ಯಲ್ಲಾಪುರ:ಯಾವುದೇ ಪರವಾನಗಿ ಇಲ್ಲದೇ, ಅಕ್ರಮವಾಗಿ ಲಾರಿಯೊಂದರಲ್ಲಿ ಸಾಗಿಸಲಾಗುತ್ತಿದ್ದ 9 ಜಾನುವಾರುಗಳನ್ನು ಭಾನುವಾರ ಪಟ್ಟಣದ ಜೋಡುಕೆರೆ ಬಳಿ ಪೊಲೀಸರು ರಕ್ಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಐದು ಜನರನ್ನು ಬಂಧಿಸಿದ್ದಾರೆ.ಬಂಧಿತರನ್ನು ಮಂಗಳೂರಿನ ಮಹಮ್ಮದ್ ಹುಸೇನ್ ಮೊವಾರಿ ಅಬ್ಬಾ, ಸಾದಿಕ್ ಇದಿನಬ್ಬಾ, ಬಾತೀಶ ಅಬ್ದುಲ್ ರಜಾಕ್, ಮಹಮ್ಮದ್ ಅರಫಾತ್ ಅಬ್ದುಲ್ ಖಾದರ್ ಹಾಗೂ ಮಹಮ್ಮದ್ ಹನೀಫ್ ಗುಡೆಮನೆ ಖಾದರಸಾಬ್ ಎಂದು ಗುರುತಿಸಲಾಗಿದೆ.ಇವರು ಬಲಿ ಕೊಡುವ … [Read more...] about ಅಕ್ರಮ ಜಾನುವಾರು ಸಾಗಾಟ ; ಐವರ ಬಂಧನ
ಎರಡು
ಗಂಧದ ಮರ ಕಡಿದು ಪರಾರಿಯಾದ ಆರೋಪಿಗಳು.
ಜೋಯಿಡಾ - ಜೋಯಿಡಾ ತಾಲೂಕಿನ ಜೋಯಿಡಾ ಅರಣ್ಯ ವ್ಯಾಪ್ತಿಯ ನಾಗೋಡಾ ಕಾಡಿನಲ್ಲಿ ಕಿಡಿಗೇಡಿಗಳು ಎರಡು ಗಂಧದ ಮರ ಕತ್ತರಿಸಿ ಪರಾರಿಯಾದ ಘಟನೆ ನಡೆದಿದೆ. ಜೋಯಿಡಾ ವಲಯ ಅರಣ್ಯಾಧಿಕಾರಿಯವರ ಕಾರ್ಯದಕ್ಷತೆಯನ್ನು ಅರಿತಿದ್ದ ಈ ಆರೋಪಿಗಳು ಎರಡು ಗಂಧದ ಮರಗಳನ್ನು ಕಡಿದು ನಾಗೋಡಾದ ಕಾಡಿನಲ್ಲಿಯೇ ಒಣಗಲು ಬಿಟ್ಟಿದ್ದರು, ಮರ ಕತ್ತರಿಸಿದ್ದನ್ನು ಗಮನಿಸಿದ ಇಲ್ಲಿನ ಅರಣ್ಯ ಸಿಬ್ಬಂದಿಗಳು ಕೂಡಲೇ ಕಾರ್ಯಗತವಾಗಿ ಮರ ಕಡಿದವರನ್ನು ಹುಡುಕಾಡಿದ್ದಾರೆ, ಆದರೆ ಆರೋಪಿಗಳು … [Read more...] about ಗಂಧದ ಮರ ಕಡಿದು ಪರಾರಿಯಾದ ಆರೋಪಿಗಳು.
