ಕಾರವಾರ:
ಭವಿಷ್ಯದಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಗಂಗಾವಳಿ ನದಿಗೆ ವೆಂಟೆಡ್ ಬ್ಯಾರೆಜ್ ನಿರ್ಮಿಸುವ ಯೋಜನೆ ಸರ್ಕಾರದ ಮುಂದಿದೆ. ಇದಕ್ಕಾಗಿ 158.22 ಕೋಟಿ ರೂ ವೆಚ್ಚದಲ್ಲಿ ಆಡಳಿತಾತ್ಮಕ ಅನುಮೋದನೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಸಂಯುಕ್ತ ನೀರು ಸರಬರಾಜು ಯೋಜನೆಯಡಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಾರವಾರ ಅಂಕೋಲಾ ಭಾಗದ ಪಟ್ಟಣಗಳು, ಮಾರ್ಗ ಮಧ್ಯದ ಹಳ್ಳಿಗಳು, ಬಿಣಗಾದ ಸೋಲಾರಿಸ್ ಕೆಮ್ಪೆಕ್ ಲಿ. ಹಾಗೂ ಸೀಬರ್ಡ್ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಗಂಗಾವಳಿ ನದಿಗೆ ಅಡ್ಡಲಾಗಿ ವೆಂಟೆಡ್ ಬ್ಯಾರೆಜ್ ನಿರ್ಮಾಣ ಮಾಡಲು ಅಂದಾಜು ಪಟ್ಟಿ ಸಿದ್ದವಾಗಿದೆ. ಅಗತ್ಯವಿರುವ ಹಣವನ್ನು ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನದಿಂದ ಪಡೆದು, ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕಾರ್ಯಕ್ಕೆ ಮುಂದಾಗಿದೆ.
ಯೋಜನೆಯನ್ನು 2010ರಲ್ಲಿಯೇ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಧ್ಯದ ಒಡಂಬಡಿಕೆ ಪತ್ರದಂತೆ ಅರ್ಥಿಕ ಮಾದರಿಯನ್ನು ನೀರಿನ ಬೇಡಿಕೆಗೆ ಅನುಗುಣವಾಗಿ ಅನುಪಾತ 47,27 ; 52.63 ರಂತೆಮಾಡಿಕೊಳ್ಳಲಾಗಿತ್ತು. ಅದರಂತೆ ಕರ್ನಾಟಕ ಸರಕಾರದ ಪಾಲಿಗೆ ಪ್ರತಿ ದಿನಕ್ಕೆ 37.82 ದಶಲಕ್ಷ ಲೀಟರ್ ನೀರು ಮತ್ತು ಭಾರತ ಸರಕಾರಕ್ಕೆ ಪ್ರತಿದಿನ 40.86 ದಶಲಕ್ಷ ಲೀಟರ್ ನೀರೀನ ಬೇಡಿಕೆ ಇದ್ದು, ಒಟ್ಟು 78.68 ಲಕ್ಷ ಅವಶ್ಯವಿದೆ ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದಕ್ಕಾಗಿ ರಾಜ್ಯ ಸರಕಾರ 8348.17 ಲಕ್ಷ ರೂ ಮತ್ತು ಭಾರತ ಸರಕಾರ 7513.83 ಲಕ್ಷ ರೂ ಪಾಲಿನ ಮೊತ್ತ ಸೇರಿ ಒಟ್ಟು 15862.00 ಲಕ್ಷ ರೂಗಳಲ್ಲಿ ಯೋಜನೆಯ ಆಡಳಿತಾತ್ಮಕ ಮಂಜೂರಿಗೆ ಕಳುಹಿಸಲಾಗಿತ್ತು. ಆದರೆ ಇದಕ್ಕೆ ಆಗ ಒಪ್ಪಿಗೆ ಸಿಕ್ಕಿರಲಿಲ್ಲ.
