
ಯಲ್ಲಾಪುರ :ಪತಂಜಲಿಯೋಗ ಸಮಿತಿ,
ಭಾರತ ಸ್ವಾಭಿಮಾನ ಟ್ರಸ್ಟ್ ವತಿಯಿಂದ ಬಲಿದಾನ ದಿವಸ
ಕಾರ್ಯಕ್ರಮವನ್ನು ಪಟ್ಟಣದ ಅಡಿಕೆ ಭವನದಲ್ಲಿ ಆಚರಿಸಲಾಯಿತು. ಬಲಿದಾನ ದಿವಸ ಅಂಗವಾಗಿ ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಭಗತಸಿಂಗ್, ಸುಖದೇವ್ ಹಾಗೂ ರಾಜಗುರು ಅವರ ಬಲಿದಾನದ ಸ್ಮರಣೆ ಮಾಡಲಾಯಿತು.
ಜಿಲ್ಲಾ ಯೋಗ ವಿಸ್ತಾರದ ಸುಬ್ರಾಯ ಭಟ್ ಮಾತನಾಡಿ, ಭಗತ್ ಸಿಂಗ್ ಸುಖದೇವ್ ರಾಜಗುರು ಇವರು ಚಿಕ್ಕವಯಸ್ಸಿನಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡು ಬಲಿದಾನ ಮಾಡಿದ್ದರು. ಇಂದು ನಾವು ನಮ್ಮ ಮಕ್ಕಳನ್ನು ದೇಶ ರಕ್ಷಣೆಗಾಗಿ ಸಿದ್ದ ಗೊಳಿಸಬೇಕಾಗಿದೆ. ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡುವುದರ ಜೊತೆಗೆ ಭಾರತೀಯ ಸಂಸ್ಕೃತಿ ಸಂಸ್ಕಾರಗಳ ಬಗ್ಗೆ ತಿಳುವಳಿಕೆ ನೀಡಿದೇಶ ರಕ್ಷಣೆಗೆ ಕಂಕಣಬದ್ಧರಾಗಿಸಬೇಕು ಎಂದರು
ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿಯತಾಲೂಕ ಅಧ್ಯಕ್ಷ ವಿ ಕೆ ಭಟ್ ಶೀಗೆಪಾಲ್, ಉಪಾಧ್ಯಕ್ಷ
ನಾಗೇಶ ರಾಯ್ಕರ, ಪತಂಜಲಿ ಯುವ ಭಾರತಿ ಜಿಲ್ಲಾ ಪ್ರಭಾರಿ ಹಾಗೂ ಶಿಕ್ಷಕ ದಿವಾಕರ ಮರಾಠಿ, ಜಿಲ್ಲಾ ಯುವ ಸಹ-ಪ್ರಭಾರಿ ಕನಕಪ್ಪ, ಯೋಗ ಬಂಧುಗಳಾದ ರವಿ ಪೋಕಳೆ ಮಂಜುನಾಥ ಹೆಗಡೆ ಎಸ್ ಡಿ ನಾಯಕ, ಶೈಲಶ್ರೀ ಭಟ್ಟ, ಕಾವೇರಿ ಮುಂತಾದವರು ಇದ್ದರು
Leave a Comment