
ಯಲ್ಲಾಪುರ: ತಾಲೂಕಿನ ಇಡಗುಂದಿ ಗ್ರಾಮ ಪಂಚಾಯಿತಿ ಮಟ್ಟದ ಸೀತಾರಾಮ ಸಂಜೀವಿನಿ ಒಕ್ಕೂಟದ ಸಭೆ ನಡೆಯಿತು. ಈ ಸಂದರ್ಭದಲ್ಲಿ ಈ ಸಂಜೀವಿನಿ ಒಕ್ಕೂಟಕ್ಕೆ ಗ್ರಾಮ ಪಂಚಾಯಿತಿ ಯ ೧೩ ಸದಸ್ಯರು ಸೇರಿ ಕುಡಿಯುವ ನೀರಿನ ಫಿಲ್ಟರ್ ಇದರಲ್ಲಿ ವಾರ್ಮ ಕೋಲ್ಡ್ ಕುಡಿಯುವ ನೀರಿನ ಫಿಲ್ಟರ್ ಮಿಷನನ್ನು ಹಾಗೂ ಸಾಮಾನ್ಯವಾಗಿ ೨೦ ಲೀಟರಿನ ವಾಟರ್ ಕ್ಯಾನ್ ಹಿಡಿಯುವಂತಹ ಫಿಲ್ಟರ್ ಮೆಸೇಜನ್ನು ಮತ್ತು ಅಂಗವಿಕಲರಿಗೆ ೩ ಜಾಯಿಂಟ್ ಚೇರನ್ನು ಕೊಡುಗೆಯಾಗಿ ನೀಡಿದರು.

ಒಕ್ಕೂಟದ ಅಧ್ಯಕ್ಷೆ ರಾಜೇಶ್ವರಿ ಸಿದ್ದಿ ಮಾತನಾಡಿ ನಮ್ಮ ಇಡಗುಂದಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಹಾಗೂ ಸದಸ್ಯರು ನಮ್ಮ ಸೀತಾರಾಮ ಸಂಜೀವಿನಿ ಒಕ್ಕೂಟಕ್ಕೆ ಹೆಚ್ಚಿನ ಆ ಶಕ್ತಿ ತುಂಬುತಿದ್ದಾರಲ್ಲದೇ ನಮ್ಮೇಲ್ಲರ ಆರೋಗ್ಯ ಕಾಳಜಿ ವಹಿಸಲು ನೀರಿನ ಪೀಲ್ಟರ ಕೊಡುಗೆಯಾಗಿ ನೀಡಿರುವದಕ್ಕೆ ಒಕ್ಕೂಟದಿಂದ ತುಂಬುಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದರು.

ನಂತರ ಅರಣ್ಯ ದಿನಾಚರಣೆಯ ಅಂಗವಾಗಿ ಅರಣ್ಯ ಸರಂಕ್ಷಣೆ ಕುರಿತು ಮಾತನಾಡಿದ ಇಡಗುಂದಿ ಅರಣ್ಯಾಧಿಕಾರಿ ಜೆ ವಿ ಕಲಂಗುಟ್ಕರ್ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷಿö್ಮ ಸಿದ್ದಿ , ಪಿಡಿಓ ಚನ್ನವೀರಪ್ಪ ಕುಂಬಾರ, ಪಂಚಾಯತ್ ಕಾರ್ಯದರ್ಶಿ ರಾಘವೇಂದ್ರ ಭಾಗವತ್, ಎಲ್ ಸಿ ಆರ್ ಪಿ ಲಲಿತಾ,ವಲಯ ಮೇಲ್ವಿಚಾರಕ ರಾಜರಾಮ್ ವೈದ್ಯ ಅವರೆಲ್ಲರನ್ನು ಒಕ್ಕೂಟ ದಿಂದ ಸನ್ಮಾನಿಸಿ ಗೌರವಿಸಿದರು.
Leave a Comment