ಕಾರವಾರ:
ಜಿಲ್ಲಾ ಕೇಂದ್ರದಲ್ಲಿದ್ದ ವಕ್ಟ್ ಕಚೇರಿಯನ್ನು ಏಕಾಏಕಿ ಶಿರಸಿಗೆ ವರ್ಗಾಯಿಸಿರುವ ಬಗ್ಗೆ ಜಿಲ್ಲೆಯ ವಿವಿಧ ವಕ್ಟ್ ಸಂಸ್ಥೆಗಳ ಅಧ್ಯಕ್ಷರು ವಿರೋಧ ವ್ಯಕ್ತಪಡಿಸಿದ್ದಾರೆ. ಶಿರಸಿಯಿಂದ ಮರಳಿ ಜಿಲ್ಲಾಕೇಂದ್ರ ಕಾರವಾರಕ್ಕೆ ಈ ಕಚೇರಿ ವರ್ಗಾಯಿಸುವಂತೆ ಶುಕ್ರವಾರ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.
ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಬಗ್ಗೆ ಹೊರಡಿಸಿದ್ದ ಅಧಿಕೃತ ಜ್ಞಾಪನವನ್ನು ಹೈಕೋರ್ಟ್ನಲ್ಲಿ ರಿಟ್ ಪೆಟಿಶನ್ ಸಲ್ಲಿಸಿ ಪ್ರಶ್ನಿಸಲಾಗಿತ್ತು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ಎಸ್. ದಿನೇಶಕುಮಾರ ಅವರು ಮೇ 11ರಂದು ಮಧ್ಯಂತರ ಆದೇಶವನ್ನು ಹೊರಡಿಸಿದ್ದರು. ಅದರ ಅನ್ವಯ ಕಾರವಾರದಿಂದ ಸ್ಥಳಾಂತರ ಮಾಡದಂತೆ 8 ವಾರಗಳ ತಡೆಯಾಜ್ಞೆ ನೀಡಿದ್ದರು. ಆದರೂ ಕೂಡ ಅದನ್ನು ಗಾಳಿಗೆ ತುರಿ, ನಗರದ ಎಲ್ಲ ವಕ್ಫ್ ಸಂಸ್ಥೆಗಳು ಹಾಗೂ ಸಾರ್ವಜನಿಕರ ವಿರೋಧದ ನಡುವೆಯೂ ಇದೇ 20ರಂದು ಏಕಾಏಕಿ ಶಿರಸಿಗೆ ಸ್ಥಳಾಂತರ ಮಾಡಲಾಗಿದೆ. ಇದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ’ ಎಂದು ತಿಳಿಸಿದರು.
ಜಿಲ್ಲಾ ವಕ್ಫ್ ಕಚೇರಿಯನ್ನು ಮರಳಿ ಕಾರವಾರಕ್ಕೆ ತರಬೇಕು. ನಗರದಲ್ಲಿಯೇ ಅದಕ್ಕೆ ಸ್ಥಳಾವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದರು. ಮನವಿ ಸಲ್ಲಿಸುವ ನಿಯೋಗದಲ್ಲಿ ಜನಶಕ್ತಿ ವೇದಿಕೆಯ ಮಾಧವ ನಾಯಕ, ಪ್ರಮುಖರಾದ ಇಕ್ಬಾಲ್ ಸೈಯದ್, ಶೇಖ್ ಅಲ್ತಾಫ್, ಇಮ್ತಿಯಾಜ್ ಬುಕಾರಿ, ಮೈನುದ್ದೀನ್ ಶೇಖ್ ಇದ್ದರು.
Leave a Comment