ದಾಂಡೇಲಿ :
ನಗರದ ಉಪ ವಲಯ ಅರಣ್ಯಾಧಿಕಾರಿ ಜಿ. ಸಂತೋಷ ಇವರನ್ನು ದಾಂಡೇಲಿಯಿಂದ ವಿರ್ನೊಲಿ ವಲಯದ ಕುಳಗಿ ಡಿಪೋಗೆ ನಿಯೋಜನೆಗೊಳಿಸಿ ಹಳಿಯಾಳದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಆದೇಶ ಮಾಡಿರುವುದನ್ನು ಖಂಡಿಸಿ ಶುಕ್ರವಾರರಂದು ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಪಿ. ಮೂರ್ತಿ ಹಾಗೂ ಜಿಲ್ಲಾಧ್ಯಕ್ಷ ಎನ್. ಪ್ರೇಮ್ಕುಮಾರ ಇವರ ನೇತ್ರತ್ವದಲ್ಲಿ ಸಂಘಟನೆಯ ಸ್ಥಳೀಯ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ನಗರದ ವಿಶೇಷ ತಹಶೀಲ್ದಾರ್ ಮೂಲಕ ಸಲ್ಲಿಸಿದರು.
ಜಿ. ಸಂತೋಷ ಇವರು ದಲಿತ ವರ್ಗಕ್ಕೆ ಸೇರಿದ್ದು ಇವರ ಮೇಲೆ ಅನಾವಶ್ಯಕವಾಗಿ ಕೆಲ ಸ್ಥಳೀಯ ಕಾರ್ಪೆಂಟರ್ ಸಂಘಟನೆಯವರು ಹಾಗೂ ಕೆಲ ರಾಜಕೀಯ ಪ್ರಭಾವಿ ವ್ಯಕ್ತಿಗಳು ಇಲ್ಲ ಸಲ್ಲದ ಆರೋಪ ಮಾಡಿದ್ದಾರೆಂದು ಮನವಿಯಲ್ಲಿ ಆಪಾದಿಸಲಾಗಿದೆ.
ನಿಷ್ಠಾವಂತ ಜಿ. ಸಂತೋಷ ಇವರ ನಿಯೋಜನೆಯನ್ನು ರದ್ದಗೊಳಿಸಿ ಅವರು ಮೊದಲಿದ್ದ ಸ್ಥಳದಲ್ಲೆ ಮುಂದುವರೆಸಬೇಕಾಗಿ ಮನವಿಯಲ್ಲಿ ಆಗ್ರಹಿಸಲಾಗಿದೆ.
Leave a Comment