• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ತಾ ಪಂ ದಲ್ಲಿ ಜಮಾಬಂದಿ ಸಭೆ :ಆಕ್ಷೇ ಪ ಗಳ ಸುರಿಮಳೆ

August 27, 2022 by Jayaraj Govi Leave a Comment

IMG 20220825 173659

ಯಲ್ಲಾಪುರ : ಪಟ್ಟಣದ ಗಾಂಧಿ ಕುಟೀರದಲ್ಲಿ ನಡೆದ ತಾಲೂಕ ಪಂಚಾಯತದ ೨೦೨೧-೨೨ನೇ ಸಾಲಿನ ಜಮಾ ಬಂಧಿ ಸಭೆಯಲ್ಲಿ ವಾದವಿವಾದಕ್ಕೆ ಹೆಚ್ಚಿನ ಸಮಯ ನುಂಗಿ ಹಾಕಿತು. ಸಭೆ ಆರಂಭವಾಗುತ್ತಿದ್ದAತೆ ಕೆಲ ಸಾರ್ವಜನಿಕರು ಮಾತನಾಡಿ, ಜಮಾ ಬಂಧಿ ಸಭೆಯ ಕುರಿತು ನಾಗರಿಕರಿಗೆ ಸಮರ್ಪಕವಾದ ಮಾಹಿತಿ ತಲುಪುತ್ತಿಲ್ಲ. ಈ ಕುರಿತು ಸರಿಯಾದ ಪ್ರಚಾರದ ಅವಶ್ಯಕತೆ ಇದೆ. ಅಷ್ಟೇ ಅಲ್ಲದೇ ಅನೇಕ ಕಡೆ ಇನ್ನೂ ಸಹ ಕೆಲಸಗಳೇ ಆಗಿಲ್ಲ. ಅಂತಹ ಕಡೆಯೂ ಬಿಲ್ ಪಾಸ್ ಮಾಡಲಾಗಿದೆ.

ಇದರ ಬಗ್ಗೆ ನಮಗೆ ಮಾಹಿತಿಯನ್ನು ನೀಡಿ, ಕೆಲಸ ಆಗಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ ಮುಂದಿನ ದಿನಗಳಲ್ಲಿ ಸಭೆಯನ್ನು ಮಾಡುವಂತೆ ಒತ್ತಾಯಿಸಿದರು.

IMG 20220825 WA0118


ವಿಶೇಷವಾಗಿ ಆನಗೋಡ, ಮಾವಿನಮನೆ ಪಂಚಾಯತ ವ್ಯಾಪ್ತಿಯಿಂದ ಪ್ರಮುಖರು ಮಾತನಾಡಿ, ವಿಶೇಷ ಅನುದಾನಗಳ ಬಳಕೆ ಸರಿಯಾಗಿ ಆಗಬೇಕಿದೆ. ಬಿಲ್‌ಗಳನ್ನು ಓದುವಾಗ ಅದರಲ್ಲಿ ನಿರ್ಮಿಸಲಾದ ರಸ್ತೆಯ ಉದ್ದ ಅಗಲಗಳನ್ನು ಉಲ್ಲೇಖಿಸಿ ಓದುವಂತೆ ಸೂಚಿಸಿದರು. ಕೆಲಸ ಪೂರ್ಣವಾದ ನಂತರ ಜಾಗದಲ್ಲಿ ಜನರಿಗೆ ಕಾಣುವ ರೀತಿಯಲ್ಲಿ ಯೋಜನೆಯ ಹೆಸರು, ಮೊತ್ತ, ಗುತ್ತಿಗೆದಾರರ ಹೆಸರು ಸೇರಿದಂತೆ ಎಲ್ಲ ಮಾಹಿತಿಯುಳ್ಳ ನಾಮಫಲಕಗಳನ್ನು ಅಳವಡಿಸಬೇಕು. ಈ ಮೂಲಕ ಜನರಿಗೂ ಆಗಿರುವ ಕೆಲಸದ ಮಾಹಿತಿ ದೊರಕಿದಂತಾಗುತ್ತದೆ ಎಂದು ಸಲಹೆ ನೀಡಿದರು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಾರಿ ಬಸವರಾಜು ಮಾತನಾಡಿ, ಎಲ್ಲರ ದೂರುಗಳ ಕುರಿತು ಗಂಭೀರವಾಗಿ ಚರ್ಚಿಸಲಾಗುವುದು. ಸಲಹೆಗಳನ್ನು ಸ್ವೀಕರಿಸಿ ಜಾರಿಗೆ ತರಲಾಗುವುದು. ಅಲ್ಲದೇ ಕಾಮಗಾರಿಗಳು ನಡೆದಿಲ್ಲ ಎನ್ನುವ ಕಡೆ ತಾಂತ್ರಿಕ ಜ್ಞಾನವುಳ್ಳ ಅಧಿಕಾರಿಗಳ ಸಮಿತಿಯೊಂದನ್ನು ರಚಿಸಿ, ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.

ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್, ಮಾತನಾಡಿ
ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಕ್ಕೆ ಪ್ರಸಕ್ತ ಆರ್ಥಿಕ ವರ್ಷ ದಲ್ಲಿ ತಾಪಂ ದಿಂದ ಅನುಷ್ಠಾನ ವಾಗಿರುವ ಕಾಮಗಾರಿ,ಯೋಜನೆ ಗಳ ಮಾಹಿತಿ ಯುಳ್ಳ ನಾಮಫಲಕ ಅಳವಡಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವದು ಎಂದರು.ಸಭೆಯಲ್ಲಿ ತಾ.ಪಂ. ಆಡಳಿತಾಧಿಕಾರಿ ನಟರಾಜ್ ಟಿ.ಎಚ್.,ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಸಭೆಯ ನಂತರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಾರಿ ಬಸವರಾಜು, ತಾ.ಪಂ. ಆಡಳಿತಾಧಿಕಾರಿ ನಟರಾಜ್ ಟಿ.ಎಚ್. ಸಭೆಯ ನಂತರ ಅಧಿಕಾರ ಗಳು ಅನಗೋಡ,ಬಿಸಗೋಡ ಗೆ ಭೇಟಿ ನೀಡಿ ಹಾಲಿನ ಡೈರಿಯ ೧ ಲಕ್ಷ ವೆಚ್ಚದ ಕೊಠಡಿಯ ಮುಂದುವರೆದ ಕಾಮಗಾರಿ ಹಾಗೂ ಕೇಸಿನಮನೆಗೆ ಅಂದಾಜು ೨ ಲಕ್ಷ ಮೌಲ್ಯದ ರಸ್ತೆ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Other, Yellapur

Explore More:

About Jayaraj Govi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...