ಯಲ್ಲಾಪುರ: ಸಮುದಾಯದ ಸಂಸ್ಥೆಗಳ ಮೂಲಕ ಸ್ವ – ಉದ್ಯೋಗ ಉಪಯೋಗವೂ ಹೆಚ್ಚಾಗುತ್ತಿದ್ದು, ಈ ಮೂಲಕ ಗ್ರಾಮೀಣ ಜನರ ಜೀವನ ಮಟ್ಟದಲ್ಲಿ ಗಣನೀಯ ಅಭಿವೃದ್ಧಿ ಆಗುತ್ತಿದೆ.ಎಂದು ಸಹಾಯಕ ನರ್ದೇಶಕ ರುದ್ರಯ್ಯ ಹಿರೇಮಠ ಹೇಳಿದರು
. ಪಟ್ಟಣದ ತಾಲೂಕಾ ಪಂಚಾಯತ ಆವರಣದಲ್ಲಿ ರಾಜ್ಯ ಗ್ರಾಮೀಣ ಜೀವನೋಪಾಯ ಸಂಸ್ಥೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸಹಯೋಗದಲ್ಲಿ ಆಯೋಜಿಸಿದ್ದ ಸಂಜೀವಿನಿ ಮಾಸಿಕ ಸಂತೆಯಲ್ಲಿ ಮಾರಾಟ ಮತ್ತು ಪ್ರದರ್ಶನ ನ ಉದ್ಘಾಟಿಸಿ ಸ್ವಸಹಾಯ ಸಂಘಗಳ ಭಾಗವಹಿಸುವಿಕೆಯ ಮಹತ್ವದ ಕುರಿತು ಮಾತನಾಡಿದರು.ನಂದೋಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಹಾಗೂ ಸ್ವ ಸಹಾಯ ಸಂಘದ ಸದಸ್ಯೆ ನಾಗಶ್ರೀ ಭಾಗವತ್ ಮಾತನಾಡಿ ಮಾಸಿಕ ಸಂಜೀವಿನಿ ಮಾಸಿಕ ಸಂತೆಯ ಪ್ರದರ್ಶನ್ ಮತ್ತು ಮಾರಾಟದಿಂದ ಲಾಭದಾಯಕ ಆದಾಯ ಲಭ್ಯವಾಗುವುದರಿ೦ದ ಆರ್ಥಿಕಾಭಿ ವೃದ್ಧಿಗೆ ಸಹಕಾರಿ ಆಗಿದೆ.ಎಂದು ಅನಿಸಿಕೆ ವ್ಯಕ್ತ ಪಡಿಸಿದರು.
ಸಂಜೀವಿನಿ ಮಾಸಿಕ ಸಂತೆಯಲ್ಲಿ ವಿವಿಧ ಸ್ವ ಸಹಾಯ ಒಕ್ಕೂಟದ ಮಹಿಳೆಯರಿಂದ ಮನೆಯಲ್ಲಿ ತಯಾರಿಸಿದ ವಿವಿಧ ಖಾದ್ಯ ಪದರ್ಥಗಳು, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಹೋಳಿಗೆ, ಗುಡಿಕೈಗಾರಿಕೆಯಿಂದ ಮಾಡಿದ ಬಳೆಗಳು ಹೆಣೆದ ಕೈ ಚೀಲಗಳು ತರಕಾರಿ ಬೆಳೆಗಳು , ಹಸು ಮತ್ತು ಎಮ್ಮೆಯ ಶುದ್ಧವಾದ ತುಪ್ಪ, ಗೆಡ್ಡೆಗೆಣಸು, ಬಗೆಬಗೆಯ ಅಲಂಕಾರಿಕ ವಸ್ತುಗಳನ್ನು ಮಾರಾಟಕ್ಕೆ ಇರಿಸಲಾಗಿತ್ತು. ತಾಲೂಕಿನ ಸುಮಾರು ೨೦ ಸ್ವಸಹಾಯ ಸಂಘಗಳು ನೊಂದಾಯಿಸಿಕೊಂಡು ಮಾಸಿಕ ಸಂತೆ. ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂರ್ಭದಲ್ಲಿ ತಾಲೂಕು ಕರ್ಯಕ್ರಮ ವ್ಯವಸ್ಥಾಪಕ ಮಂಜಣ್ಣ ಬಿ, ಕರುಣಾಕರ ನಾಯ್ಕ, ರಾಜಾರಾಮ್ ವೈದ್ಯ,ಹಾಗೂ ಎನ್.ಆರ್. ಎಲ್.ಎಮ್ ಯಲ್ಲಾಪುರ ವಿಭಾಗದ ಸಿಬ್ಬಂದಿಗಳು ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.
Leave a Comment