• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • Story Archives
      • gadgets
      • APPLY LINK
      • Notification

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಕ್ಕಳ ಬೇಸಿಗೆ ಶಿಬಿರ

May 10, 2022 by Jayaraj Govi Leave a Comment

image editor output image 2019815564 1652206501209

ಯಲ್ಲಾಪುರ: ಪಟ್ಟಣದ ಕಾಳಮ್ಮನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜನೆಗೊಂಡ  ಮಕ್ಕಳ ಬೇಸಿಗೆ ಶಿಬಿರಕಾರ್ಯಕ್ರಮ ದಲ್ಲಿ  ಪಪಂ ಅಧ್ಯಕ್ಷೆ ಸುನಂದ ದಾಸ್ ಮಾತನಾಡಿ ನಾವು ಸಣ್ಣವರಾಗಿದ್ದಾಗ ಶಾಲೆಯ ಬಿಡುವು ದೊರಕಿತೆಂದರೆ, ಬೇಸಿಗೆಯ ಬಿರು ಬಿಸಿಲನ್ನು ಲಕ್ಷಿಸದೆ ಸಂಬAಧಿಕರ ಮನೆಗಳ ಭೇಟಿ: ನದಿ, ಹಳ್ಳ, ಕೊಳ್ಳಗಳಲ್ಲಿ ಆಟವಾಡುತ್ತಿದ್ದೆವು.

image editor output image403709739 1652206570298

ಆಗ ಪಾಠದೊಂದಿಗೆ ಬಾಹ್ಯ ಪ್ರಪಂಚದ, ಪರಿಸರದ ಕುರಿತು ತಿಳಿವಳಿಕೆ ದೊರಕುತಿತ್ತು ಎಂದರು. ಆದರೆ ಬದಲಾದ ಕಾಲಘಟ್ಟದಲ್ಲಿ ಮಕ್ಕಳಿಗೆ ಬೇಸಿಗೆ ರಜೆಯ ಪ್ರಮಾಣವೂ ಕಡಿಮೆಯಾಗಿದ್ದು, ಮೊಬೈಲ್ ಮಾತ್ರವೇ ಸರ್ವಸ್ವವಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಆಕರ್ಷಣೆಯಿಂದ ಹೊರಬಂದು ಸಹಪಾಠಿಗಳೊಂದಿಗೆ ಬೆರೆತು ಅಗತ್ಯ ವಿಚಾರಗಳನ್ನು ತಿಳಿದುಕೊಳ್ಳುವುದು ಒಳಿತು. ಇಂತಹ ಬೇಸಿಗೆ ಶಿಬಿರಗಳಿಂದ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯದ ಅರಿವು ಸಾಧ್ಯ ಎಂದು ಹೇಳಿದರು.ಶಿಬಿರದಲ್ಲಿ ಚಿತ್ರಕಲೆ, ಆಟೋಪಕರಣಗಳ ತಯಾರಿಕೆ, ಶ್ಲೋಕಗಳ ಕಲಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಅರಿವು ಉಪನ್ಯಾಸ, ನಿಸರ್ಗ ತಾಣಗಳಿಗೆ ಭೇಟಿ  ಇನ್ನಿತರ ವಿಶೇಷತೆಗಳನ್ನು ಕಲಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರಫೀಕಾ ಹಳ್ಳೂರ್ ವಿವರಿಸಿದರು.ತಾಪಂ ಇಒ ಜಗದೀಶ ಕಮ್ಮಾರ, ಮುಂಡಗೋಡ ಶಿಕ್ಷಣಾಧಿಕಾರಿ ವಿ.ಎಸ್. ಪಟಗಾರ, ಯಲ್ಲಾಪುರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಶಿಬಿರದ ಮಹತ್ವ ತಿಳಿಸಿದರು.ಶಾಲೆಯ ಸಹ ಶಿಕ್ಷಕ ಶ್ರೀಧರ ಹೆಗಡೆ ಇನ್ನಿತರ ಅಧಿಕಾರಿಗಳು, ಪಾಲಕರು ಉಪಸ್ಥಿತರಿದ್ದರು.ರಂಜಿತಾ ಮರಾಠಿ ಪ್ರಾರ್ಥಿಸಿದರು. ಪುಷ್ಪಾ ಹಂಜಾಯಿ ನಿರ್ವಹಿಸಿದರು. ಫಾತಿಮಾ ವಂದಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Other, Yellapur

Explore More:

About Jayaraj Govi

Reader Interactions

Leave a Comment Cancel reply

Primary Sidebar

Olive Ridley Turtles Honavar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

KRIDE ನೇಮಕಾತಿ 2023

June 2, 2023 By Sachin Hegde

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ2023 SBI New Recruitment 2023

May 30, 2023 By Sachin Hegde

 ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನೇಮಕಾತಿ MRPL Recruitment 2023 

May 29, 2023 By Sachin Hegde

ಮೇ 30 ರಂದು ಬೃಹತ್ ಉದ್ಯೋಗ ಮೇಳ 2023

May 28, 2023 By Sachin Hegde

ರಂಗ ಶಿಕ್ಷಣ ತರಬೇತಿಗೆ ಅರ್ಜಿ ಆಹ್ವಾನ 2023

May 28, 2023 By Sachin Hegde

ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿ 2023 PNB RECRUITMENT FOR 240 POSTS

May 27, 2023 By Sachin Hegde

© 2023 Canara Buzz · Contributors · Privacy Policy · Terms & Conditions · Member of Digital Avatar

 

Loading Comments...