ಯಲ್ಲಾಪುರ : ಪಟ್ಟಣದ ಬಸ್ ನಿಲ್ದಾಣದ ಕ್ಯಾಂಟೀನ್ನ ಬಾಡಿಗೆ ಅತಿಯಾಗಿದ್ದು, ನಿರ್ವಹಣೆಗೆ ಹೊರೆಯಾಗುತ್ತಿದೆ ಎಂದು ಮಾಲಿಕರಾದ ಮೇಘಾ ಅಳಲು ತೋಡಿಕೊಂಡಿದ್ದಾರೆ.
ನಿಲ್ದಾಣದ ಕ್ಯಾಂಟಿನನಲ್ಲಿ ಗ್ರಾಹಕರು ವ್ಯವಹರಿಸುವದು ಕಡಿಮೆಯಾಗಿರುವದಕ್ಕೆ ಕಾರಣ ಬಸ ನಿಲ್ದಾಣದಲ್ಲಿಯೇ ಪ್ರಯಾಣಿಕರ ಉಪಹಾರ ಊಟ ಕ್ಕಾಗಿ ಬಸ್ ಗಳನ್ನು ನಿಲ್ಲಿಸದಿರುವದೇ ಆಗಿದೆ.
ಇದರಿಂದ ಗ್ರಾಹಕರು ಕಡಿಮೆಯಿದ್ದು ಕಟ್ಟಡ ಬಾಡಿಗೆ ಹಾಗೂ ಠೇವಣಿ ಹೆಚ್ಚಾಗಿರುವುದರಿಂದ ಕ್ಯಾಂಟೀನ್ ನಿರ್ವಹಣೆ ಕಷ್ಟವಾಗಿದೆ. ಬಸ್ ಸ್ಟ್ಯಾಂಡ್ ಕ್ಯಾಂಟೀನ್ನಲ್ಲಿ ಹೆಚ್ಚಾಗಿ ದೂರದ ಊರುಗಳಿಗೆ ತೆರಳುವ ಬಸ್ಗಳು ತಂಗಿದಾಗ ಮಾತ್ರ ಪ್ರಯಾಣಿಕರು ವ್ಯವಹಾರ ಮಾಡುತ್ತಾರೆ.
ಅದರೆ ಯಲ್ಲಾಪುರಕ್ಕೆ ಅಂತಹ ಬಸ್ಗಳ ಸಂಖ್ಯೆ ಕಡಿಮೆಯಾಗಿದ್ದು, ಬಹುತೇಕ ಬಸ್ಗಳು ಅಂಕೋಲಾ ಯಲ್ಲಾಪುರ ಹೆದ್ದಾರಿ ಪಕ್ಕದ ಹೋಟೆಲ್ಗಳಲ್ಲಿ ಊಟಕ್ಕೆ ನಿಲ್ಲಿಸುತ್ತಾರೆ. ಇದರಿಂದಾಗಿ ಸಹಜವಾಗಿಯೇ ಗ್ರಾಹಕರ ಸಂಖ್ಯೆ ಕಡಿಮೆಯಿದೆ. ಆದರೆ ಕಟ್ಟಡ ಬಾಡಿಗೆಯಾಗಿ ಪ್ರತಿ ತಿಂಗಳು ( ವಿದ್ಯುತ್,ಜಿ ಎಸ್.ಟಿ ಸೇರಿ) ೧.೫ ಲಕ್ಷ ಭರಣ ಮಾಡುತ್ತಿದ್ದೇವೆ. ಗಳಿಕೆಗಿಂತ ಹೆಚ್ಚಿನ ಹಣ ಬಾಡಿಗೆಯಲ್ಲಿ ಹೋಗುತ್ತಿದೆ.
ಹೋಟೆಲ್ ಮಾಲಿಕರಾದ ಮೇಘಾ ಮಾತನಾಡಿ, ನನ್ನ ಯಜಮಾನರು ೮ ಲಕ್ಷಕ್ಕೆ ಟೆಂಡರ್ ಪಡೆದಿದ್ದರು. ಅವರ ಆಕಸ್ಮಿಕ ಮರಣಾ ನಂತರ ಹೋಟೆಲ್ ನ ನಿರ್ವಹಣೆ ನಾನೇ ಮಾಡುತ್ತಿದ್ದೇನೆ. ಶುಚಿರುಚಿ ಗೆ ಆದ್ಯತೆ ನೀಡುತ್ತಿದ್ದರೂ ಗ್ರಾಹಕರಿಗೆ ತಲುಪದಂತಾಗಿ ಆರ್ಥಿಕವಾಗಿ ನಷ್ಟ ಎದುರಿಸುವಂತಾಗಿದೆ. ಇನ್ನು ಬಸ್ ಗಳನ್ನು ನಿಲ್ಲಿಸುವಂತೆ ಚಾಲಕರು ಹಾಗೂ ನಿರ್ವಾಹಕರನ್ನು ಕೋರಿದ್ದಲ್ಲಿ, ತಮಗೆ ಉಚಿತ ಊಟ ದೊರೆಯವಲ್ಲಿ ನಿಲ್ಲಿಸುತ್ತೇವೆ ಎಂಬ ಉತ್ತರವನ್ನು ನೀಡಿರುತ್ತಾರೆ.
