
ಯಲ್ಲಾಪುರ:ಕೇವಲ ಪದವಿ ಶಿಕ್ಷಣ ಪಡೆದರೆ ಉದ್ಯೋಗ ಸಿಗುತ್ತದೆ ಎಂಬ ಭರವಸೆ ಇಲ್ಲ. ಆದ್ದರಿಂದ ಮನು ವಿಕಾಸ ಸಂಸ್ಥೆ ನೀಡುತ್ತಿರುವ ಈ ತರಬೇತಿಯಲ್ಲಿ ಎಲ್ಲ ವರ್ಗದ ಬಡಜನರು ಅವಕಾಶ ಪಡೆದು, ಹೊಟೆಲ್ ಕ್ಷೇತ್ರದಲ್ಲಿ ಪರಿಣಿತಿ ಗಳಿಸಿಕೊಂಡಾಗ ಸಾಕಷ್ಟು ಬೇಡಿಕೆ ದೊರೆತು ಉದ್ಯೋಗ ಸೃಷ್ಟಿ ಯಾಗುತ್ತದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಅವರು ಪಟ್ಟಣದ ಕೋಡ್ಕಣಿ ಕಾಂಪ್ಲೆಕ್ಸ್ನಲ್ಲಿ ಮನು ವಿಕಾಸ ಸಂಸ್ಥೆ ಶಿರಸಿ, ಸಾತಾರದ ಆತಿಥ್ಯ ನಿರ್ವಹಣಾ ಸೇವಾ ಸಂಸ್ಥೆಗಳು ಎಚ್ಡಿಎಫ್ಸಿ ಬ್ಯಾಂಕ್ ಸಹಕಾರದಲ್ಲಿ ಸಿದ್ದಿ ಯುವಕ-ಯುವತಿಯರಿಗೆ ಹಮ್ಮಿಕೊಂಡ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ .ಸರ್ಕಾರ ಹಲವಾರು ರೀತಿಯಲ್ಲಿ ಬಡವರಿಗೆ ಉಚಿತವಾಗಿ ಆಹಾರ ಧಾನ್ಯ ಮತ್ತಿತರ ಸವಲತ್ತುಗಳನ್ನು ನೀಡುತ್ತಿರುವುದರಿಂದ ಅವರು ಆಲಸಿಗಳಾಗಲು ಕಾರಣವಾಗುತ್ತಿದೆ. ಆದರೆ ಪ್ರವಾಸೋದ್ಯಮದ ಅಡಿಯಲ್ಲಿ ಹೊಟೆಲ್ ಮ್ಯಾನೇಜ್ ಮೆಂಟ್ ಉದ್ಯೋಗಕ್ಕೆ ಸೇರ್ಪಡೆಗೊಂಡರೆ ಲಕ್ಷಾಂತರ ರೂ. ಸಂಬಳ ಪಡೆಯುವ ದೊಡ್ಡ ಅವಕಾಶ ಜಗತ್ತಿನಾದ್ಯಂತ ಇದೆ
ಶ್ರೀಲಂಕಾ, ಹೊಂಗ್ಕಾಂಗ್, ಸಿಂಗಾಪುರ ಮತ್ತು ನಮ್ಮ ದೇಶದ ಗೋವಾಗಳಲ್ಲಿ ಪ್ರವಾಸೋದ್ಯಮದಿಂದಲೇ ಅಲ್ಲಿನ ಬದುಕು ನಿಂತಿದೆ.
