
ಯಲ್ಲಾಪುರ: ಪಟ್ಟಣ ಪಂಚಾಯತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ.ಪಂ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯದೊಂದಿಗೆ ನಡೆಯಿತು.
ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಆದಿತ್ಯ `ಗುಡಿಗಾರ ಹಾಗೂ ಇನ್ನಿತರ ನೂತನ 6 ಸದಸ್ಯರು ಅಧಿಕಾರ ಸ್ವೀಕರಿಸಿದರು. ನೂತನ ಅಧ್ಯಕ್ಷರಿಗೆ ನಿಕಟಪೂರ್ವ ಅಧ್ಯಕ್ಷ ಅಮಿತ ಅಂಗಡಿ, ಪ.ಪಂ ಅಧ್ಯಕ್ಷೆ ಸುನಂದಾ ದಾಸ ಮತ್ತಿತರ ಸದಸ್ಯರ ಸಮ್ಮುಖದಲ್ಲಿ ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಅಮಿತ ಅಂಗಡಿ ತನ್ನ ಅವಧಿಯಲ್ಲಿ ಸದಸ್ಯರು ಹಾಗೂ ಸಾರ್ವಜನಿಕರು ನೀಡಿದ ಸಹಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ 12 ಲಕ್ಷ ರು. ವೆಚ್ಚದಲ್ಲಿ ಅಳವಡಿಸಲಾದ 25 ವ್ಯಾಟ್ ಸಾಮರ್ಥ್ಯದ ಬೀದಿದೀಪಗಳು
ನಿಷ್ಟ್ರಯೋಜಕವೆನಿಸಿದ್ದು, ಇವುಗಳನ್ನು ತಕ್ಷಣ ಬದಲಿಸುವಂತೆ ಸದಸ್ಯರು ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದರು.
ಪಟ್ಟಣದ ವಿವಿಧೆಡೆಗಳ ಘುಟ್ಪಾತಗಳಲ್ಲಿ ಹೊಂಡ ನಿರ್ಮಾಣಗೊಂಡಿದ್ದು, ಇವುಗಳು ಸಾರ್ವಜನಿಕರ ಸಂಚಾರಕ್ಕೆ ಅಪಾಯಕರವಾಗಿವೆ. ಹೊಂಡಗಳನ್ನು ಕ್ಷಿಪ್ರ ಗತಿಯಲ್ಲಿ ದುರಸ್ಥಿಗೊಳಿಸಬೇಕೆಂದು ಸದಸ್ಯ ರಾಧಾಕೃಷ್ಣ ನಾಯ್ಕ ಸಲಹೆ ನೀಡಿದರು. ಪ.ಪಂ ಗೆ ಮೀನು ಹಾಗೂ ಮಾಂಸ ಮಾರುಕಟ್ಟೆಯಿಂದ ಮಾಸಿಕ ಸುಮಾರು 95 ಸಾವಿರ ರು. ಬಾಡಿಗೆ ದೊರಕುತ್ತಿದ್ದರೂ, ಇವುಗಳ ನಿರ್ವಹಣೆ ಸಮರ್ಪಕವಾಗಿಲ್ಲ. ತರಕಾರಿ ಮಾರುಕಟ್ಟೆಯಲ್ಲಿಯೇ ಒಣ ಮೀನು ಮಾರಾಟ ಮಾಡಲಾಗುತ್ತಿದೆ. ಇಂತವರಿಗೆ ಸೂಕ್ತ ದಂಡ ವಿಧಿಸಿ, ಎಚ್ಚರಿಸಬೇಕೆಂದು ಸದಸ್ಯರು ಆಗ್ರಹಿದರು .
ಪಟ್ಟಣಕ್ಕೆಶುದ್ಧ ಕುಡಿಯುವ ನೀರು ಒದಗಿಸಲು ಕೈಗೊಳ್ಳಬೇಕೆಂದಿರುವ ತಟ್ಟಿಹಳ್ಳ ಹಿನ್ನೀರಿನ ಸರಬರಾಜು ಯೋಜನೆಗೆ ಸುಮಾರು 91 ಕೋಟಿ .. ತಗುಲಲಿದ್ದು, ಈ ಕುರಿತು ಪರಿಷ್ಕೃತ ಅಂದಾಜು ಪತ್ರಿಕೆ ಕುರಿತಂತೆ ಅನುಮೋದನೆ ಪಡೆಯಲಾಯಿತು.
ಪಟ್ಟಣದ ವಿವಿಧೆಡೆಗಳಲ್ಲಿ ಕುಡಿಯುವ ನೀರಿನ ಸಂಗ್ರಹಕ್ಕಾಗಿ ಅಳವಡಿಸಲಾಗಿರುವ ಹಳೆಯ ನೀರಿನ ಟ್ಯಾಂಕ್ಗಳನ್ನು ಯಾವುದೇ ಕಾರಣಕ್ಕೆ ತೆರವು ಮಾಡಬಾರದು ಎಂದು ಸದಸ್ಯರು ಸೂಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ.ಪಂ ಅಧ್ಯಕ್ಷೆ ಸುನಂದಾ ದಾಸ, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಅಮಿತ ಅಂಗಡಿ, ಮುಖ್ಯಾಧಿಕಾರಿ ಸಂಗನಬಸಯ್ಯ, ಸದಸ್ಯರು ಇದ್ದರು
Leave a Comment