ಸಾಮಾನ್ಯವಾಗಿ ಜನರ ಆರೋಗ್ಯ ಕೆಟ್ಟಾಗ ವೈದ್ಯರು ಒಂದಿಷ್ಟು ಉಪಚಾರ ಮಾಡಿದ ನಂತರ ಹಣ್ಣುಗಳನ್ನು ಸೇವಿಸಿ ಎಂಬ ಸಲಹೆ ನೀಡುತ್ತಾರೆ. ಅದರಲ್ಲೂ ಸೇಬು, ಕಿತ್ತಳೆ, ಮೊಸಂಬಿ, ದಾಳಿಂಬೆಯAತಹ ಹಣ್ಣುಗಳ ಸೇವನೆ ಆರೋಗ್ಯಕ್ಕೆ ತುಂಬ ಉಪಕಾರಿ ಎಂದು ಹೇಳುವುದುಂಟು. ಇದು ಸತ್ಯ ಕೂಡ.
ಈ ಭೂಮಿಯ ಮೇಲೆ ಆ ದೇವರು ಸೃಷ್ಟಿಸಿದ ಅದ್ಭುತಗಳಲ್ಲಿ ತರಹೇವಾರಿ ಹಣ್ಣುಗಳು ವಿಶಿಷ್ಟವಾಗಿವೆ. ಅಂದರೆ ಹಣ್ಣುಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾದ ಎಲ್ಲ ಪೌಷ್ಟಿಕಾಂಶಗಳು ಇರುವುದೇ ಇದಕ್ಕೆ ಕಾರಣ. ಹಾಗಾಗಿ ಇವುಗಳ ಸೇವನೆಯು ಆರೋಗ್ಯ ವೃದ್ಧಿ ಮಾಡುತ್ತದೆ. ಇದರ ಜತೆಗೆ ತರಕಾರಿಗಳು ಸಹ ಆರೋಗ್ಯ ವರ್ಧನೆಗೆ ಸಾಕಷ್ಟು ಉಪಯುಕ್ತವಾಗಿವೆ. ಅದರಲ್ಲೂ ಕಚ್ಚಾ ತರಕಾರಿ ತಿನ್ನುವುದು ಬಹಳ ಅನುಕೂಲ, ಹುರಿದ, ಕರಿದ, ಬೇಕರಿ ಪದಾರ್ಥಕ್ಕಿಂತ ಯಾವುದಾದರೂ ಒಂದು ಹಣ್ಣು ಅಥವಾ ತರಕಾರಿ ತಿಂದರೆ ಅವರಿರಿದ ಲಾಭಗಳು ಅನೇಕ ಎಂಬುದು ತಜ್ಞರ ಅಭಿಮತ. ಪ್ರತಿಯೊಂದು ಹಣ್ಣಿನಲ್ಲಿ ವಿವಿಧ ರೀತಿಯ ಪೋಷಕಾಂಶಗಳು ಇರುತ್ತವೆ.
ಮನುಷ್ಯನಿಗೆ ನಿಸರ್ಗವು ನೀಡಿರುವ ಆರೋಗ್ಯವರ್ಧಕಗಳೇ ಈ ಹಣ್ಣುಗಳು ಎಂಬುದು ವಿಶೇಷ. ಸುಮಾರು 2 ಸಾವಿರ ಬಗೆಯ ಹಣ್ಣುಗಳನ್ನು ನಾವು ನೋಡಬಹುದು, ಅದರಲ್ಲಿ ಯಾವುದು ಹೆಚ್ಚು ಪೌಷ್ಟಿಕಾಂಶಯುಕ್ತವಾಗಿದೆ ಎಂಬ ಗೊಂದಲ ಸೃಷ್ಟಿಯಾಗುವುದು ಸಹಜ. ಹಾಗಾಗಿ ನಿರಂತರವಾಗಿ ಆರೋಗ್ಯ ಕಾಪಾಡಿಕೊಂಡು ಹೋಗಲು ಕೆಲವೊಂದಿಷ್ಟು ಹಣ್ಣುಗಳನ್ನು. ನಿಯಮಿತವಾಗಿ ಸೇವಿಸಬೇಕು. ಇನ್ನು ಋತುಮಾನಕ್ಕೆ ತಕ್ಕಂತೆ ಸಿಗುವ ಹಣ್ಣುಗಳು ಅವುಗಳದ್ದೇ ಆದ ವೈಶಿಷ್ಟ್ಯ ಹೊಂದಿವೆ.
