕ್ಷೆ ನೀಡುವ ಕಾರ್ಯವನ್ನು ಪೊಲೀಸ್ ಇಲಾಖೆಯು ಸಮರ್ಥವಾಗಿ ನಿರ್ವಹಿಸುತ್ತ ಬಂದಿದೆ. ಸದಾ ಒತ್ತಡದ ಜೀವನ ಶೈಲಿಯಲ್ಲಿರುವ ಪೊಲೀಸ್ ಸಿಬ್ಬಂದಿಗಳಿಗೆ ಇಂತಹ ಸುಂದರ ಠಾಣೆಯ ಆವರಣವು ಮಾನಸಿಕ ನೆಮ್ಮದಿಯನ್ನು ನೀಡುತ್ತವೆ. ಸಿಪಿಐ ಸುರೇಶ ಯಳ್ಳೂರ್ ಅವರ ಈ ಉತ್ತಮ ಕಾರ್ಯಕ್ಕೆ ನಮ್ಮ ಇಲಾಖೆಯ ಪರವಾಗಿ, ಸಮಸ್ತ ಯಲ್ಲಾಪುರ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಸಾರ್ವಜನಿಕರ ಸಹಕಾರದಿಂದ ಇಂತಹ ಇನ್ನಷ್ಟು ಅಭಿವೃದ್ಧಿ ಕಾರ್ಯಗಳ ನಮ್ಮ ಕ್ಷೇತ್ರದಲ್ಲಾಗಲಿ ಎಂದರು.
ರಾಜ್ಯ ವಿಕೇಂದ್ರೀಕರಣ ಯೋಜನೆ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಹಿಂದೆ ಪೊಲೀಸ್ ಠಾಣೆಯ ಮೆಟ್ಟಿಲೇರಲು ಹೆದರುವಂತಿತ್ತು. ಆದರೆ ಇಂದಿನ ಈ ಜನಸ್ನೇಹಿ ಠಾಣೆಯ ಚಿತ್ರಣವನ್ನು ನೋಡಿದರೆ, ಆ ಭಯವನ್ನು ಹೋಗಲಾಡಿಸಿ ವಿಹಾರಕ್ಕಾಗಿ ಯೂ ಪೋಲಿಸ ಸ್ಠೇಶನ ಗೆ ಹೋಗಿಬರುವ ಹಾಗೆ ಮಾಡಿದ್ದು ವಿಶೇಷವಾಗಿದೆ. ಸುಂದರ ಚಿತ್ರಗಳು ಜಾಗೃತಿ ಮೂಡಿಸುವದರೊಂದಿಗೆ ನೋಡುಗರ ಕಣ್ಮನ ಸೆಳೆಯುವಂತೆ ಮಾಡಿದೆ. ಎಂದರು.
ಡಿವೈಎಸ್ಪಿ ರವಿ ನಾಯ್ಕ ಮಾತನಾಡಿ, ಈಗ ಠಾಣೆಯಲ್ಲಾಗಿರುವ ಪರಿವರ್ತನೆಯನ್ನು ನೋಡಿದಾಗ ಠಾಣೆಯ ಎಲ್ಲ ಅಧಿಕಾರಿಗಳ ಪಾಲ್ಗೊಳ್ಳುವಿಕೆ ಸಾಬೀತಾಗುತ್ತದೆ. ಠಾಣೆಯ ಇಂದಿನ ಸ್ಥಿತಿ ಜನತೆ ನಿರ್ಭೀತಿಯಿಂದ ಠಾಣೆಗಳಿಗೆ ಬರುವಂತೆ ಮಾಡುತ್ತದೆ. ಸಿಬ್ಬಂದಿಗಳ ಕಾರ್ಯ ಕ್ಷಮತೆಯನ್ನೂ ಸಹ ಹೆಚ್ಚಿಸಲಿದೆ ಎಂದರು.
