ಹೊನ್ನಾವರ . ಸರಕಾರಿ ಸ್ವಾಮ್ಯ ಪ್ರತಿಷ್ಠಿತÀ ಸಂಸ್ಥೆಯಲ್ಲಿ ಒಂದಾದ ನ್ಯಾಶನಲ್ ಇನ್ಸೂರೆನ್ಸ್ ಕಂಪನಿಯಲ್ಲಿ ಸಿನಿಯರ್ ಸ್ಟಾರ್ಎಡ್ವೈಸರ್ರಾದ ಸಿ.ಎಮ್.ಡಿ ಕ್ಲಬ್ ಸದಸ್ಯರಾದ ದಿನೇಶ ಕಾಮತರನ್ನು ಇತ್ತೀಚೆಗೆ ಹೈದರಾಬಾದಿನಲ್ಲಿ ನಡೆದ ರಾಷ್ಟ್ರ ಮಟ್ಟದ ಪ್ರತಿನಿಧಿಗಳ ಸಮ್ಮೇಳನದಲ್ಲಿ ವಿಮಾ ಕಂಪನಿಯ ಸಿ.ಎಂ.ಡಿ ಆಗಿರುವ ತಜಿಂದರ ಮೂಖರ್ಜಿ ಹಾಗೂ ಜನರಲ್ ಮೇನೆಜರರಾಗಿರುವ ರವಿಯವರು ಅದ್ದೂರಿಯಿಂದ ಸನ್ಮಾನಿಸಿದರು.
2017-18 ನೇ ಸಾಲಿನ ಹಣಕಾಸು ವರ್ಷದಲ್ಲಿ ಹೆಚ್ಚಿನ ವ್ಯವಹಾರ ಮಾಡಿದ ಕುರಿತು ಅಲ್ಲದೇ ಪಾಲಿಸಿ ನವೀಕರಣ, ಕ್ಷೇಮ ಪರಿಹಾರವನ್ನೆಲ್ಲಾ ಪರಿಗಣ ಸಿ ಈ ಗೌರವವನ್ನು ನೀಡಲಾಯಿತು.
ರಾಷ್ಟ್ರಮಟ್ಟದಲ್ಲಿ 80 ಜನರಲ್ಲಿ, ನಮ್ಮ ರಾಜ್ಯದ ಸನ್ಮಾನಿತರಾದ ಮೂವರಲ್ಲಿ ಹೆಚ್ಚಿನ ಶ್ರೇಯಾಂಕವನ್ನು ಪಡೆದವರು ಇವರು ಎನ್ನುವುದು ವಿಶೇಷ. ಈ ಹಿಂದಿನ ವರ್ಷ ಚಂಡಿಘಡದಲ್ಲಿ ನಡೆದ ರಾಷ್ಟ್ರಮಟ್ಟದಲ್ಲಿ ಸಹ ಇವರನ್ನು ಸನ್ಮಾನಿಸಲಾಗಿತ್ತು.
ರಾಷ್ಟ್ರಮಟ್ಟದ ಪ್ರತಿನಿಧಿಗಳ ಸಮ್ಮೇಳನದ ಪೂರ್ವದಲ್ಲಿ ಗೋವಾದಲ್ಲಿ ನಡೆದ ರಾಜ್ಯಮಟ್ಟದ ಸಮ್ಮೇಳನದಲ್ಲಿ ಇವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.
ತಮ್ಮ ಸಾಧನೆಗೆ ಎಲ್ಲಾ ಗ್ರಾಹಕರ ಹಾಗೂ ಶಾಖಾ ವ್ಯವಸ್ಥಾಪಕರಾದ ರಮೇಶ ಹಾಗೂ ಸಿಬ್ಬಂದಿ ವರ್ಗದವರ ಹಾಗೂ ಹಿರಿಯರ ಮಾರ್ಗದರ್ಶನವೇ ಕಾರಣ ಎನ್ನುವ ಇವರ ಸಾಧನೆಯನ್ನು ಹಲವಾರು ಸೇವಾ ಸಂಸ್ಥೆಗಳು ಅಭಿನಂದಿಸಿದ್ದಾರೆ
Leave a Comment