ನಾವು ಗ್ರಾಹಕರಿಗೆ ಪೂರ್ಣ ಪ್ರಮಾಣದಲ್ಲಿ ಹಾಗೂ ಚಾಲಕ-ನಿರ್ವಾಹಕರಿಗೆ ಅರ್ಧ ಬೆಲೆಯಲ್ಲಿ ನೀಡಲಾಗುತ್ತಿದ್ದರೂ, ಬಸ್ಗಳನ್ನು ನಿಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದರು. ಅಧಿಕ ಬಾಡಿಗೆಯ ಕುರಿತು ಸಂಬAಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದೆ್ದÃವೆ ೧೫ ದಿನಗಳ ಹಿಂದೆ ತಪಾಸಣೆಗಳಾಧಿಕಾರಿಗಳು ಆಗಮಿಸಿ ಪರಿಶೀಲಿಸಿದ್ದು, ಹೆಚ್ಚಿನ ಬಸ್ ನಿಲುಗಡೆಯ ಕುರಿತು ಚರ್ಚಿಸುವುದಾಗಿ ತಿಳಿಸಿದ್ದರು. ಈ ವರೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದರು.
ಈ ಕುರಿತು ವಾಯುವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿಎಸ್ ಪಾಟೀಲ ಅವರನ್ನು ಸಂಪರ್ಕಿಸಿದಾಗ ,ಈ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಕೆ ಎಸ್ ಆರ್ ಟಿಸಿ ವಿಭಾಗೀಯ ಕಚೇರಿಗಳಲ್ಲಿ ಪರವಾಣಿಗೆಯನ್ನು ಪಡೆದುಕೊಂಡಿರುವ ಹೋಟೇಲ್ಗಳ ಮುಂದೆ ಮಾತ್ರ ಬಸ್ ನಿಲ್ಲಿಸುವ ಕ್ರಮವಿದೆ.ಅದು ರಾತ್ರಿ ವೇಳೆ ಸಂಚರಿಸುವ ಬಸ್ ಗಳ ಪ್ರಯಾಣಿಕರ ಊಟಕ್ಕಾಗಿ ಮಾತ್ರ ನಿಲ್ಲಿಸಬಹುದಾಗಿದ್ದರೂ ಸಿಬ್ಬಂದಿಗಳು ತಮಗೆ ಬೇಕಾದ ಹೋಟೆಲ್ ಬಳಿ ನಿಲ್ಲಿಸುವಂತಿಲ್ಲ ಎಂದರಲ್ಲದೇ ಯಲ್ಲಾಪುರ ಬಸ್ ನಿಲ್ದಾಣದಲ್ಲಿ ಕ್ಯಾಂಟಿನ ನಡೆಸುವ ಮಹಿಳೆಯ ಅಳಲಿಗೆ ಸ್ಪಂದಿಸಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.
ಈ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಕೆ ಎಸ್ ಆರ್ ಟಿಸಿ ವಿಭಾಗೀಯ ಕಚೇರಿಗಳಲ್ಲಿ ಪರವಾಣಿಗೆಯನ್ನು ಪಡೆದುಕೊಂಡಿರುವ ಹೋಟೇಲ್ಗಳ ಮುಂದೆ ಮಾತ್ರ ನಿಲ್ಲಿಸುವ ಕ್ರಮವಿದೆ.ಅದು ರಾತ್ರಿ ವೇಳೆ ಸಂಚರಿಸುವ ಬಸ್ ಗಳಿಗೆ ಮಾತ್ರವೇ ಹೊರತು ಸಿಬ್ಬಂದಿಗಳು ತಮಗೆ ಬೇಕಾದ ಹೋಟೆಲ್ ಬಳಿ ನಿಲ್ಲಿಸುವಂತಿಲ್ಲ. ಆ ಹೆಣ್ಣು ಮಗಳಿಗೆ ಕ್ಯಾಂಟಿನ ನಡೆಸಲು ಕೆ ಎಸ್ ಆರ್ಟಿಸಿಯಿಂದ ಸಾಧ್ಯವಾದ ಸಹಕಾರ ನೆರವು ನೀಡುತ್ತೇವೆ.
— ವಿ .ಎಸ್. ಪಾಟೀಲ ವಾಕರಸಾನಿ ಅಧ್ಯಕ್ಷ
Leave a Comment