ಯಲ್ಲಾಪುರ: ಪಟ್ಟಣದಲ್ಲಿ ಹೋಳಿ ಮುನ್ನಾ ದಿನ ನಡೆದ ಬೇಡರವೇಷ ನೃತ್ಯ ಪ್ರದರ್ಶನ ಎಲ್ಲರನ್ನು ಆಕರ್ಷಿಸಿತು. ಅಂಬೇಡ್ಕರ್ ನಗರ, ರವೀಂದ್ರ ನಗರ ಮತ್ತು ಶಾರದಾಗಲ್ಲಿ ಹೋಳಿ ಉತ್ಸವ ಸಮಿತಿಗಳಿಂದ ೩ ಬೇಡರ ವೇಷದ ಕುಣಿತದ ತಂಡಗಳಿAದ ಪ್ರದರ್ಶನ ಏರ್ಪಡಿಸಲಾಗಿತ್ತು.
ಅಲ್ಲಲ್ಲಿ ಬೇಡರ ವೇಷದ ಪ್ರದರ್ಶನ ಗಳಿಗೆ ಉದ್ಯಮಿ ಬಾಲಕೃಷ್ಣ ನಾಯಕ್, ಸಮಾಜ ಸೇವಕ ನಂದನ ಬಾಳಗಿ, ಪಟ್ಟಣ: ಪಂಚಾಯತ ಉಪಾಧ್ಯಕ್ಷೆ ಶಾಮಿಲಿ ಪಾಟಣಕರ, ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್. ಗಾ೦ವಕರ, ಪಟ್ಟಣ ಪಂಚರಾತ ಸದಸ್ಯ ಸೋಮಶ್ವರ ನಾಯ್ಕ ಇನ್ನಿತರ ಪ್ರಮುಖರು ತಮಟೆ ಬಾರಿಸಿ ಚಾಲನೆ ನೀಡಿದರು.
ಅಂಬೇಡ್ಕರ ನಗರದ ಬೇಡರ ವೇಷದ ಕುಣಿತದ ತಂಡದೊAದಿಗೆ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ಶ್ರೀರಾಮ ಮಂದಿರದ ಪ್ರತಿಕೃತಿಯ ಸ್ತಬ್ಧಚಿತ್ರ ,ಈಶ್ವರ ಲಿಂಗ, ಗಾರುಡಿ ಗೊಂಬೆಗಳ ಮುಖವಾಡ ಮೆರವಣಿಗೆಗೆ ಮೆರಗು ನೀಡಿತ್ತು.
ಮಳೆ ಹಾಗೂ ವಿದ್ಯುತ್ ವ್ಯತ್ಯಯದಿಂದಾಗಿ ಸುಮಾರು ಎರಡರಿಂದ ಮೂರು ಗಂಟೆ ತಡವಾಗಿ ಪ್ರಾರಂಭವಾದ ಮೆರವಣಿಗೆ ಯನ್ನು ತಡರಾತ್ರಿ ವರೆಗೂ ನಡೆದ ಪ್ರದರ್ಶ£ವನ್ನು À ನೆರೆದಿದ್ದ ಸಾವಿರಾರು ಜನ ಕಣ್ತುಂಬಿಕೊAಡರು.
ಪಪA ಸದಸ್ಯ ಸತೀಶ್ ನಾಯ್ಕ ಪುತ್ರ ೫ ವರ್ಷದ ಸುಜನ್ ಬೇಡರ ವೇಷ ಪ್ರದರ್ಶನದ ಕುಣಿತಕ್ಕೆ ಮನಸೋತು ಅದೇ ರೀತಿ ವೇಷಭೂಷಣ ತೊಟ್ಟು ಕುಣಿತದಲ್ಲಿ ಭಾಗಿಯಾಗಿ ಬೆರಗು ಮೂಡಿಸಿದನು. .
Leave a Comment