ಹೊನ್ನಾವರ `ಹೊನ್ನಾವರ ಪ.ಪಂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ ಆರೋಪದ ದೂರಿನ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳು ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಮೂವರ ಸದಸ್ಯತ್ವ ಊರ್ಜಿತಗೊಳಿಸಿ ಆದೇಶ ಹೊರಡಿಸಿರುವುದು ಸತ್ಯಕ್ಕೆ ಸಂದ ಜಯವಾಗಿದೆ' ಎಂದು ಪ.ಪಂ ಅಧ್ಯಕ್ಷೆ ಜೈನಾಬಿ ಸಾಬ್ ಹೇಳಿದರು. ನಾವು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ನಾವು ಯಾವುದೇ ಪಕ್ಷದ ಚುನಾವಣಾ ವಿಪ್ ಉಲ್ಲಂಘನೆ ಮಾಡಿಲ್ಲ. ಆದರೂ ಮಾಜಿ ಬ್ಲಾಕ್ ಕಾಂಗ್ರೆಸ್ … [Read more...] about ಪ.ಪಂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ ಆರೋಪ
ಆದೇಶ
ಇದ್ದರೂ ಉಪಯೋಗವಿಲ್ಲದ ಉದ್ಯೋಗ ನೊಂದಣಿ ಕೇಂದ್ರ
ಕಾರವಾರ: ವಿವಿಧ ನೌಕರಿಗಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಂದ ತುಂಬಿ ತುಳುಕಾಡುತ್ತಿದ್ದಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಈಚೆಗೆ ಖಾಲಿ ಹೊಡೆಯುತ್ತಿದೆ. ನಿರುದ್ಯೋಗದ ಸಂಖ್ಯೆ ಹೆಚ್ಚುತ್ತಿದ್ದರೂ ಉದ್ಯೋಗ ನೊಂದಣಿ ಕೇಂದ್ರದಲ್ಲಿ ವರ್ಷದಿಂದ ವರ್ಷಕ್ಕೆ ನೋಂದಣಿ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಪ್ರಸ್ತುತ ವಿವಿಧ ವಿದ್ಯಾರ್ಹತೆ ಪಡೆದವರಾರೂ ಉದ್ಯೋಗ ವಿನಿಮಯ ಕೇಂದ್ರಲ್ಲಿ ನೋಂದಣಿಗೆ ಬರುತ್ತಿಲ್ಲ. ಹೀಗಾಗಿ ಇಲಾಖೆಗೆ ಸರಕಾರಕ್ಕೆ ನೀಡಿದ ಗುರಿ ಸಾಧನೆಯು … [Read more...] about ಇದ್ದರೂ ಉಪಯೋಗವಿಲ್ಲದ ಉದ್ಯೋಗ ನೊಂದಣಿ ಕೇಂದ್ರ
ವಕ್ಟ ಕಚೇರಿ ಸ್ಥಳಾಂತರಕ್ಕೆ ವಿರೋಧ
ಕಾರವಾರ:ಜಿಲ್ಲಾ ಕೇಂದ್ರದಲ್ಲಿದ್ದ ವಕ್ಟ್ ಕಚೇರಿಯನ್ನು ಏಕಾಏಕಿ ಶಿರಸಿಗೆ ವರ್ಗಾಯಿಸಿರುವ ಬಗ್ಗೆ ಜಿಲ್ಲೆಯ ವಿವಿಧ ವಕ್ಟ್ ಸಂಸ್ಥೆಗಳ ಅಧ್ಯಕ್ಷರು ವಿರೋಧ ವ್ಯಕ್ತಪಡಿಸಿದ್ದಾರೆ. ಶಿರಸಿಯಿಂದ ಮರಳಿ ಜಿಲ್ಲಾಕೇಂದ್ರ ಕಾರವಾರಕ್ಕೆ ಈ ಕಚೇರಿ ವರ್ಗಾಯಿಸುವಂತೆ ಶುಕ್ರವಾರ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಬಗ್ಗೆ ಹೊರಡಿಸಿದ್ದ ಅಧಿಕೃತ ಜ್ಞಾಪನವನ್ನು ಹೈಕೋರ್ಟ್ನಲ್ಲಿ ರಿಟ್ ಪೆಟಿಶನ್ ಸಲ್ಲಿಸಿ … [Read more...] about ವಕ್ಟ ಕಚೇರಿ ಸ್ಥಳಾಂತರಕ್ಕೆ ವಿರೋಧ
ಸಹಾಯಕ ಆಯುಕ್ತರ ವಾಹನವನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದನೆ:ಓರ್ವನ ಬಂಧನ
ಭಟ್ಕಳ:ಸಹಾಯಕ ಆಯುಕ್ತರ ವಾಹನವನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಬ್ಬರ ಮೇಲೆ ಮುರ್ಡೇಶ್ವರ ಠಾಣೆಯಲ್ಲಿ ಸಹಾಯಕ ಆಯುಕ್ತ ಎಂ. ಎನ್. ಮಂಜುನಾಥ ಅವರು ದೂರು ದಾಖಲಿಸಿದ್ದು ಓರ್ವನನ್ನು ಬಂಧಿಸಿದ್ದು ಇನ್ನೋರ್ವನ ಬಂಧನಕ್ಕೆ ಪೊಲಿಸರು ಬಲೆ ಬೀಸಿದ್ದಾರೆ. ಬಂಧಿತನನ್ನು ಈಶ್ವರ ರಾಮಸ್ವಾಮಿ ಎಂದು ಗುರುತಿಸಲಾಗಿದೆ. ಸಹಾಯಕ ಆಯುಕ್ತರಾದ ಎಂ. ಎನ್. ಮಂಜುನಾಥ ಅವರು ಜಿಲ್ಲಾಧಿಕಾರಿಗಳ ಮೌಖಿಕ … [Read more...] about ಸಹಾಯಕ ಆಯುಕ್ತರ ವಾಹನವನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದನೆ:ಓರ್ವನ ಬಂಧನ
ಉಪ ವಲಯ ಅರಣ್ಯಾಧಿಕಾರಿಯ ನಿಯೋಜನೆ ರದ್ದುಗೊಳಿಸಲು ಪ್ರತಿಭಟನೆ
ದಾಂಡೇಲಿ :ನಗರದ ಉಪ ವಲಯ ಅರಣ್ಯಾಧಿಕಾರಿ ಜಿ. ಸಂತೋಷ ಇವರನ್ನು ದಾಂಡೇಲಿಯಿಂದ ವಿರ್ನೊಲಿ ವಲಯದ ಕುಳಗಿ ಡಿಪೋಗೆ ನಿಯೋಜನೆಗೊಳಿಸಿ ಹಳಿಯಾಳದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಆದೇಶ ಮಾಡಿರುವುದನ್ನು ಖಂಡಿಸಿ ಶುಕ್ರವಾರರಂದು ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಪಿ. ಮೂರ್ತಿ ಹಾಗೂ ಜಿಲ್ಲಾಧ್ಯಕ್ಷ ಎನ್. ಪ್ರೇಮ್ಕುಮಾರ ಇವರ ನೇತ್ರತ್ವದಲ್ಲಿ ಸಂಘಟನೆಯ ಸ್ಥಳೀಯ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ನಗರದ ವಿಶೇಷ … [Read more...] about ಉಪ ವಲಯ ಅರಣ್ಯಾಧಿಕಾರಿಯ ನಿಯೋಜನೆ ರದ್ದುಗೊಳಿಸಲು ಪ್ರತಿಭಟನೆ