
ಯಲ್ಲಾಪುರ ; ಪಟ್ಟಣದ ಸಬಗೇರಿಯಲ್ಲಿ ಆರೇಳು ಜನ ಅಪರಿಚಿತ ವ್ಯಕ್ತಿಗಳು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮೇಲೆ ಹಲ್ಲೆ ಮಾಡಿ ಮೊಬೈಲ್ ದೋಚಿದ ಘಟನೆಗೆ ಸಂಬAಧಿಸಿದAತೆ ಪೊಲೀಸರು ಅರೋಪಿತರನ್ನು ಬಂಧಿಸಿ ತನಿಖೆ ಕೈಗೊಂಡಾಗ ಆರೋಪಿತರು ಉದ್ಯಮಿಯ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ. ಆರೋಪಿತರನ್ನುಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಲಾಗಿದೆ.
ಫೆ.೧೧ರ ರಾತ್ರಿ ೮ ಗಂಟೆಯ ಸುಮಾರು ಐದಾರು ಜನ ಉದ್ಯಮಿ ಸುರೇಶ ಗಣಪತಿ ರೇವಣಕರ ಎಂಬುವವರ ಸಬಗೇರಿಯ ಮನೆÀಗೆ ನುಗ್ಗಿ ಅವರ ಮೇಲೆ ಹಲ್ಲೆ ಮಾಡಿ ಅವರಿಂದ ೧೦,೦೦೦ ರೂ ಮೊಬೈಲ್ನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿದ್ದರು. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಫೆ.೧೨ರಂದು ಸುರೇಶ ರೇವಣಕರ ದೂರು ದಾಖಲಿಸಿದ್ದರು. ಪೊಲೀಸ್ ಅಧೀಕ್ಷಕರಾದ ಸುಮನ್ ಪನ್ನೇಕರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಬದರಿನಾಥ, ಶಿರಸಿ ಪೊಲೀಸ ಉಪಾಧೀಕ್ಷಕರಾದ ರವಿ ನಾಯ್ಕ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿತರಾದ ಯಲ್ಲಾಪುರ ನಂದೊಳ್ಳಿ ಹೊಸತೋಟ ನಿವಾಸಿ ಮಹಾಬಲೇಶ್ವರ ತಂದೆ ಗಣಪತಿ ಭಟ್ಟ (ಎಂ.ಜಿ ಭಟ್ಟ), ಹಳಿಯಾಳದ ಕಸಬಾಗಲ್ಲಿ ನಿವಾಸಿ ವಿನೋದ ರಾಮಚಂದ್ರ ಕಾಮತ, ಬೆಳಗಾವಿ ಜಿಲ್ಲೆಯವರಾದ ಖಾನಾಪುರ ನ್ಯೂ ನಾಯ್ಕನಗಲ್ಲಿ ಯ ಗೋವಿಂದ ಶಾಂತಾರಾಮ ಸುತಾರ, ಖಾನಾಪುರ ಯಡೋಗಾ ದ ನಾಮದೇವ ಶಿವಾಜಿ ಹಲಗೇಕರ, , ವಡಗಾಂವ ದ ತಗ್ಗಿನಗಲ್ಲಿ ಯ ವಡ್ಡರಕಾಲೋನಿ ನಿವಾಸಿಗಳಾದ ಸುಶಾಂತ ಅಶೋಕ ಖಾನಾಪುರಿ, ಶ್ರೀಧರ ಸುರೇಶ ಉಪ್ಪರಿ, ರಾಘವೇಂದ್ರ ಯಾನೆ ರಾಘು ಅಶೋಕ ಸಿಣ್ಣೂರು, ಮಂಜುನಾಥ ಗಂಗಾರಾಮ ದಂಡಗಲ್ ಇವರನ್ನು ಬಂಧಿಸಿ ವಿಚಾರಣೆ ನಡೆಸಿದ್ದು ವಿಚಾರಣೆ ವೇಳೆ ಆರೋಪಿತರು ಉದ್ಯಮಿ ಸುರೇಶ ರೇವಣಕರ ಹತ್ಯೆಗೆ ಸಂಚು ರೂಪಿಸಿದ ಬಗ್ಗೆ ತನಿಖೆಯಿಂದ ತಿಳಿದುಬಂದಿರುತ್ತದೆ. ಆರೋಪಿತರಿಂದ ಕೃತ್ಯಕ್ಕೆ ಉಪಯೋಗಿಸಿದ ೨ ಮೋಟಾರ ಸೈಕಲ್, ಒಂದು ಕಾರು, ೯ ಮೊಬೈಲ್ಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಯಲ್ಲಾಪುರ ಸಿಪಿಐ ಸುರೇಶ ಯಳ್ಳೂರು ನೇತೃತ್ವದಲ್ಲಿ ಪಿಎಸ್ಐ ಮಂಜುನಾಥ ಗೌಡರ್, ಪಿಎಸ್ಐ ಪ್ರಿಯಾಂಕಾ ನ್ಯಾಮಗೌಡ, ಹಾಗೂ ಸಿಬ್ಬಂದಿಯವರಾದ, ಬಸವರಾಜ ಹಗರಿ, ಮಹ್ಮದ ಶಫೀ, ನಾಗಪ್ಪ ಲಮಾಣಿ, ಗಜಾನನ ನಾಯ್ಕ, ಬಸವರಾಜ ಡಿ.ಕೆ. ವಿನೋದಕುಮಾರ, ನಂದೀಶ, ಚಿದಾನಂದ, ವಿಜಯ, ಚನ್ನಕೇಶವ, ಪ್ರವೀಣ ಪೂಜಾರ, ಮಹಾಂತೇಶ ಕಡಪಟ್ಟಿ, ಕೃಷ್ಣ ಯಾಜಿ, ಗುರು ಮರಾಠಿ ಹಾಗೂ ಶೋಭಾ ನಾಯ್ಕ ಇವರು ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
Leave a Comment