ಯಲ್ಲಾಪುರ: ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ ಯಾಗಿದ್ದು, ರೊಲರ್ ಸ್ಕೆಟಿಂಗ್ ಹಾಕಿಯಲ್ಲಿ ಕರ್ನಾಟಕ ತಂಡದಲ್ಲಿ ನಮ್ಮ ಜಿಲ್ಲೆಯ ಮಕ್ಕಳೆ ಹೆಚ್ಚಿನ ಸಂಖ್ಯೆಯಲ್ಲಿ ಇರುವದು ಸಂತಸದ ವಿಷಯ , ಇದು ತರಬೇತುದಾರ ದೀಲಿಪ್ ಹಣಬರ್ ಅವರಿಂದ ಸಾಧ್ಯ ವಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ಅವರು ಭಾನುವಾರ ತಮ್ಮ ಕಚೇರಿಯಲ್ಲಿ ಚಂಡಿಗಡ್ ದಲ್ಲಿ ನಡೆದ 59 ರಾಷ್ಟ್ರೀಯ ರೊಲರ್ ಸ್ಕೆಟಿಂಗ್ ಹಾಕಿಯಲ್ಲಿ ಭಾಗವಹಿಸಿದ ಉತ್ತರ ಕನ್ನಡ ಜಿಲ್ಲೆಯ ಕ್ರೀಡಾಪಟುಗಳನ್ನು ಅಭಿನಂದಿಸಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ತರಬೇತುದಾರ ದೀಲಿಪ್ ಹಣಬರ್ ,ಯಲ್ಲಾಪುರ ರೊಲರ್ ಸ್ಕೆಟಿಂಗ್ ಕ್ಲಬ್ ನ ಅಧ್ಯಕ್ಷ ಪ್ರಕಾಶ ಶೇಟ್ , ಶರೀಪ್ ಹಾರ್ಸಿಕಟ್ಟಾ, ಸತೀಶ ನಾಯ್ಕ, ಮುಂಡಗೋಡ್ ರೊಲರ್ ಸ್ಕೆಟಿಂಗ್ ಕ್ಲಬ್ ನ ಅಧ್ಯಕ್ಷ ಸಂಜೀವ್ ಪಿಸೆ ಉಪಸ್ಥಿತ ರಿದ್ದರು .
Leave a Comment