
ಯಲ್ಲಾಪುರ: ಜ್ಯೋತಿಷ್ಯವನ್ನು ವೈಜ್ಞಾನಿಕವಾಗಿ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಸಹಾಯಕ ಆಯುಕ್ತ ದೇವರಾಜ ಆರ್. ಎಂದರು.
ಅವರು ಭಾರತೀಯ ಜ್ಞಾನ ವಿಜ್ಞಾನ ಪರಿಷತ್, ಸುಮೇರು ಜ್ಯೋತಿರ್ವನಮ್ ಉಮ್ಮಚಗಿ ನೇತೃತ್ವದಲ್ಲಿ ಜಿಲ್ಲೆಯ ಶಿರಸಿ, ಯಲ್ಲಾಪುರ ವ್ಯಾಪ್ತಿಯ ಅಕ್ಷಾಂಶ ತಿಳಿದುಕೊಳ್ಳುವ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವೈಜ್ಞಾನಿಕ ಜ್ಯೋತಿಷ್ಯವನ್ನು ಇಲ್ಲಿಗೇ ಸೀಮಿತವಾಗದೇ ಇದನ್ನು ವಿಸ್ತರಿಸುವ ಕಾರ್ಯ ಆಗಬೇಕು. ಭಾರತೀಯರ ರಾಶಿ, ನಕ್ಷತ್ರ, ಜೋತಿಷ್ಯಕ್ಕೂ, ವಿಜ್ಞಾನ ಕ್ಕೂ ಸಂಬಂಧ ಇದೆ. ನಕ್ಷತ್ರಗಳಿಗೆ, ಗೃಹ, ರಾಶಿಗಳಿಗೆ ಆಯಾ ಗಿಡಗಳಿಗೆ ಸಂಬಂಧಿಸಿ ಆಳವಾದ ಅಧ್ಯಯನ ನಡೆಸಿ ಜೋತಿಷ್ಯದ ಮೂಲಕ ಜೋಡಿಸಲಾಗಿದೆ. ಅದನ್ನು ಗ್ರಂಥಗಳೂ ಬರಬೇಕು ಎಂದೂ ಸಲಹೆ ಮಾಡಿದರು.
ಅಧ್ಯಕ್ಷತೆವಹಿಸಿದ್ದ
ಶಿರಸಿ ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಜ್ಯೋತಿಷ್ಯದಲ್ಲಿ ಅರಬರೆ ಕಲಿತು ಹೇಳುವದು ಅಪಾಯವಿದೆ. ಅಲ್ಪ ಕಲಿತು ಜೋತಿಷ್ಯ ಹೇಳಿದರೆ ನಂಬಿಕೆಯಿಂದ ಕೇಳಿದವರ ಬದುಕು ನಿಂತು ಹೋಗುತ್ತದೆ. ಸರಿಯಾಗಿ ಕಲಿತು ಹೇಳಿದರೆ ಅದರ ಪರಿಣಾಮ ಕೇಳಿದ ವ್ಯಕ್ತಿಗೆ ಉನ್ನತ ಆಗುತ್ತದೆ ಎಂದರು.
ಪ್ರಸಿದ್ಧ ಜೋತಿಷಿ ಡಾ. ಕೆ.ಸಿ.ನಾಗೇಶ, ಮಾತನಾಡಿದರು
ತಹಸೀಲ್ದಾರ ಶ್ರೀಕೃಷ್ಣ ಕಾಮಕರ, , ವೈದ್ಯ ಡಾ. ನಿರಂಜನ ಹೊಸಬಾಳೆ, ಉಮ್ಮಚಗಿ ಪಂಚಾಯ್ತಿ ಅಧ್ಯಕ್ಷೆ ರೂಪಾ ಪೂಜಾರಿ, ಶ್ರೀಮಾತಾ ಸಂಸ್ಕ್ರತ ಪಾಠಶಾಲೆಯ ಅಧ್ಯಕ್ಷ ಪಿ.ವಿ.ಹೆಗಡೆ, ಪ್ರಾಚಾರ್ಯ ಡಾ. ನಾಗೇಶ ಭಟ್ಟ, ನಾಗರಾಜ್ ಭಟ್, ವಿದ್ವಾಂಸ ಸೀತಾರಾಮ ಭಟ್ಟ ಇತರರು ಇದ್ದರು.
ಗಣೇಶ ಎನ್.ಭಟ್ಟ ಪ್ರಸ್ತಾವಿಕ ಮಾತನಾಡಿದರು.
ಪುಷ್ಕರ ಕೆ.ಎನ್ ಪ್ರಾರ್ಥಿಸಿದರು. ಡಾ. ನಿವೇದಿತಾ ಭಟ್ಟ ಸ್ವಾಗತಿಸಿದರು. ಗಣೇಶ ಭಟ್ಟ ನಿರ್ವಹಿಸಿದರು.
Leave a Comment