ಯಲ್ಲಾಪುರ: ಅರಣ್ಯ ದಲ್ಲಿ ಮೇಯಲು ಬಿಟ್ಟ ಆಕಳಿನ ಮೇಲೆ ಯಾರೋ ದುಷ್ಕರ್ಮಿಗಳು ಗುಂಡೇಟು ಹಾಕಿದ್ದು, ಆಕಳು ಗಂಭೀರವಾಗಿ ಗಾಯಗೊಂಡಿದೆ. ಪ್ರಾಣಾಪಾಯದಿಂದ ಪಾರಾಗಿದೆ.
ಈ ಭಾಗದಲ್ಲಿ ಬೇಟೆಗಾರರ ಹಾವಳಿ ಮತ್ತೆ ಹೆಚ್ಚಿರುವ ಅನುಮಾನ ಮೂಡಿದ್ದು, ಬಿಸಗೋಡು ರಸ್ತೆಯಲ್ಲಿ ಕಳೆದ ವಾರ ಚಿರತೆಯೊಂದನ್ನು ಗುಂಡಿಗೆ ಬಲಿಯಾಗಿತ್ತು.
ಪಟ್ಟಣದ ರಾಮಾಪುರದ ಪಾಂಡುರಂಗ ಪಂಡರಾಪುರ ಎಂಬುವವರ ಆಕಳನ್ನು ಮೇಯಲು ಕಾಡಿನಲ್ಲಿ ಬಿಟ್ಟಿದ್ದರು. ಕಾಡಿನಲ್ಲಿ ದುಷ್ಕರ್ಮಿಗಳು ಹಾರಿಸಿದ ಗುಂಡೇಟು ಅಕಳಿಗೆ ತಗುಲಿದೆ.
ನೋವಿನಿಂದ, ರಕ್ತ ಸುರಿಸುತ್ತಾ ಮನೆಗೆ ಬಂದ ಅದನ್ನು ಕಂಡು ಮನೆ ಮಂದಿ ಹೌಹಾರಿದರು. ಆಕಳು ಬಂದ ದಾರಿಯುದ್ದಕ್ಕೂ ಮನೆ ಮಂದಿ ಸಾಗಿದಾಗ, ಕಾಡಿನವರೆಗೂ ರಕ್ತ ಚೆಲ್ಲಿದ್ದು ಕಂಡು ಬಂದಿದೆ.ತಕ್ಷಣ ಪಶು ವೈದ್ಯಾಧಿಕಾರಿ ಡಾ.ಸುಬ್ರಾಯ ಭಟ್ಕ ಅವರನ್ನು ಕರೆಯಿಸಿ ಅಕಳಿಗೆ ಚಿಕಿತ್ಸೆ ಕೊಡಿಸಿದ್ದಾರೆ .
ಆಕಳು ತುಸು ಚೇತರಿಸಿಕೊ೦ಡಿದ್ದು, ಸಧ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದೆ.ಈ ಪ್ರಕರಣ ಸಂಬಂಧ ಯಲ್ಲಾಪುರ ಠಾಣೆ ಪೊಲೀಸರಿಗೆ ಪಾಂಡುರಂಗ ದೂರು ನೀಡಿದ್ದಾರೆ.
- Get willing to meet your perfect gay fuck buddy now
- Get started on your own dating hookup journey today
- IMD Recruitment 2024 ಭಾರತೀಯ ಹವಮಾನ ಇಲಾಖೆ ನೇಮಕಾತಿ
- ಗೃಹರಕ್ಷಕ-ಗೃಹರಕ್ಷಕಿಯರ ಭರ್ತಿಗಾಗಿ ಅರ್ಜಿ ಆಹ್ವಾನ 2024
- ಬೃಹತ್ ಉದ್ಯೋಗ ಮೇಳ 50000ಕ್ಕೂ ಹೆಚ್ಚು ಉದ್ಯೋಗಾವಕಾಶ 2024
Leave a Comment