ಯಲ್ಲಾಪುರ : ತಾಲೂಕಿನ ಲ್ಲಿರುವ ಬುದ್ದಿಮಾಂದ್ಯ ಮತ್ತು ಮಾನಸಿಕ ಕಾಯಿಲೆವುಳ್ಳರವರನ್ನು ಬಿಟ್ಟು ಉಳಿದ ಎಲ್ಲಾ ವಿಶೇಷ ವಿಕಲಚೇತನರಿಗೆ ಜಿಲ್ಲಾ ಪಂಚಾಯತ ಅನುದಾನದಲ್ಲಿ ಸಾಧನೆ ಸಲಕರಣೆಗಳನ್ನು ನೀಡಲು ಮಾ.5 ರಂದು ಯಲ್ಲಾಪುರ ತಾಲೂಕಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಆ ದಿನದಂದು ನಡೆಯುವ ಶಿಬಿರದಲ್ಲಿ ವಿಶೇಷ ವಿಕಲಚೇತನರಿಗೆ ವಿವಿಧ ನುರಿತ ವೈದ್ಯರಿಂದ ತಪಾಸಣೆ ಹಾಗೂ ಅಗತ್ಯವುಳ್ಳವರಿಗೆ ಸಾಧನ ಸಲಕರಣೆಗಳನ್ನು ಸಿದ್ಧಪಡಿಸಲು ಅಳತೆಯನ್ನು ಪಡೆದು ತಯಾರಿಸಿಕೊಡಲಾಗುವುದು. ತಾಲೂಕಿನ ಎಲ್ಲ ಫಲಾನುಭವಿಗಳು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಹಾಗೂ ತಾಲೂಕಾ ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಲ್ಲಾಪುರ ಹಾಗೂ ಸುದ್ದಿಗಾಗಿ ಗ್ರುಪ್ ಸೇರಿ ; Yellapur news ; Join our whatsapp group
Leave a Comment