ಯಲ್ಲಾಪುರ:ಪಂಚರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿನ ಬಿಜೆಪಿ ಪಕ್ಷ ಗೆಲವು ಈಗಿನ ಪರಿಸ್ಥಿತಿಯಲ್ಲಿ ಮಹತ್ವತೆ ಪಡೆದುಕೊಂಡಿದೆ. ಭಾರತದಲ್ಲಿ ಹಿಂದೂಗಳು ಜಾಗೃತರಾಗಿದ್ದಾರೆ ಎಂಬ ಸಂದೇ± Àಮುಟ್ಟಿಸುವಲ್ಲಿ ಸಫಲವಾಗಿದೆ.ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾ ದಾಸ್ ಹೇಳಿದರು.
ಅವರು ಗುರುವಾರ ಪಂಚ ರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಸಾಧಿಸಿದ್ದರಿಂದ ಬಿಜೆಪಿ ಕಾರ್ಯಕರ್ತರಿಂದ ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ನಂತರ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕಾ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವಕರ್ ಹಿರಿಯ ಮುಖಂಡ ರಾಮು ನಾಯ್ಕ ಮಾತನಾಡಿ ಉತ್ತರ ಪ್ರದೇಶದಲ್ಲಿ ಉತ್ತಮ ನಾಯಕತ್ವ ವನ್ನು ನೋಡಿದ್ದ ಜನತೆ ದೇಶದ ಸುಭದ್ರ ಭವಿಷ್ಯವಿರುವದಾದರೆ ಅದು ಯೋಗಿಜಿ ಹಾಗೂ ಮೋದಿಜಿಯವರಿಂದ ಮಾತ್ರ ಎಂದು ಅರಿತು ಬಿಜೆಪಿಯ ವಿಜಯ ಪತಾಕೆಯನ್ನು ಹಾರಿಸಿದ್ದಾರೆ ಎಂದರು. ಪಟ್ಟಣ ಪಂಚಾಯತ ಉಪಾಧ್ಯಕ್ಷೆ ಶ್ಯಾಮಿಲಿ ಪಾಠಣಕರ,ಡಾ ರವಿಭಟ್ಟ ಬರಗದ್ದೆ ಮಾತನಾಡಿದರು. . ಈ ಸಂದರ್ಭದಲ್ಲಿ ಜಿಲ್ಲಾ ಯುಮೊರ್ಚಾ ಉಪಾದ್ಯಕ್ಷ ಸೋಮೆಶ್ವರ ನಾಯ್ಕ, ಅಲ್ಪ ಸಂಖ್ಯಾತ ಸಮಿತಿಯ ಅಧ್ಯಕ್ಷ ಬಾಬಾ ಸಾಬ ಅಲನ್, ತಾಲೂಕಾಮೊರ್ಚಾ ಅಧ್ಯಕ್ಷ ಪ್ರದೀಪ ಯಲ್ಲಾಪೂರಕರ , ರವಿ ಪಾಠಣಕರ ,ಶ್ರೀನಿವಾಸ ಗಾಂವಕರ, ವಿನೋದ ಬಾಂದೇಕರ ,ಗೋಪಾಲಕೃಷ್ಣ ಕೈಶೆಟ್ಟಿಮನೆ ಮುಂತಾದವರು ಇದ್ದರು.ಪುಟ್ಟ ಬಾಲಕ ಗ್ಯಾನ ನಾಯ್ಡು ಯೋಗಿಜೀ ಅವರ ವೇಷಧರಿಸಿ ಮೆರವಣಿಗೆಯಲ್ಲಿಕಂಡು ಬಂದಿದ್ದು ವಿಶೇಷವಾಗಿ ಗಮನ ಸೆಳೆಯಿತು
Leave a Comment