ಪ್ರಸ್ತಾವಿತ ಅಂಕೋಲಾ ತಾಲೂಕಿನಲ್ಲಿ ಹರಿಯುವ ಗಂಗಾವಳಿ ನದಿಗೆ ವೆಂಟೆಡ್ ಬ್ಯಾರೇಜ್ನ ನಿರ್ಮಿತಿಯು ಸಾಲಿಡ್ ಗ್ರಾವಿಟಿ ಆರ್.ಸಿ.ಸಿ ನಿರ್ಮಾಣವಾಗಿದೆ. 10 ಮೀಟರ್ ಮಧ್ಯಕ್ಕೆ ಕಂಬವನ್ನು ನಿರ್ಮಿಸಲಾಗುತ್ತದೆ. ಬಳಿಕ ಹೆಚ್ಚಿನ ನೀರಿನ ಹರಿವಿಗೆ ಅನುಕೂಲವಾಗುವಂತೆ 8 ಮೇ. ಅಗಲದ ವೆಂಟ್ನ್ನು ನಿರ್ಮಿಸಲಾಗುತ್ತಿದ್ದು, ಅಫ್ಲಾಕ್ಸ್ ಕೇವಲ 17 ಸೆಂ.ಮೀ ಇರಲಿದೆ. ಇದು ಪ್ರವಾಹ ಸಂದರ್ಭದಲ್ಲಿ ಹೆಚ್ಚಿನ ನೀರು ಸಂಗ್ರಹವಾದಲ್ಲಿ ದಂಡೆಗಳು ಮುಳುಗಡೆಯಾಗುವ ಭೀತಿ ಇರುವದಿಲ್ಲ. ವೆಂಟ್ನ ಅಗಲವು ದೊಡ್ಡದಾಗಿರುವುದರಿಂದ ಮಳೆಗಾಲದಲ್ಲಿ ಮರ ಅಥವಾ ಇನ್ನಾವುದೇ ಗಿಡ ಗಂಟಿಗಳು ಬಂದಲ್ಲಿ ಅದು ಸರಾಗವಾಗಿ ಮುಂದೆ ಹೋಗಲು ಅನುಕೂಲವಾಗುತ್ತದೆ. ಈಗಾಗಲೇ ವೆಂಟೆಜ್ ಬ್ಯಾರೇಜ್ ವಿನ್ಯಾಸ ಬಗ್ಗೆ ಹಲವು ರಿತಿಯಲ್ಲಿ ಚರ್ಚಿಸಿದ್ದು, ಆಧುನಿಕ ತಂತ್ರಜ್ಞಾನ ಬಳಸಿ ಭಾರತೀಯ ಗುಣಮಟ್ಟಕ್ಕೆ ತಕ್ಕಂತೆ ಬ್ಯಾರೇಜ್ ನಿರ್ಮಿಸಲಾಗುತ್ತದೆ.
ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸುವ ವೆಂಟೆಡ್ ಬ್ಯಾರೇಜ್ನಲ್ಲಿ 2068ಕ್ಕೆ ಜನಸಂಖ್ಯೆಗೆ ತಕ್ಕಂತೆ ನೀರು ಪೂರೈಕೆ ಮಾಡಿದಲ್ಲಿ ಕಾರವಾರ ನಗರದಲ್ಲಿ 150148 ಜನಸಂಖ್ಯೆಗೆ 20.27 ದಶಲಕ್ಷ ಲೀಟರ್, ಅಂಕೋಲಾ ಪಟ್ಟಣಕ್ಕೆ 57,663 ಜನಸಂಖ್ಯೆಗೆ 7.78 ದಶಲಕ್ಷ ಲೀಟರ್, ಮಾರ್ಗ ಮಧ್ಯದ ಹಳ್ಳಿಗಳಲ್ಲಿ 250486 ಜನಸಂಖ್ಯೆಗೆ ದಿನ ಬಿಟ್ಟು ದಿನ ನೀರು ಪೂರೈಕೆ ಮಾಡಿದಲ್ಲಿ 8.77 ದಶಲಕ್ಷ ಲೀಟರ್, ಬಿಣಗಾದ ಸೋಲಾರಿಸ್ ಕೆಮ್ಟೆಕ್ ಗೆ 1 ದಶಲಕ್ಷ ಲೀಟರ್ ನೀರು ಸೇರಿ ಒಟ್ಟು 78.68 ದಶಲಕ್ಷ ನೀರಿನ ಬೇಡಿಕೆ ಇದೆ. ಯೋಜನೆಯನ್ನು ಜಾರಿಗೊಳಿಸುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆ 2014-15ನೇ ಸಾಲಿನಲ್ಲಿ ಮತ್ತು 2013-14ನೇ ಸಾಲಿನಲ್ಲಿ ಜಲಸಂಪನ್ಮೂಲ ಇಲಾಖೆಯ ದರಪಟ್ಟಿಗಳಿಗನುಗುಣವಾಗಿ ತಯಾರಿಸಲಾಗಿದೆ. ಅಂದಾಜು ಪಟ್ಟಿಯಲ್ಲಿ ಶೇ. 12 ಇಟಿಪಿ ಶೇ.3 ಕಂಟಿಂಜೆನ್ಸಿ ಶುಲ್ಕ, ಶೇ1 ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ, ಶೇ1 ಸರ್ವೆ ಮತ್ತು ವಿನ್ಯಾಸ ಶುಲ್ಕ, ಶೇ.1.5 ಕೆಪಾಸಿಟಿ ಬಿಲ್ಡಿಂಗ್ ಶುಲ್ಕ, ಪ್ರತಿ ವರ್ಷ ಶೇ.5 ರಂತೆ ಎರಡು ವರ್ಷಕ್ಕೆ ಶೇ. 10ರ ದರ ಹೊದಾಣಿಕೆ, 3ನೇ ಸಂಸ್ಥೆ ತಪಾಸಣಾ ಶುಲ್ಕ ಶೇ0.50, ಶೇ 15 ಟೆಂಡರ್ ಪ್ರಿಮಿಯಂ, ಸ್ಕಾಡಾ ವ್ಯವಸ್ಥೆಗೆ ಅನುವು ಮತ್ತು ಭೂ ಸ್ವಾದೀನ ಶುಲಕ್ಷವನ್ನು ಒಳಗೋಂಡ ಮೊತ್ತ ರೂ15.862.00 ಲಕ್ಷವಾಗಿದೆ.
Leave a Comment