• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
    • Bank job
    • Government jobs
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಮಾಹಿತಿ
    • ಸೇವೆ
    • ಸಾಧನೆ
  • Entertainment
    • Kannada Movies
    • Hindi Movies
    • Telugu Movies
    • Movies

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಕ್ಕಳ ಬೇಸಿಗೆ ಶಿಬಿರ

May 10, 2022 by Jayaraj Govi Leave a Comment

ಯಲ್ಲಾಪುರ: ಪಟ್ಟಣದ ಕಾಳಮ್ಮನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜನೆಗೊಂಡ  ಮಕ್ಕಳ ಬೇಸಿಗೆ ಶಿಬಿರಕಾರ್ಯಕ್ರಮ ದಲ್ಲಿ  ಪಪಂ ಅಧ್ಯಕ್ಷೆ ಸುನಂದ ದಾಸ್ ಮಾತನಾಡಿ ನಾವು ಸಣ್ಣವರಾಗಿದ್ದಾಗ ಶಾಲೆಯ ಬಿಡುವು ದೊರಕಿತೆಂದರೆ, ಬೇಸಿಗೆಯ ಬಿರು ಬಿಸಿಲನ್ನು ಲಕ್ಷಿಸದೆ ಸಂಬAಧಿಕರ ಮನೆಗಳ ಭೇಟಿ: ನದಿ, ಹಳ್ಳ, ಕೊಳ್ಳಗಳಲ್ಲಿ ಆಟವಾಡುತ್ತಿದ್ದೆವು.

ಆಗ ಪಾಠದೊಂದಿಗೆ ಬಾಹ್ಯ ಪ್ರಪಂಚದ, ಪರಿಸರದ ಕುರಿತು ತಿಳಿವಳಿಕೆ ದೊರಕುತಿತ್ತು ಎಂದರು. ಆದರೆ ಬದಲಾದ ಕಾಲಘಟ್ಟದಲ್ಲಿ ಮಕ್ಕಳಿಗೆ ಬೇಸಿಗೆ ರಜೆಯ ಪ್ರಮಾಣವೂ ಕಡಿಮೆಯಾಗಿದ್ದು, ಮೊಬೈಲ್ ಮಾತ್ರವೇ ಸರ್ವಸ್ವವಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಆಕರ್ಷಣೆಯಿಂದ ಹೊರಬಂದು ಸಹಪಾಠಿಗಳೊಂದಿಗೆ ಬೆರೆತು ಅಗತ್ಯ ವಿಚಾರಗಳನ್ನು ತಿಳಿದುಕೊಳ್ಳುವುದು ಒಳಿತು. ಇಂತಹ ಬೇಸಿಗೆ ಶಿಬಿರಗಳಿಂದ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯದ ಅರಿವು ಸಾಧ್ಯ ಎಂದು ಹೇಳಿದರು.ಶಿಬಿರದಲ್ಲಿ ಚಿತ್ರಕಲೆ, ಆಟೋಪಕರಣಗಳ ತಯಾರಿಕೆ, ಶ್ಲೋಕಗಳ ಕಲಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಅರಿವು ಉಪನ್ಯಾಸ, ನಿಸರ್ಗ ತಾಣಗಳಿಗೆ ಭೇಟಿ  ಇನ್ನಿತರ ವಿಶೇಷತೆಗಳನ್ನು ಕಲಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರಫೀಕಾ ಹಳ್ಳೂರ್ ವಿವರಿಸಿದರು.ತಾಪಂ ಇಒ ಜಗದೀಶ ಕಮ್ಮಾರ, ಮುಂಡಗೋಡ ಶಿಕ್ಷಣಾಧಿಕಾರಿ ವಿ.ಎಸ್. ಪಟಗಾರ, ಯಲ್ಲಾಪುರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಶಿಬಿರದ ಮಹತ್ವ ತಿಳಿಸಿದರು.ಶಾಲೆಯ ಸಹ ಶಿಕ್ಷಕ ಶ್ರೀಧರ ಹೆಗಡೆ ಇನ್ನಿತರ ಅಧಿಕಾರಿಗಳು, ಪಾಲಕರು ಉಪಸ್ಥಿತರಿದ್ದರು.ರಂಜಿತಾ ಮರಾಠಿ ಪ್ರಾರ್ಥಿಸಿದರು. ಪುಷ್ಪಾ ಹಂಜಾಯಿ ನಿರ್ವಹಿಸಿದರು. ಫಾತಿಮಾ ವಂದಿಸಿದರು.

Related Posts :

. ಸಮಾಜದಿಂದ ಬಂದ ಹಣ ...
ರಾಜ್ಯೋತ್ಸವ ಪ್ರಶ...
ಇಲ್ಲಿನ ಪ್ರತಿಭೆಗ...
ಕ್ರೀಡಾಂಗಣ ಮಾಡಿಕ...

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Other, Yellapur

Explore More:

About Jayaraj Govi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 1,369,816 visitors
SURE Card

Footer

JSW has proposed another port at Honavar

July 26, 2021 By Sachin Hegde

ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ :ಮೃತ ಪಟ್ಟ ಮಗು

May 21, 2022 By Jayaraj Govi

ಬಿಸಗೋಡ ಪ್ರೌಢಶಾಲೆ ಫಲಿತಾಂಶ : 92.31% ಸಾಧನೆ

May 20, 2022 By Jayaraj Govi

ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

May 20, 2022 By Deepika

ಕೆನರಾ ಬ್ಯಾಂಕ್ ನೇಮಕಾತಿ

May 20, 2022 By Deepika

ಇಂದಿನಿಂದ ಮಹಾಕಾಳಿ ದೇವಾಲಯದಲ್ಲಿ ಶತಚಂಡಿಕಾಯಾಗ

May 20, 2022 By Deepika

ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

May 19, 2022 By Deepika

© 2022 Canara Buzz · Contributors · Privacy Policy · Terms & Conditions

 

Loading Comments...
 

    loading Cancel
    Post was not sent - check your email addresses!
    Email check failed, please try again
    Sorry, your blog cannot share posts by email.