ಉತ್ತರ ಭಾಗದ ಸಮುದ್ರದ ಹೊರ ಆವರಣದಲ್ಲಿ ಶಸ್ತ್ರಾಭ್ಯಾಸ
ಕಾರವಾರ:ಕಾರವಾರ ನೌಕಾನೆಲೆಯ ಸಿಬ್ಬಂದಿಗಳು ಆಗಸ್ಟ 21 ರಂದು ಉತ್ತರ ಭಾಗದ ಸಮುದ್ರದ ಹೊರ ಆವರಣದಲ್ಲಿ ಬೆ. 8 ರಿಂದ ಸಂಜೆ 6 ರವರೆಗೆ ಶಸ್ತ್ರಾಭ್ಯಾಸ ನಡೆಸಲಿದ್ದಾರೆ. ಮೀನುಗಾರರು ಈ ಅವಧಿಯಲ್ಲಿ ಉತ್ತರ ಭಾಗದ ಸಮುದ್ರದ ಹೊರ ಆವರಣ, ಕಾಮತ್ ಬೀಚ್ಗಳಿಂದ ಎರಡು ನಾಟಿಕಲ್ ಮೈಲು ದೂರದಲ್ಲಿರುವಂತೆ ನೌಕಾನೆಲೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ. … [Read more...] about ಉತ್ತರ ಭಾಗದ ಸಮುದ್ರದ ಹೊರ ಆವರಣದಲ್ಲಿ ಶಸ್ತ್ರಾಭ್ಯಾಸ
ಕ್ಷುಲ್ಲಕ ಕಾರಣಕ್ಕೆ ಬಾಲಕಿಯನ್ನು ಠಾಣೆಗೆ ಎಳೆದೊಯ್ದ ಪೊಲೀಸ್
ಕಾರವಾರ: ಶಾಲೆಗೆ ಹೊರಟ ಬಾಲಕಿಯನ್ನು ಪೊಲೀಸರು ಒತ್ತಾಯಪೂರ್ವಕವಾಗಿ ಪೊಲೀಸ್ ಠಾಣೆಗೆ ಕರೆದೊಯ್ದು ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಬುಧವಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ್ ದೂರು ನೀಡಿರುವ ಪಾಲಕರು, ಪೊಲೀಸರ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಜುಲೈ 31ರಂದು ತಮ್ಮ ಬೈಕ್ಗೆ ಬೈಕ್ಗೆ ಬಾಲಕಿ ಗೆರೆ ಎಳೆದು ಹಾಳು ಮಾಡಿರುವ ಬಗ್ಗೆ ಇಕ್ಬಾಲ್ ಇದಾಯತ್, ನಜೀರ್ ಶೇಖ್ ಎಂಬಾತರು ಪೊಲೀಸರಿಗೆ ದೂರು … [Read more...] about ಕ್ಷುಲ್ಲಕ ಕಾರಣಕ್ಕೆ ಬಾಲಕಿಯನ್ನು ಠಾಣೆಗೆ ಎಳೆದೊಯ್ದ ಪೊಲೀಸ್
ಏಳು ತಿಂಗಳ ಅವದಿಯಲ್ಲಿ ಜಿಲ್ಲೆಯ ಹೆದ್ದಾರಿಯಲ್ಲಿ 326 ಅಪಘಾತ
ಕಾರವಾರ: ಕಳೆದ ಏಳು ತಿಂಗಳ ಅವದಿಯಲ್ಲಿ ಜಿಲ್ಲೆಯ ಹೆದ್ದಾರಿಯಲ್ಲಿ 326 ಅಪಘಾತ ಸಂಭವಿಸಿದೆ. ಪರಿಣಾಮ 310 ಜನ ಸಾವನಪ್ಪಿದ್ದಾರೆ. ಕಾರವಾರದಿಂದ ಭಟ್ಕಳ ಹಾಗೂ ಬಾಳೆಗುಳಿಯಿಂದ ಹುಬ್ಬಳ್ಳಿ ಮಾರ್ಗವಾಗಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಜಿಲ್ಲೆಯನ್ನು ಹಾದು ಹೋಗಿದ್ದು, ಕಳೆದ ಐದು ವರ್ಷಗಳಲ್ಲಿ ಈ ವರ್ಷವೇ ಅಧಿಕ ಅಪಘಾತಗಳು ನಡೆದಿವೆ. … [Read more...] about ಏಳು ತಿಂಗಳ ಅವದಿಯಲ್ಲಿ ಜಿಲ್ಲೆಯ ಹೆದ್ದಾರಿಯಲ್ಲಿ 326 ಅಪಘಾತ