ಹಾಸನ: ನಗರದ ಉದಯಗಿರಿ ಬಡಾವಣೆ ಆರ್ಆರ್ ಬಾರ್ ಹಿಂಭಾಗದ ವಾಸಿ ಅಂಬರೀಷ್ ಎಂಬುವರು ಆನ್ಲೈನ್ ವ್ಯವಹಾರ ನಡೆಸುತ್ತಿದ್ದು, ಅವರೊಂದಿಗೆ ಬೆಂಗಳೂರಿನ ಇನ್ನಿತರರೂ ಸೇರಿಕೊಂಡಿದ್ದರು.
ಆನ್ಲೈನ್ ವಸೂಲಿದಾರರಾದ ಹಲವು ವ್ಯಕ್ತಿಗಳು ಕಾನೂನುಬಾಹಿರ ಹಣಕಾಸಿನ ವ್ಯವಹಾರ ನಡೆಸುತ್ತಿದ್ದು, ಕೊಡಬೇಕಾದ ಹಣವನ್ನು ಹಿಂದಿರುಗಿಸಿದ್ದರೂ ಸಹ ಜೊತೆಯಲ್ಲಿ ಕೆಲಸ ಮಾಡುತ್ತಿದ್ದವರು ಹಣ ಕೊಡುವಂತೆ ಆಗಿಂದಾಗ್ಗೆ ಪೀಡಿಸುತ್ತಿದ್ದ ಕಾರಣ ಹಾಗೂ ಅಂಬರೀಷ್ ಪತ್ನಿ ಅಮಿತ ಅವರೂ ಸಹ ಅಶ್ಲೀಲ ಪದಗಳನ್ನು ಉಪಯೋಗಿಸಿ ಸಾಯುವಂತೆ ಪ್ರಚೋದನೆ ನೀಡಿದ್ದರಿಂದ ಅಂಬರೀಷ್ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೊದಲು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸ್ಥಳಕ್ಕೆ ಪಿಎಸ್ಐ ಪುನೀತ್ ಭೇಟಿ ನೀಡಿ ತನಿಖೆ ಕೈಗೊಂಡರು.
Leave a Comment