ಸಿದ್ದಾಪುರ: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ನಾಲ್ವರು ಹಲ್ಲೆ ನಡೆಸಿರುವ ಘಟನೆ ಪಟ್ಟಣದ ಹಾಳದಕಟ್ಟದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಈ ಘಟನೆಗೆ ಸಂಬAಧಿಸಿದAತೆ ಹಾಳದಕಟ್ಟಾದ ಚಂದ್ರಕಾAತ ಜಿಂಗಾಡೆ, ರವಿ ಜಿಂಗಾಡೆ, ರಾಮಪ್ಪ ಜಿಂಗಡೆ, ಪವನ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ಚಂದ್ರಕಾAತ ಜಿಂಗಾಡೆ ಎಂಬುವವನನ್ನು ಬಂಧಿಸಲಾಗಿದೆ. ಸೋಮವಾರ ರಾತ್ರಿಯ ವೇಳೆ ಪೊಲೀಸರು ಗಸ್ತಿನಲ್ಲಿರುವಾಗ ಓಮಿನಿ ವಾಹನ ಒಂದು ಹಾಳದಕಟ್ಟಾದ ಜಿಂಗಾಡೆ ಅವರ ಮನೆಯ ಎದುರಿನಲ್ಲಿ ನಿಂತಿತ್ತು. ವಾಹನದಲ್ಲಿ ಇದ್ದವರಿಗೆ ವಿಚಾರಿಸಿ ಮನೆಗೆ ಹೋಗುವಂತೆ ಪೊಲೀಸರು ಸೂಚಿಸಿ ತೆರಳಿದ್ದರೆ.
ಮರಳಿ ಬರುವಾಗ ಮತ್ತೆ ವಿಚಾರಿಸಿದಾಗ ಮನೆಯಲ್ಲಿದ್ದವರು ಬಂದು ಪೊಲೀಸರೊಂದಿಗೆ ಜಗಳಕ್ಕೆ ನಿಂತು ಗಲಾಟೆ ಮಾಡಿ ಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಶ್ರೀಶೈಲ ಉಪ್ಪಾರಟ್ಟಿ ಮತ್ತು ಜಟ್ಟಪ್ಪ ಕೆಲೂರ್ ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿ ಕೆ ಹಾಕಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Leave a Comment