• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • Story Archives
      • gadgets
      • APPLY LINK

ಸಚಿದ್ವಯರಿಂದ ಪಕೃತಿ ವಿಕೋಪ ಪ್ರಗತಿ ಪರಿಶೀಲನಾ ಸಭೆ

July 22, 2022 by Jayaraj Govi Leave a Comment

IMG 20220720 195101

ಯಲ್ಲಾಪುರ : ಮಳೆಯಿಂದ ಹಾನಿಗೊಳಗಾದವರಿಗೆ ಮಾನದಂಡಗಳ ಹೊರತಾಗಿ, ಮಾನವೀಯತೆ ಹಾಗೂ ಪರಿಸ್ಥಿತಿಯನ್ನು ಅವಲೋಕಿಸಿ, ತುರ್ತಾಗಿ ಪರಿಹಾರ ಧನವನ್ನು ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

IMG 20220720 WA0137


ಪಟ್ಟಣದ ಅಡಿಕೆ ಭವನದಲ್ಲಿ ನಡೆದ ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಪಕೃತಿ ವಿಕೋಪ ಪ್ರಗತಿ ಪರಿಶಿಲನಾ ಸಭೆಯಲ್ಲಿ, ಮಳೆಯಿಂದಾದ ಹಾನಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ‌ ಸಚಿವ ಶ್ರೀನಿವಾಸ ಪೂಜಾರಿ, ಮಳೆಯಿಂದ ಮನೆಗಳಿಗೆ ಬಾಗಶಃ ಹಾನಿಯಾಗಿದ್ದರೆ, ತಕ್ಷಣವೇ ಅವರಿಗೆ 50 ಸಾವಿರ ಪರಿಹಾರವನ್ನು ನೀಡಿ. ಮಾರ್ಗ ಸೂಚಿಗಳ ಪ್ರಕಾರ ಎಣಿಕೆ ಮಾಡಿ ಪರಿಹಾರ ನೀಡುವುದು ಬೇಡ. ಇನ್ನೆರಡು ದಿನಗಳಲ್ಲಿ ಎಲ್ಲರಿಗೂ ಪರಿಹಾರ ಧನ ನೀಡುವಂತಾಗಬೇಕು ಎಂದು ಮುಂಡಗೋಡ ಹಾಗೂ ಯಲ್ಲಾಪುರ ತಹಶೀಲ್ದಾರರಿಗೆ ತಿಳಿಸಿದ್ದಾರೆ.

ಸಚಿವ ಶಿವರಾಮ ಹೆಬ್ಬಾರ್‌ ಮಾತನಾಡಿ, ಮಳೆಯಿಂದ ತೀವೃ ಹಾನಿಗೊಳಗಾಗಿರುವ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳನ್ನು ಜಿಲ್ಲಾಧಿಕಾರಿಗಳಿಂದ ದೊರೆಯುವ ನೆರೆ ಪರಿಹಾರದ 2 ಲಕ್ಷ ಮೊತ್ತದಲ್ಲಿ ತತಕ್ಷಣದಲ್ಲಿ ಸರಿಪಡಿಸಿ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ತೊಂದರೆಯಾದಲ್ಲಿ ಅದಕ್ಕೆ ಬಿಇಓ ಹಾಗೂ ಪಿಡಿಓ ಗಳು ನೇರವಾಗಿ ಜವಾಬ್ದಾರರಾಗುತ್ತೀರಿ. ಅಂತೆಯೇ ಎಲ್ಲಾ ಇಲಾಖೆಗಳ ಎಲ್ಲ ಅಧಿಕಾರಿಗಳು ಅಧಿಕ ಪರಿಶ್ರಮದೊಂದಿಗೆ, ಜನರಿಗೆ ಯಾವುದೇ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಬೇಕು. ಕೆಲಸ ಮಾಡಲು ಮನಸ್ಸಿಲ್ಲದವರು ತಿಳಿಸಿದ್ದಲ್ಲಿ, ತಕ್ಷಣ ಅವರನ್ನು ವರ್ಗಾವಣೆ ಮಾಡಲು ಹಿಂಜರಿಕೆ ಮಾಡುವುದಿಲ್ಲ ಎಂದು ಎಚ್ಚರಿಸಿದರು.

IMG 20220720 WA0147

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ್‌, ಸಹಾಯಕ ಆಯುಕ್ತ ದೇವರಾಜ್‌ ಆರ್.‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಜಿ.ಹೆಗಡೆ, ಪ.ಪಂ. ಅಧ್ಯಕ್ಷೆ ಸುನಂದಾ ದಾಸ್‌, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್‌, ತಹಶೀಲ್ದಾರ್‌ ಶ್ರೀಕೃಷ್ಣ ಕಾಮ್ಕರ್‌, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್‌ ಎಲ್ಲ ಇಲಾಖೆಯ ಅಧಿಕಾರಿಗಳು, ಪಿಡಿಓಗಳು ಉಪಸ್ಥಿತರಿದ್ದರು.

