• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
    • Bank job
    • Government jobs
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಮಾಹಿತಿ
    • ಸೇವೆ
    • ಸಾಧನೆ
  • Entertainment
    • Kannada Movies
    • Hindi Movies
    • Telugu Movies
    • Movies

ಬದುಕಿಗೆ ಮತ್ತು ಬರವಣಿಗೆಗೆ ಸಾಮ್ಯತೆ ಇರಬೇಕು.

May 17, 2022 by Jayaraj Govi Leave a Comment

ಯಲ್ಲಾಪುರ-ಕಾವ್ಯವು ಆನಂದದ ಅನುಭೂತಿಯ ಮಾಧ್ಯಮ…
ಸುಪ್ತವಾದ ಪ್ರತಿಭೆಯು ಕಾವ್ಯದ ಮೂಲಕ ಅಭಿವ್ಯಕ್ತಿಸುವ ಮೂಲಕ ಆನಂದದ ಕ್ಷಣಗಳು ಪ್ರಕಟಗೊಳ್ಳಬೇಕು.
ಅಕ್ಷರದ ಸೇವಾಕಾರ್ಯದಲ್ಲಿ ಪ್ರೋತ್ಸಾಹ ಸಿಗಬೇಕು. ಕೃತಿ ರಚನೆಯ ಸ್ಪುರಣೆಯಾಗಿ ಸಾಹಿತ್ಯ ದ ಭಾವ ಮೂಡಿದಾಗ ಒಳ್ಳೆಯ ಕೊಡುಗೆ ನೀಡಲು ಸಾಧ್ಯ.
ಓದಿದ ಮಾತ್ರಕ್ಕೆ ಬರವಣಿಗೆ ಸಿದ್ದಿಸುವುದಿಲ್ಲಾ. ಬರವಣಿಗೆಯೂ ಒಂದು ಸವಾಲಿನ ಕೆಲಸ. ಪರಿಶ್ರಮ ಬೇಕು. ಎಂದು
ಕರ್ನಾಟಕ ಸಚಿವಾಲಯದ ಅಪರ ಕಾನೂನು
ಕಾರ್ಯದರ್ಶಿಗಳಾದ, ಬೆಂಗಳೂರು ಜಿಲ್ಲಾ ಸತ್ರನ್ಯಾಯಾಧೀಶರಾದ ನರಹರಿ ಪ್ರಭಾಕರ ಮರಾಠೆ ಅಭಿಪ್ರಾಯಪಟ್ಟರು.

ಅವರು ಯಲ್ಲಾಪುರ ತಾಲ್ಲೂಕಿನ ಗುಳ್ಳಾಪುರ ಸಮೀಪದ ಹೆಗ್ಗಾರಿನ ಗುಡ್ಡೆಮನೆಯ ಸಮೃದ್ಧಿ ಮನೆಯಂಗಳದಲ್ಲಿ ಉದಯೋನ್ಮುಖ ಬರಹಗಾರ್ತಿ ಪಲ್ಲವಿ ಪ್ರಸನ್ನ ಭಟ್ಟರ ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಭಾವಪಲ್ಲವಿ ಸಂಕಲನವನ್ನು ಬರಹಗಾರ ಎಲ್ ವಿ‌ ಭಟ್ಟ ಅಂಕೋಲಾ ಲೋಕಾರ್ಪಣೆಗೊಳಿಸಿದರು.

ಪಲ್ಲವಿ ಪ್ರಸನ್ನರ ಭಾವದಲೆಗಳ ಮೌನಯಾನ ಗಜಲ್ ಸಂಕಲನವನ್ನು ಲೋಕಾರ್ಪಣೆ ಮಾಡಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಪತ್ರಕರ್ತ,ಅಂಕಣಕಾರ, ವಿಠ್ಠಲದಾಸ ಕಾಮತ್ ರವರು ಗ್ರಾಮೀಣ ಭಾಗದಲ್ಲಿ ಅರಳುವ ಸಾಹಿತ್ಯ ದಲ್ಲಿ ಸತ್ವವಿದೆ. ಪಲ್ಲವಿ ಭಟ್ಟರ ಕಾವ್ಯದ ಬರವಣಿಗೆಯಲ್ಲಿ ಬದುಕಿನ ಅನುಭವವಿದೆ. ಕುತೂಹಲದ ಬೆರಗು ಇದೆ. ಬರವಣಿಗೆಗೆ ಮತ್ತು ಬದುಕಿಗೆ ಸಾಮ್ಯತೆ ಇರಬೇಕು. ‌ ಇಂದು ಬದುಕಿನ ರೋಮಾಂಚನವನ್ನೇ ಕಳೆದುಕೊಳ್ಳುವ ಬಗೆಗೆ ವಿಷಾದವಿದೆ. ಬರವಣಿಗೆಯಂತೆ ನಾವು ಬದುಕಿದರೆ ಸಾಹಿತ್ಯ ವನ್ನು ಅನುಭವಿಸಬಹುದು. ಜೊತೆಗೆ ಅಕ್ಷರ ಪ್ರೀತಿಯಿಂದ ಬದುಕನ್ನು ಬರೆದರೆ
ಬೆಳೆಯಬಹುದು. ಕೃತಿಗಳು ಜೀವಂತವಾಗಿರಬೇಕಾದರೆ ಬರಹವು ಓದುಗನ ಜೊತೆಗೆ ಸಂಹವನಗೊಳಿಸಬೇಕು. ಎಂದರು.

