
ಯಲ್ಲಾಪುರ :ಇಲ್ಲಿಯ ಜನ ಬಹಳ ತಿಳಿದವರು. ಕಲೆ ಸಾಹಿತ್ಯ ಎಲ್ಲದರಲ್ಲೂ ಪಳಗಿದವರು. ನಾನೂ ಮೂರು ವರ್ಷ ಗುಡಿಗೇರಿ ಕಂಪನಿಯಲ್ಲಿ ಬಣ್ಣ ಹಚ್ಚಿದ್ದೆ. ನಂತರ ಸಿನಿಮಾಕ್ಕೆ ಪಾದವಿರಿಸಿದೆ. ಈಗ ಅದೆಲ್ಲ ನೆನಪು.
ಹಿರಿಯ ಸಿನಿಮಾ ನಟರಾದ ನಿರ್ನಳ್ಳಿ ರಾಮಕೃಷ್ಣ ಅವರು ಉಮ್ಮಚ್ಗಿ ವಿ.ಎಸ್. ಎಸ್. ಸಭಾಂಗಣದಲ್ಲಿ ಮಂಚೀಕೇರಿಯ ರಂಗ ಸಮೂಹದ ಕಲಾವಿದರು ಅಭಿನಯಿಸಲಿರುವ ಕಾಲಚಕ್ರ ನಾಟಕದ ಪ್ರದರ್ಶನಕ್ಕೂ ಮುನ್ನ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು .

ಹಿರಿಯ ರಂಗ ನಟರೂ,ನಿರ್ದೇಶಕ ರಂಗಸಮೂಹದ ಪ್ರಮುಖರೂ ಆದ ಆರ್.ಎನ್. ದುಂಡಿ ಮಾತನಾಡಿದರು ಇದೇ ಸಂದರ್ಭದಲ್ಲಿ ನಟ ರಾಮಕೃಷ್ಣ ಅವರನ್ನು ಉಮ್ಮಚ್ಗಿಯ ವ್ಯ.ಸೇ.ಸ.ಸಂಘ ಹಾಗೂ ಸಿಬ್ಬಂದಿ ಬಳಗದವರು ಆತ್ಮೀಯವಾಗಿ ಸನ್ಮಾನಿಸಿದರು.
ಸಂಘದ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುಂಡಿ ಸ್ವಾಗತಿಸಿ, ಕಲಾವಿದರಾದ ಎಂ.ಕೆ.ಭಟ್ಟ ಯಡಳ್ಳಿ ನಿರ್ವಹಿಸಿ, ಸಂಘದ ಕಾರ್ಯದರ್ಶಿ ರಾಮಕೃಷ್ಣ ಹೆಗಡೆ ಕನೇನಳ್ಳಿ ವಂದನಾರ್ಪಣೆ ಸಲ್ಲಿಸಿದರು. ನಂತರ ನಾಟಕ ಯಶಸ್ವಿಯಾಗಿ ನಡೆಯಿತು.
Leave a Comment