• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗ್ರಾಮಗಳಲ್ಲಿ ಜಲಮೂಲಗಳಿರುವ ಮನೆಗಳನ್ನು ಗುರುತಿಸಿ — ಸಿ ಇ ಓ ಪ್ರಿಯಾಂಗ ಎಮ್

March 4, 2022 by Jayaraj Govi Leave a Comment

IMG 20220228 WA0302

ಯಲ್ಲಾಪುರ:   ಪ್ರತಿಯೊಂದು ಗ್ರಾಮಗಳಲ್ಲಿ ಜಲಮೂಲಗಳಿರುವ ಮನೆಗಳನ್ನು ಗುರುತಿಸಿ ಅವರಿಂದ ಧೃಡಿಕರಣ ಪತ್ರವನ್ನು  ಪಿಡಿಓ ಗಳು  ಪಡೆದುಕೊಂಡು ಕಂಪೂಟರ ನಲ್ಲಿ ದಾಖಲಿಸಬೇಕು.   ಯಾವದೇ ಬಾವಿ ಬೊರವೆಲ್ ಇಲ್ಲದಿರುವ ಮನೆಗಳಿಗೆ ಜಲ ಜೀವನ ಮಿಷನ್ ಯೋಜನೆಯಡಿನೀರಿನ ಸಂಪರ್ಕ ಕಲ್ಪಿಸಲಾಗುವದು .ಈಗಾಗಲೇ ಪ್ರಕ್ರಿಯೆ ಶುರುವಾಗಿದೆ.ಎಂದು ಜಿಲ್ಲಾಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ ಎಂ ಹೇಳಿದರು.

IMG 20220228 155712 scaled

ಅವರು ಪಟ್ಟಣ ವ್ಯಾಪ್ತಿ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ನಂತರ ಇಡಗುಂದಿಯಲ್ಲಿ ಪಿಡಿಓಗಳ ಸಭೆ ನಡೆಸಿ ನಂತರ ಮಾತನಾಡಿದರು.ಇದಕ್ಕೂ ಮುನ್ನ ಪಟ್ಟಣದ ತಾಪಂ ಸಮೀಪ  ನಿರ್ಮಿಸಲಾಗುತ್ತಿರುವ ಜಿಲ್ಲಾ ಪಾಲಿಕ್ಲಿನಿಕ್ ಗೆ ಭೇಟಿ ನೀಡಿ ಕಟ್ಟಡ ನಿರ್ಮಾಣದ ಪ್ರಗತಿ ವೀಕ್ಷಿಸಿ  ಚರಂಡಿ,ಕAಪೌAಡ ಮಾರ್ಚನಲ್ಲಿ  ಪೂರ್ಣಗೊಳಿಸುವಂತೆ ಸೂಚಿಸಿದರು. ಪಶು ವೈದ್ಯ ಡಾ ಶ್ರೀನಿವಾಸ ಹಾಗೂ ಸಿಬ್ಬಂದಿಗಳಿAದ ಅಲ್ಲಿಯ ಕಾರ್ಯ ವೈಖರಿ ಕುರಿತು ಮಾಹಿತಿ ಪಡೆದುಕೊಂಡರು

IMG 20220228 WA0295

.ನAತರ  ಅಂಬೆಡ್ಕರ ಭವನದಲ್ಲಿ ಸಿದ್ದಿ ಸಮುದಾಯದವರಿಗೆ ಆಹಾರ ಧಾನ್ಯ ವಿತರಿಸುವ ಸ್ಥಳಕ್ಕೆ ತೆರಳಿ  ಫಲಾನುಭವಿಗಳಿಂದ   ಈ ಕುರಿತು  ಮಾಹಿತಿ ಪಡೆದುಕೊಂಡರು .ಎಲ್ಲಿಂದ ಆಹಾರಧಾನ್ಯ  ಸರಬರಾಜು ಆಗುತ್ತಿದೆ, ಗುಣಮಟ್ಟ ಹೇಗಿದೆ ಎಂದು ವಿಚಾರಿಸಿದರು.  ಪಟ್ಟಣದ ತರಕಾರಿ ಮಾರ್ಕೆಟ ಬಳಿ ಇರುವ ಎಲ್ ಎ ಎಮ ಪಿ ಎಸ್  ಶಾಖೆ ಗೆ ಭೇಟಿ ನೀಡಿ . ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಸರ್ಕಾರದ  ವನಧನ ಯೋಜನೆಯಡಿ ಕಿರವತ್ತಿ ಹಾಗೂ ಯಲ್ಲಾಪುರಕ್ಕೆ ತಲಾ ೧೫ ಲಕ್ಷ ರೂ ಮಂಜೂರಾಗಿದೆ.ಅದರಲ್ಲಿ ೧೦ ಲಕ್ಷ ರೂ ಬಂದಿದ್ದು ಅದರ ವಿನಿಯೋಗ ಕುರಿತು  ಮಾಹಿತಿ ಪಡೆದುಕೊಂಡರು  ಅಧ್ಯಕ್ಷ ರಾಮನಾಥ ಸಿದ್ದಿ ಮಾತನಾಡಿ  ಜೇನುತುಪ್ಪ ಶುದ್ದಿಕರಣ ಘಟಕ ಯಂತ್ರ ಕ್ಕೆ  ೨ ಲಕ್ಷ ರೂ, ಹಾಗೂ ಸಿದ್ದಿ ಮಹಿಳಾ ಒಕ್ಕೂಟದ ಸದಸ್ಯರಿಗೆ  ಜೇನು ಸಕಾಣಿಕೆ ತರಭೇತಿ ,ಅವುಗಳಿಗೆ ಬೇಕಾಗುವ ಪರಿಕರಗಳ ಕಿಟ್‌ನ್ನು ಒದಗಿಸಲಾಗುತ್ತದೆ ೩೦ ಸಂಘಗಳಿAದ .೧೩೦ ಸದಸ್ಯರಿಗೆ ತರಭೇತಿ ನೀಡಲಾಗಿದೆ .ಎಂದರು. ಜಿಪಂ ಕಾನಿ ಪ್ರಿಯಾಂಗಾ ಅವರು ಟೆಂಡರ್ ಕರೆಯದೇ ಯಂತ್ರ ಖರೀದಿಗೆ ಹೇಗೆ ಮಾಡಿದಿರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಯೋಜನೆ ಎಲ್ಲರಿಗೂ ಸರಿಯಾಗಿ ತಲುಪುವಂತೆ ಕಾರ್ಯ ನಿರ್ವಹಿಸಿ ಎಂದು ಅಲ್ಲಿದ್ದ ಅಧಿಕಾರಿಗೆ ಸೂಚಿಸಿದರು.