ಅಲ್ಲದೇ ಸಿದ್ದಿ ಜನಾಂಗದ ಮಕ್ಕಳಿಗೆ ಕ್ರೀಡೆಯಲ್ಲೂ ಪರಿಪೂರ್ಣ ತರಬೇತಿ ನೀಡಿದರೆ, ಅವರು ದೇಶಕ್ಕೆ ಕಳಶಪ್ರಾಯರಾಗುತ್ತಾರೆ ಎಂದ ಸಚಿವರು, ನಮ್ಮ ಕಾರ್ಮಿಕ ಇಲಾಖೆಯಿಂದ 750 ಕಾರ್ಮಿಕ ಮಕ್ಕಳನ್ನು ಆಯ್ಕೆ ಮಾಡಿ, ಐಎಎಸ್, ಕೆಎಎಸ್ ತರಬೇತಿಯನ್ನು ನೀಡುತ್ತಿದ್ದೇವೆ. ಇದರ ಉದ್ದೇಶ ಕಟ್ಟಕಡೆಯ ವ್ಯಕ್ತಿಯೂ ‘ಉನ್ನತ ಸ್ಥಾನಕ್ಕೇರಬೇಕೆಂಬುದಾಗಿದೆಎಂದರಲ್ಲದೆ ಈ ಸಂಸ್ಥೆ ರೈತರಿಗೆ ಸಂಜೀವಿನಿಯಾಗಿದೆ. ಸಾವಿರಾರು ಕೆರೆಗಳನ್ನು ನಿರ್ಮಿಸಿ, ರೈತರಿಗೆ ವರದಾನವಾಗಿದೆ. ಮಾಡುವ ಕಾರ್ಯ ಅಭಿನಂದನಾರ್ಹ . ಎಂದರು.
ಮನು ವಿಕಾಸ ಸಂಸ್ಥೆಯ ಮುಖ್ಯಸ್ಥ ಗಣಪತಿ ಭಟ್ಟ ಮಾತನಾಡಿ, ಸರ್ಕಾರದಲ್ಲಿ ಹತ್ತಾರು ಯೋಜನೆಗಳಿದ್ದು, ಅಂತಹ ಯೋಜನೆಗಳನ್ನುಬಳಸಿಕೊಂಡು, ಸಿದ್ದಿ ಜನಾಂಗದ 300 ಕುಟುಂಬದವರಿಗೆ ಉದ್ಯೋಗ ಸೃಷ್ಟಿಸುವ ಮಹತ್ವಪೂರ್ಣ ಯೋಜನೆ ರೂಪಿಸುತ್ತಿದ್ದೇವೆ ಎಂದರು.
ಆತಿಥ್ಯ ನಿರ್ವಹಣಾ ತರಬೇತಿ ಸಂಸ್ಥೆಯ ಅಧ್ಯಕ್ಷ ಯುವರಾಜ ಭಂಡಾಳಕರ್ ಮಾತನಾಡಿ, ಕೈಗಾರಿಕಾ ಮತ್ತು ಕೃಷಿಗೆ ದೇಶದಲ್ಲಿ ಸಾಕಷ್ಟು ಅವಕಾಶವಿದೆ. ಹಳ್ಳಿಗಳಲ್ಲೂ ಪ್ರವಾಸೋದ್ಯಮ ಬೆಳೆದಾಗ ಅಲ್ಲಿನ ಜನರು ಸ್ವಾವಲಂಬಿಗಳಾಗಲು ಸಾಧ್ಯ. ಎಂದರು.
ಲ್ಯಾಂಪ್ಸ್ – ಸೊಸೈಟಿ ಅಧ್ಯಕ್ಷ ರಾಮನಾಥ ಸಿದ್ದಿ, ಸಿದ್ದಿ ಸಮಾಜದ ಪ್ರಮುಖ ಲಾರೆನ್ಸ್ ಸಿದ್ದಿ ಮಾತನಾಡಿದರು. ಪ್ರತಿಭಾ ಸಿದ್ದಿ ಪ್ರಾರ್ಥಿಸಿದರು. ಮನು ಏಕಾಸ ಸಂಸ್ಥೆಯ ಚಂದನಾ ನಾಯ್ಕ ಸ್ವಾಗತಿಸಿದರು. ಲಕ್ಷ್ಮಿ ಆಚಾರಿ ನಿರ್ವಹಿಸಿದರು. ಸ್ವಪ್ನಾ ಘನವಟಿ ವಂದಿಸಿದರು.
Leave a Comment