ಬಾಳೆಹಣ್ಣು, ಸೇಬು, ಪೇರಲ, ಕಿತ್ತಳೆ, ಪಪ್ಪಾಯ, ಕಲ್ಲಂಗಡಿ, ಕರಬೂಜ, ಹಲಸಿನ ಹಣ್ಣು, ಮಾವಿನ ಹಣ್ಣು ಹೀಗೆ ತರಹೇವಾರಿ ಹಣ್ಣುಗಳನ್ನು ಇಲ್ಲಿ ಹೆಸರಿಸಬಹುದು. ವಿಟಮಿನ್ ಸಿ ಅಂಶ ಇರುವ ಹಣ್ಣುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹೃದಯ, ಕಿಡ್ನಿ, ಹೊಟ್ಟೆ, ಮೆದುಳು, ಚರ್ಮದ ಕಾಂತಿ ಹೀಗೆ ದೇಹದ ಸೌಂದರ್ಯಕ್ಕೆ ಹಣ್ಣುಗಳು ಸಹಕಾರಿ, ಪಾರ್ಶ್ವವಾಯ, ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು ಮುಂತಾದ ಕಾಯಿಲೆಗಳನ್ನು ದೂರ ಇಡಲು ಹಣ್ಣುಗಳ ನಿಯಮಿತ ಸೇವನೆ ಬಹಳ ಅನುಕೂಲವಾಗಿವೆ.
ಬರ್ರಿ ಹಣ್ಣುಗಳು ನೀಲಿನೇರಳೆ ಬಣ್ಣದಿಂದ ಕೂಡಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜತೆಗೆ ದೇಹಕ್ಕೆ ಹಾನಿ ಉಂಟು ಮಾಡುವ ಜೀವಕಣಗಳ ವಿರುದ್ಧ ಹೋರಾಡುವ ಅಂಶಗಳನ್ನು ಹೊಂದಿದೆ. ಹೃದಯರೋಗ, ಅಧಿಕ ಬೊಜ್ಜು, ರಕ್ತದೊತ್ತಡದಂತಹ ಸಮಸ್ಯೆಗೆ ಉತ್ತಮ ಪರಿಹಾರವಾಗಿ ಈ ಹಣ್ಣನ್ನು ಬಳಸಬಹುದು ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಬಾಳೆ ಹಣ್ಣಿನಲ್ಲಿ ಹೆಚ್ಚು ಪೊಟ್ಯಾಶಿಯಂ ಅಂಶವಿರುತ್ತದೆ. ವಿಟಮಿನ್ ಸಿ ಅಂಶ ಹೆಚ್ಚಾಗಿರುತ್ತದೆ. ಒಂದು ಇಡೀ ಕಿತ್ತಳೆ ಹಣ್ಣನ್ನು ಸೇವಿಸುವದರಿಂದ ಉರಿ, ರಕ್ತದೊತ್ತಡ, ಕೊಲೆಸ್ಟಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಬಹುದಾಗಿದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.
ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಾವಿನ ಹಣ್ಣು ಆರೋಗ್ಯಕ್ಕೆ ಉತ್ತಮ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮಾವಿನ ಹಣ್ಣನ್ನು ಸೇವಿಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಮಾವಿನಲ್ಲಿ ಫೈಬರ್ ಅಂಶ ಹೆಚ್ಚು.
ಇದು ಕರುಳಿಗೆ ಹೆಚ್ಚು ಉಪಯೋಗಕಾರಿ ಹಾಗೂ ಜೀರ್ಣಕ್ರಿಯೆ ಸರಾಗವಾಗಲು ಬಳಸಬಹುದು. ಅನಾನಸ್ ಜನಪ್ರಿಯ ಮತ್ತು ಉಷ್ಣವಲಯದಲ್ಲಿ ಹೆಚ್ಚು ಕಂಡುಬರುವ ಹಣ್ಣುಗಳಲ್ಲಿ ಒಂದಾಗಿದೆ. ವಿಟಮಿನ್ ಸಿ ಅಂಶವನ್ನು ಹೊಂದಿರುತ್ತದೆ. ಚಯಾಪಚಯ ಕ್ರಿಯೆ ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಈ ಹಣ್ಣು ಹೆಚ್ಚು ಉಪಯುಕ್ತ ಬೇಸಿಗೆಯಲ್ಲಿ ಹಣ್ಣುಗಳಿಂದ ತಯಾರಿಸಿದ ಜ್ಯೂಸ್ ಬಹಳ ಉಪಕಾರಿ, ಹಣ್ಣಿನಲ್ಲಿರುವ ಪೋಷಕಾಂಶಗಳು ಚರ್ಮ ಮತ್ತು ಕೂದಲನ್ನು ಆರೋಗ್ಯವಾಗಿರಿಸುತ್ತವೆ. ಹಣ್ಣುಗಳನ್ನು ಯಾವಾಗ ತಿನ್ನಬೇಕು ಎಂಬ ವಿಷಯದಲ್ಲಿ ತಜ್ಞರು ಸಲಹೆ ಪಡೆಯುವುದು ಶ್ರೇಯಸ್ಕರ
Leave a Comment