ಯಲ್ಲಾಪುರ : ಪಟ್ಟಣದ ಗ್ರಾಮದೇವಿ ದೇವಾಲಯದಲ್ಲಿ ಎರಡು ದಿನಗಳ ಕಾಲ ವಾರ್ಷಿಕ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿAದ ನಡೆಯಿತು.
ಗುರುವಾರದಂದು ಪಂಚಗವ್ಯ ಹವನ, ಪ್ರಧಾನ ಸಂಕಲ್ಪ ಗಣಪತಿ ಪೂಜೆ, ಕ್ಷೇತ್ರಪಾಲಪ್ರಾರ್ಥನೆ,ಪುಣ್ಯಾಹ ವಾಚನ, ಸಪ್ತಶತಿ ಪಾರಾಯಣ, .ಮಂಡಲ ದರ್ಶನ, ಕಲಶಸ್ಥಾಪನೆ, ಕಲೋಕ್ತ ಪೂಜೆ, ರಾಜೋಪಚಾರ ,ಯೋಗಿನಿ ಪೂಜೆ ನಡೆಯಿತು. ಸುಬ್ರಮಣ್ಯ ಭಟ್ ಕೊಂಕಣ ಕೊಪ್ಪ ಅವರ ಪೌರೋಹಿತ್ಯದಲ್ಲಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಭಟ್ಟ ಯಜಮಾನತ್ವದಲ್ಲಿ ಶುಕ್ರವಾರ ನವಚಂಡಿ ಹವನ ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ , ಮಹಿಳೆಯರಿಂದ ಅರಿಷಿಣ ಕುಂಕುಮ ಕಾರ್ಯಕ್ರಮ ನಡೆಯಿತು.
ಸಾವಿರಾರು ಜನಭಕ್ತರು ಆಗಮಿಸಿ ಹಣ್ಣು ಕಾಯಿ ಉಡಿ ಸೇವೆ ಸಲ್ಲಿಸಿ ವಿಶೇಷ ಪೂಜೆ ಸಲ್ಲಿಸಿದರು.. ಗ್ರಾಮದೇವಿ ದೇವಸ್ಥಾನ ಹಾಗೂ ದೇವಾಲಯಕ್ಕೆ ತೆರಳುವ ಮಾರ್ಗಗಳ ಇಕ್ಕೆಲಗಳಲ್ಲಿ ಆಕರ್ಷಕ ವಿದ್ಯುದ್ದೀಪಾಲಂಕಾರದಿAದ ಕಣ್ಮನ ಸೆಳೆಯುತ್ತಿದ್ದು
,ಜನಸಾಗರ ಗ್ರಾಮದೇವಿ ಜಾತ್ರೆ ಯನ್ನು ನೆನಪಿಸುವಂತಿತ್ತು. ಪಟ್ಟಣ ಪಂಚಾಯತಿ ಹಾಗೂ ಪೋಲಿಸ ಇಲಾಖೆಯಿಂದ ಪಟ್ಟಣವ್ಯಾಪ್ತಿ ಅಲ್ಲಲ್ಲಿ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು.
Leave a Comment