ವಾ.ಕ.ರಾ.ರ.ಸಾ. ಸಂಸ್ಥೆಯ ಅಧ್ಯಕ್ಷ ವಿ.ಎಸ್. ಪಾಟೀಲ್ ಮಾತನಾಡಿ, ಪೋಲಿಸ ಇಲಾಖೆ ಕೆಲವರ ಅಧಿಕಾರರೂಢ ಆಡಳಿತದ ಕೈಗೊಂಬೆ ಎಂಬAತಾಗದೇ ಬಡವರಪರ ನ್ಯಾಯ ದೊರಕಿಸಿಕೊಡುವಂತಾಗಬೇಕು. ಇಂತಹ ಸಕಲ ಸೌಲಭ್ಯವುಳ್ಳ ಪೋಲಿಸ್ ಠಾಣೆ ಜನಸಾಮಾನ್ಯರ ಪರವಾದಾಗ ಮಾತ್ರ ಅದರ ಸಾರ್ಥಕತೆಯಾದಂತಾಗುತ್ತದೆ. ಯಲ್ಲಾಪುರದ ಜನತೆ ಠಾಣೆಯ ಅಭಿವೃದ್ಧಿಗೆ ಕೊಡುಗೆ ನೀಡುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ಸಿಪಿಐ ಸುರೇಶ ಯಳ್ಳೂರ್ .ಮಾತನಾಡಿ ಜನತೆ ನಿರ್ಭೀತರಾಗಿ, ನೇರವಾಗಿ ಠಾಣೆಗೆ ಬಂದು ತಮ್ಮ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳುವAತಾಗಬೇಕು. ಸಣ್ಣ ಮಕ್ಕಳಿಗೆ ಅಂಗನವಾಡಿÀ ಕೇಂದ್ರದAತೆ, ವಿದ್ಯಾರ್ಥಿಗಳಿಗೆ ಮಾಹಿತಿ ಆಗರ , ನೊಂದವರಿಗೆ ಸಾಂತ್ವನ ನೀಡುವ ಉದ್ಧೇಶದಿಂದ ಠಾಣೆಯನ್ನು ನವೀಕರಿಸಲಾಗಿದೆ ಮುಂದಿನ ದಿನಗಳಲ್ಲಿ ಇಲಾಖೆಯ ಸಹಯೋಗದೊಂದಿಗೆ ಕರಾಟೆ ಕುಂಗಪೂ ನಂತಹ ಸಮರಕಲೆ ತರಭೆತಿ ಕೇಂದ್ರವನ್ನು ಆರಂಭಿಸಲಾಗುವದು ಎಂದರು.
ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್, ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್, ಮುಖ್ಯಾಧಿಕಾರಿ ಸಂಗನಬಸಯ್ಯ, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ ,ಉದ್ಯಮಿ ಬಾಲಕೃಷ್ಣ ನಾಯಕ, ಪ್ರಮುಖರಾದ ವಿಜಯ ಮಿರಾಶಿ, ಮುರುಳಿ ಹೆಗಡೆ, ಎಮ್.ಜಿ. ಭಟ್ಟ ಸಂಕದಗುAಡಿ, ಪ.ಪಂ. ಮಾಜಿ ಅಧ್ಯಕ್ಷ ಶಿರೀಶ್ ಪ್ರಭು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರಫಿಕಾ ಹಳ್ಳೂರ್ ವೇದಿಕೆಯಲ್ಲಿದ್ದರು.
ಪೋಲಿಸ ಸಿಬ್ಬಂದಿ ಮಹಾಂತೇಶ ಕಡಪಟ್ಟಿ ಪ್ರಾರ್ಥಿಸಿದರು. ಪಿಎಸ್ ಐ ಮಂಜುನಾಥ ಗೌಡರ ಸ್ವಾಗತಿಸಿದರು. ಪಿಎಸ್ ಐ ಪ್ರಿಯಾಂಕಾ ನ್ಯಾಮಗೌಡ ವಂದಿಸಿದರು.ಕೇಬಲ್ ನಾಗೇಶ ನಿರ್ವಹಿಸಿದರು
Leave a Comment