ಹಳಿಯಾಳ: ಪರಿಸರ ಇಲಾಖೆಯಿಂದ ಅನುತಿ ಇಲ್ಲದೇ ಇರುವುದರಿಂದ ಮರಳು(ಉಸುಕು) ಸಮಸ್ಯೆ ಈಡಿ ರಾಜ್ಯದಲ್ಲಿ ತಲೆದೂರಿದೆ. ಸಮಸ್ಯೆ ಪರಿಹಾರಕ್ಕಾಗಿ ಕಾನೂನಾತ್ಮಕವಾಗಿ ಎಲ್ಲ ರೀತಿಯಿಂದ ಪ್ರಯತ್ನ ಮಾಡಲಾಗುತ್ತಿದ್ದು ಮುಂದಿನ ಒಂದು ವಾರದ ಅವಧಿಯಲ್ಲಿ ಈ ಮರಳು ಸಮಸ್ಯೆ ಬಗೆಹರಿಯಲಿದೆ ಎಂದು ಕಂದಾಯ ಇಲಾಖೆ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಹಳಿಯಾಳ ಪುರಸಭೆ ವ್ಯಾಪ್ತಿಯ 2017-18ನೇ ಸಾಲಿನ ಎಸ್ಎಫ್ಸಿ ವಿಶೇಷ ಅನುದಾನದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಹಳಿಯಾಳ ಪುರಸಭೆ … [Read more...] about ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ವಾರದಲ್ಲಿ ಮರಳು ಸಮಸ್ಯೆ ಬಗೆಹರಿಯಲಿದೆ. ಹಳಿಯಾಳ ಹಾಗೂ ಶಿರಸಿಯಲ್ಲಿ ಮರಳು ಡಿಪೋ ತೆರೆಯಲಾಗುವುದು ಸಚಿವ ಆರ್ ವಿ ದೇಶಪಾಂಡೆ ಭರವಸೆ
ಉತ್ತರ ಕನ್ನಡ ಜಿಲ್ಲೆ
ರೈತರು ಕರೆ ನೀಡಿದ ಹಳಿಯಾಳ ಬಂದ್ ಯಶಸ್ವಿ
ಹಳಿಯಾಳ:- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ವಿರುದ್ದ ಬುಧವಾರ ದಿ.5 ರಂದು ಕಬ್ಬು ಬೆಳೆಗಾರ ರೈತರು, ರೈತ ಸಂಘದವರು ಕರೆ ನೀಡಿದ್ದ ಹಳಿಯಾಳ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಬೇಡಿಕೆ ಈಡೇರದೇ ಇದ್ದರೇ ಸೆ.18 ರಂದು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಾಕಿಕೊಳ್ಳಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. 2016-17ನೇ ಸಾಲಿಗೆ ಪೂರೈಸಿದ ಕಬ್ಬಿನ ಬಾಕಿ ಬಿಲ್ ಪ್ರತಿ ಟನ್ಗೆ 305ರೂ. ನೀಡುವಂತೆ ಆಗ್ರಹಿಸಿ, ಹಳಿಯಾಳದ … [Read more...] about ರೈತರು ಕರೆ ನೀಡಿದ ಹಳಿಯಾಳ ಬಂದ್ ಯಶಸ್ವಿ
ಗುರುದಾಸ್ ಕಾಮತ್ ನಿಧನದಿಂದ ಭಾರೀ ನಷ್ಟ: ದೇಶಪಾಂಡೆ ಕಂಬನಿ