ಎಷ್ಟು ಹಾನಿ ?
ತಾಲೂಕಿನಲ್ಲಿ ಒಟ್ಟೂ 29 ಮನೆಗೆ ಹಾನಿಯಾಗಿದ್ದು 24 ಭಾಗಶಃ, 4 ತೀವೃ ಹಾಗೂ 1 ಸಂಪೂರ್ಣ ಹಾನಿಯಾಗಿದೆ. ಅಂದಾಜು 52 ಹೆಕ್ಟೆರ್‌ ಪ್ರದೇಶದಲ್ಲಿ ಅಡಿಕೆಗೆ ಕೊಳೆ ರೋಗ ಆರಂಭವಾಗಿದೆ. ಒಟ್ಟೂ 48 ಶಾಲೆಗಳಲ್ಲಿ ಕೊಠಡಿಗಳಿಗೆ ಹಾನಿಯಗಿದ್ದು‌ ಮೇಲ್ಚಾವಣೆ, ಕಂಪೌಂಡ್‌ ಗೋಡೆ ಕುಸಿತದ ಬಗ್ಗೆ ವರದಿಯಾಗಿದೆ. 19 ಅಂಗನವಾಡಿ ಕೇಂದ್ರಗಳಿಗೆ ತೊಂದರೆಯಾಗಿದ್ದು, 1 ಕಟ್ಟಡ ಬಳಕೆಗೆ ಯೋಗ್ಯವಾಗದೆ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಝೆಡ್‌ಪಿ ವ್ಯಾಪ್ತಿಯ 52 ರಸ್ತೆಗಳು ಹಾಳಾಗಿದ್ದು, 4 ಕೆರೆ ಹಾನಿ ಸೇರಿದಂತೆ ಒಟ್ಟಾರೆ 12 ಕೋಟಿಯಷ್ಟು ಹಾನಿ ಅಂದಾಜಿಸಲಾಗಿದೆ. ಪಿಡಬ್ಲ್ಯೂಡಿ ವ್ಯಾಪ್ತಿಯಲ್ಲಿ 46 ಕಿಮಿ ಅಷ್ಟು ರಾಜ್ಯ ಹೆದ್ದಾರಿ, 12 ಸರ್ಕಾರಿ ಕಟ್ಟಡಗಳಿಗೆ ಒಟ್ಟಾರೆ 53 ಕೋಟಿಯಷ್ಟು ಹಾನಿಯಾಗಿದೆ. ಹೆಸ್ಕಾಂ ಗೆ ಸೇರಿದ 836 ಕಂಬಗಳು ಮುರಿದಿದ್ದು, ಈಗಾಗಲೇ 749 ಕಂಬಗಳನ್ನು ಬದಲಾಯಿಸಲಾಗಿದೆ. 60 ಟ್ರಾನ್ಸ್‌ಫಾರ್ಮರ್‌ ಸೇರಿದಂತೆ ಒಟ್ಟಾರೆ 177 ಲಕ್ಷ ಹಾನಿ ಉಂಟಾಗಿದೆ. ಪಟ್ಟಣ ವ್ಯಾಪ್ತಿಯ ಕಾಳಮ್ಮನಗರ ಬಳಿ ರಾಜಕಾಲುವೆಗೆ ಹಾನಿಯುಂಟಾಗಿದ್ದು, 1.5 ಕೋಟಿ ವೆಚ್ಚದಲ್ಲಿ ದುರಸ್ಥಿ ಅವಶ್ಯಕತೆಯಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Other, Yellapur

Explore More:

About Jayaraj Govi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

SSLC ITI ಆದವರಿಗೆ BSF ನೇಮಕಾತಿ 2023 BSF new Recruitment 2023 Apply Online for Constable posts

February 3, 2023 By Sachin Hegde

SSLC ಪದವಿ ಆದವರಿಗೆ ಕೆಎಂಎಫ್ ಶಿಮುಲ್ ನೇಮಕಾತಿ 2023 KMF SHIMUL new recruitment 2023 Apply Online

February 2, 2023 By Sachin Hegde

10th NTC ಆದವರಿಗೆ ರೈಲ್ ವೀಲ್ ಫ್ಯಾಕ್ಟರಿ ನೇಮಕಾತಿ 2023 Rail Wheel Factory new Recruitment 2023 Apply for apprentice Posts

February 2, 2023 By Sachin Hegde

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹುತಾತ್ಮರ ದಿನಾಚರಣೆ ಒಡೆದ ಮನಸ್ಸುಗಳನ್ನು ಬೆಸೆಯುವಲ್ಲಿ ರಾಹುಲ್ ನೇತ್ರತ್ವದ ಭಾರತ್ ಜೋಡೋ ಯಶಸ್ವಿ -ಜಗದೀಪ್ ಎನ್ ತೆಂಗೇರಿ

January 31, 2023 By Sachin Hegde

SSLC ಆದವರಿಗೆ ಭಾರತೀಯ ನೌಕಾಪಡೆಯ ನೇಮಕಾತಿ 2023 Indian Navy new Recruitment 2023 Apply Online for Tradesman Skilled Posts

January 31, 2023 By Sachin Hegde

SSLC/PUC ಪದವಿ ಆದವರಿಗೆ ಬೆಂಗಳೂರು ಡಿಸಿಸಿ ಬ್ಯಾಂಕ್ ನೇಮಕಾತಿ 2023 BDCCB new Recruitment 2023 Apply Online for Computer Operator/Stenographer/Driver/JA posts

January 30, 2023 By Sachin Hegde

© 2023 Canara Buzz · Contributors · Privacy Policy · Terms & Conditions · Member of Digital Avatar

 

Loading Comments...