ಭಟ್ಕಳ:
ಸಹಾಯಕ ಆಯುಕ್ತರ ವಾಹನವನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಬ್ಬರ ಮೇಲೆ ಮುರ್ಡೇಶ್ವರ ಠಾಣೆಯಲ್ಲಿ ಸಹಾಯಕ ಆಯುಕ್ತ ಎಂ. ಎನ್. ಮಂಜುನಾಥ ಅವರು ದೂರು ದಾಖಲಿಸಿದ್ದು ಓರ್ವನನ್ನು ಬಂಧಿಸಿದ್ದು ಇನ್ನೋರ್ವನ ಬಂಧನಕ್ಕೆ ಪೊಲಿಸರು ಬಲೆ ಬೀಸಿದ್ದಾರೆ.
ಬಂಧಿತನನ್ನು ಈಶ್ವರ ರಾಮಸ್ವಾಮಿ ಎಂದು ಗುರುತಿಸಲಾಗಿದೆ.
ಸಹಾಯಕ ಆಯುಕ್ತರಾದ ಎಂ. ಎನ್. ಮಂಜುನಾಥ ಅವರು ಜಿಲ್ಲಾಧಿಕಾರಿಗಳ ಮೌಖಿಕ ಆದೇಶದ ಮೇರೆಗೆ ಬೇಂಗ್ರೆ ಗ್ರಾಮದ ಮಲ್ಲಾರಿಯಲ್ಲಿ ಐ.ಆರ್.ಬಿ. ಕಂಪೆನಿಯವರು ಗುತ್ತಿಗೆಗೆ ತೆಗೆದುಕೊಂಡ ಕಲ್ಲುಕ್ವಾರಿಯಲ್ಲಿ ಸ್ಪೋಟ ಮಾಡುತ್ತಿದ್ದು ಅದರಿಂದ ಆಗಿರುವ ಹಾನಿಯನ್ನು ಪರಿಶೀಲಿಸಲು ತೆರಳಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಇನ್ನೋವಾ ಕಾರಿನಲ್ಲಿ ಬಂದ ಈಶ್ವರ ರಾಮಸ್ವಾಮಿ ಹಾಗೂ ಮೋಹನ ಮಂಜುನಾಥ ನಾಯ್ಕ ಎನ್ನುವವರು ಸಹಾಯಕ ಆಯುಕ್ತನ್ನುದ್ದೇಶಿಸಿ ಬೈದಿದ್ದಲ್ಲದೇ ಅವರ ವಾಹನವನ್ನು ಅಡ್ಡಗಟ್ಟಿ ಸರಕಾರಿ ಕರ್ತವ್ಯಕ್ಕತೆ ಅಡ್ಡಿಪಡಿಸಿದ್ದಾರೆ. ಈ ಕುರಿತು ಸಹಾಯಕ ಆಯುಕ್ತ ಎಂ.ಎನ್.ಮಂಜುನಾಥ ಅವರು ನೀಡಿದ ದೂರನ್ನು ದಾಖಲಿಸಿಕೊಂಡ ಮುರ್ಡೇಶ್ವರ ಪೊಲಿಸ್ ಸಬ್ ಇನ್ಸಪೆಕ್ಟರ್ ಭೀಮಸಿಂಗ್ ಲಮಾಣಿ ಅವರು ಇಬ್ಬರ ಮೇಲೆ ಕೇಸು ದಾಖಲಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆನ್ನಲಾಗಿದೆ
Leave a Comment