ಅಧ್ಯಕ್ಷತೆವಹಿಸಿದ್ದ ಹಿರಿಯ ಸಾಹಿತಿ ವಿಮರ್ಶಕ ಬೆಂಗಳೂರಿನ ಹರಿನರಸಿಂಹ ಉಪಾಧ್ಯಾಯ ರವರು ಮಾತನಾಡಿ
ಸಾಹಿತ್ಯ ಚಲನಶೀಲವಾದದ್ದು. ಯಕ್ಷಗಾನ ಕಲೆ ಈ ಭಾಗದಲ್ಲಿ ಸಾಹಿತ್ಯದ ಆಸಕ್ತಿಯನ್ನು ಬೆಳೆಸಿದೆ.
ಭಾಷೆಯ ಬಗೆಗಿನ ಗೌರವ ಸಾಹಿತ್ಯದ ಮೂಲಧಾತುವಾಗಿದೆ. ಸಾಹಿತ್ಯ ಕ್ಕೆ ಅನಾವರಣಗೊಳ್ಳುವ ಗುಣ ಹೊಂದಿದೆ. ಅದು ಭಾವನೆಯಲ್ಲಿ ಕರಗುವಿಕೆಯಲ್ಲಿ ಯಶಪಡೆಯುತ್ತದೆ. ಪಲ್ಲವಿ ಭಟ್ಟರ ಕಾವ್ಯದಲ್ಲಿ ಸೌಂದರ್ಯ ವಿದೆ. ಮುಕ್ತವಾಗಿ ಗೇಯತೆ ಹೊಂದಿ ಗೆಲುವು ಪಡೆದಿದೆ. ಎಂದರು.

ಪಲ್ಲವಿ ಪ್ರಸನ್ನರ ಭಾವಪಲ್ಲವಿ ಸಂಕಲನವನ್ನು ಮಧುಕೇಶವ ಭಾಗ್ವತ, ಮತ್ತು ಭಾವದಲೆಗಳ ಮೌನಯಾನ ಕೃತಿಯನ್ನು ಬರಹಗಾರ್ತಿ ಸ್ಮಿತಾ ರಾಘವೇಂದ್ರ ಪರಿಚಯಿಸಿದರು.
ವೇದಿಕೆಯಲ್ಲಿ ಕವಯತ್ರಿ ಪಲ್ಲವಿ ಪ್ರಸನ್ನ ಭಟ್ಟ, ಶುಭಾ ನಾಗರಾಜ, ಸಾಮಾಜಿಕ ಕಾರ್ಯಕರ್ತರಾದ ಶಿವರಾಮ ಗಾಂವ್ಕಾರ, ಕನಕನಹಳ್ಳಿ ಗಣಪತಿ ಭಟ್ಟ ಗುಡ್ಡೆ, ಪ್ರಸನ್ನ ಭಟ್ಟ, ಹಾಗೂ ಹೊಂಗಿರಣ ಬಳಗದ ಸದಸ್ಯರು ಉಪಸ್ಥಿತರಿದ್ದರು.

ಶಶಿಕಲಾ ಭಟ್ಟ ಗೋಪಿ ,ಗೀತ ಗಾಯನದ ಮೂಲಕ ಪ್ರಾರ್ಥಿಸಿದರು. ಗಣಪತಿ ಭಟ್ಟ ಗುಡ್ಡೆ ಸ್ವಾಗತಿಸಿದರು. ರಮೇಶ ಭಟ್ಟ ನಿರೂಪಿಸಿದರು.

Related Posts :

ಯಲ್ಲಾಪುರಕ್ಕೆ ಕು...
ಪ್ರತಿ ಕಾರ್ಯಗಳಲ್...
ವಿಶ್ವದರ್ಶನ ಪ್ರೌ...
ಅಂಬ್ಯುಲೆನ್ಸ್ ನಲ...

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Yellapur

Explore More:

About Jayaraj Govi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 1,398,990 visitors

Footer

JSW has proposed another port at Honavar

July 26, 2021 By Sachin Hegde

ಭಾವಕವಿ , ಸಾಹಿತಿ, ಭಟ್ಕಳದ ಉಮೇಶ ಮುಂಡಳ್ಳಿಯವರಿಗೆ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ಘೋಷಣೆ

July 5, 2022 By Sachin Hegde

ಆರ್ತಿ ಬೈಲ್ ನಲ್ಲಿ ಪಲ್ಟಿಯಾಗಿದ್ದಟ್ಯಾಂಕ‌ರ ನ್ನು ಕ್ರೇನ್ ಮೂಲಕ ತೆರವು ಗೊಳಿಸಿ ಸಂಚಾರ ಸುಗಮ

July 5, 2022 By Jayaraj Govi

ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ 2022

July 5, 2022 By Deepika

ಪತಿಯಿಂದಲೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ

July 4, 2022 By Deepika

ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

July 4, 2022 By Deepika

ಜಿಮ್ ಸ್ಥಾಪನೆಗೆ ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನ

July 4, 2022 By Deepika

© 2022 Canara Buzz · Contributors · Privacy Policy · Terms & Conditions

 

Loading Comments...
 

    loading Cancel
    Post was not sent - check your email addresses!
    Email check failed, please try again
    Sorry, your blog cannot share posts by email.