IMG 20220228 WA0296

ತಾಲೂಕಿನ ಉಪಳೇಶ್ವರ ವ್ಯಾಪ್ತಿಯ ಯರಕನ ಬೈಲ್ ಅರಣ್ಯ ಇಲಾಖೆಯ ನರ್ಸರಿಗೆ ಭೇಟಿ ನೀಡಿ  ಯಾವ ಯಾವ ಸಸ್ಯಗಳು ಎಷ್ಟು ಇವೆ ಎಲ್ಲೆಲ್ಲಿ ವಿತರಿಸಲಾಗುತ್ತದೆ ಎಂದು ಮಾಹಿತಿ ಪಡೆದುಕೊಂಡರು.


ಜೆಜೆಎಮ ಯೋಜನೆಯಡಿ ವೈಯಕ್ತಿಕ ಜಲಮೂಲ ಇರುವದರ ಕುರಿತು ಧೃಢಿಕರಣ ನೀಡಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ ಇದರಿಂದ ಈ ಯೋಜನೆಯ ಅನುಷ್ಠಾನ ವಿಳಂಬವಾಗುತ್ತಿದೆ—-
ಜಗದೀಶ ಕಮ್ಮಾರ ತಾಲೂಕಾ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ.

ಕಂಪ್ಲಿ ಜನತಾ ಕಾಲೋನಿಗೆ ತೆರಳಿ ಅಲ್ಲಿ ನೀರಿನ ಓವರ್ ಹೆಡ್ ಟ್ಯಾಂಕ್ ನಿಂದ ಸಮರ್ಪಕ  ನೀರು ಸರಬರಾಜು,ಸಂಪರ್ಕ ದ ಕುರಿತು ಪರಿಶೀಲಿಸಿದರು.  ಅಲ್ಲಿ ೪,೫ ದಿನಕ್ಕೆ  ಒಮ್ಮೆ ನೀರು ಬರುತ್ತದೆ ಎಂದು ಸಾರ್ವಜನಿಕರು ತಿಳಿಸಿದಾಗ ಸಿಬ್ಬಂದಿಗೆ  ಎರಡು ದಿಗಳಿಗೊಮ್ಮೆ ನೀರು ಬಿಡುವಂತೆ ಸೂಚಿಸಿದರು.ಕೂಸಾಗುಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿಯ ದುರಸ್ತಿ ಕಾಮಗಾರಿ ಪರಿಶೀಲಿಸಿ ,ಶಾಲೆಯಲ್ಲಿಯೇ ಗ್ರಾಮಪಂಚಾಯತ  ಡಿಜಿಟಲ್ ಲೈಬ್ರರಿ  ಇರುವದನ್ನು ಕಂಡು ಈರೀತಿಯಾದರೆ ಗ್ರಾಮಸ್ಥರಿಗೆ ಇದರ ಸದುಪಯೋಗವಾಗುವದಿಲ್ಲ ಅವರಿಗೆ ಲಭ್ಯವಾಗುವಂತೆ ಸಮೀಪದ ಸ್ಥಳದಲ್ಲಿ ಮಾಡಬೇಕು ಎಂದು  ಹೇಳಿದರು.  ಹೀಗೆ ವಿವಿಧ ಕಡೆಗಳಲ್ಲಿ ಖುದ್ದಾಗಿ ಭೇಟಿ ನೀಡಿ ತಾಲೂಕಾಡಳಿತದಿಂದ ಸಮಗ್ರ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ, ಪಿಡಿ ಓ ರುದ್ರಯ್ಯಾ ಹಿರೇಮಠ,ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮನೀಶ್,ಕಾರ್ಯ ನಿರ್ವಾಹಕ ಇಂಜಿನೀಯರ  ಪ್ರಕಾಶ, ದರ್ಶನ, ರಾಜೇಶ್ವರಿ ಕದಂ ,ಕಂಪ್ಲಿ ಗ್ರಾಪಂ ಅಧ್ಯಕ್ಷ ವಿನಾಯಕ ನಾಯ್ಕ, ಇಡಗುಂದಿ ಗ್ರಾಪಂ ಅಧ್ಯಕ್ಷೆ ನಾಗವೇಣಿ ಸಿದ್ದಿ, ಮುಂತಾದವರು ಇದ್ದರು.

ಯಲ್ಲಾಪುರ     ಹಾಗೂ ಸುದ್ದಿಗಾಗಿ ಗ್ರುಪ್ ಸೇರಿ  ; Yellapur news ;  Join our whatsapp group

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Other, Yellapur

Explore More:

About Jayaraj Govi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...