ಬೆಂಗಳೂರು, ಆಗಸ್ಟ್ 23, 2018- ಕಾಂಗ್ರೆಸ್ಸಿನ ಹಿರಿಯ ನಾಯಕ ಗುರುದಾಸ್ ಕಾಮತ್ ಅವರ ಹಠಾತ್ ನಿಧನದಿಂದ ಪಕ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ನಷ್ಟವುಂಟಾಗಿದೆ ಎಂದು ಕಂದಾಯ ಸಚಿವ ಆರ್ ವಿ ದೇಶಪಾಂಡೆ ಶೋಕಿಸಿದ್ದಾರೆ. ``ಕಾಮತ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ನಮ್ಮವರೇ ಆಗಿದ್ದರು. ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಲ್ಲಿ ಹಾಗೂ ಪಕ್ಷವು ನಡೆಸಿಕೊಂಡು ಬಂದಿದ್ದ ಹಲವು ಹೋರಾಟಗಳಲ್ಲಿ ಕಾಮತರು … [Read more...] about ಗುರುದಾಸ್ ಕಾಮತ್ ನಿಧನದಿಂದ ಭಾರೀ ನಷ್ಟ: ದೇಶಪಾಂಡೆ ಕಂಬನಿ
ಗೇರುಸೊಪ್ಪಾ ಕಾನನ ನಡುವೆ ಪರಿಸರ ಅಧ್ಯಯನ
ಹೊನ್ನಾವರ : ಉತ್ತರ ಕನ್ನಡ ಜಿಲ್ಲೆ ಜಲಪಾತಗಳ ತವರು. ಮಳೆಗಾಲದಲ್ಲಿ ಇವುಗಳ ಸಂಖ್ಯೆ ಹೆಚ್ಚಾಗುತ್ತದೆ. ಹೊನ್ನಾವರ ತಾಲ್ಲೂಕಿನ ‘ಬಂಗಾರ ಕುಸುಮ’ ಜಲಪಾತ ಗೇರುಸೊಪ್ಪಾ ಬಂಗಾರ ಮಕ್ಕಿಯಿಂದ 3 ಕಿ.ಮೀ. ದೂರ ಇರುವ ಮಲೆಮನೆ ಘಟ್ಟದಲ್ಲಿ ಇದೆ. ಕಾನನ ಮಧ್ಯೆ ಇರುವ ಈ ಜಲಪಾತ ಮಳೆಯಿಂದ ಚೆಲುವು ಹೆಚ್ಚಿಸಿಕೊಂಡಿದೆ. ಹಲವಾರು ವರ್ಷಗಳ ಹಿಂದೆ ಪ್ರವಾಸಕ್ಕೆ ಹೋಗಿದ್ದ ನ್ಯೂ ಇಂಗ್ಲಿಷ್ ಸ್ಕೂಲ್ ವಿದ್ಯಾರ್ಥಿಗಳೇ ಇದಕ್ಕೆ ನಾಮಕರಣ ಮಾಡಿದ್ದಾರೆ. ಪರಿಸರ ಹೋರಾಟಗಾರ್ತಿ ದಿವಂಗತ ಕುಸುಮಾ … [Read more...] about ಗೇರುಸೊಪ್ಪಾ ಕಾನನ ನಡುವೆ ಪರಿಸರ ಅಧ್ಯಯನ
ಉತ್ತರ ಕನ್ನಡ ಜಿಲ್ಲೆಯನ್ನು ಬುಡಕಟ್ಟು ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಆಗ್ರಹ
ಹಳಿಯಾಳ:ಗುಜರಾತ ಸರ್ಕಾರ ಅಲ್ಲಿನ ಸಿದ್ಧಿ ಸಮುದಾಯದವರನ್ನು ಮೂಲ ನಿವಾಸಿಗಳೆಂದು ಘೋಷಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರವು ಸಿದ್ಧಿಗಳನ್ನು ಮೂಲ ನಿವಾಸಿಗಳೆಂದು ಘೋಷಿಸಬೇಕು ಅಲ್ಲದೇ ಉತ್ತರ ಕನ್ನಡ ಜಿಲ್ಲೆಯನ್ನು ಬುಡಕಟ್ಟು ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಸಿದ್ಧಿ ಸಮುದಾಯದ ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆಯು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಇಲ್ಲಿಯ ಮಿನಿ ವಿಧಾನಸೌಧಕ್ಕೆ … [Read more...] about ಉತ್ತರ ಕನ್ನಡ ಜಿಲ್ಲೆಯನ್ನು ಬುಡಕಟ್ಟು ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಆಗ್ರಹ