ಜೋಯಿಡಾ –
ಜೋಯಿಡಾ ತಾಲೂಕಿನ ಜೋಯಿಡಾ ಅರಣ್ಯ ವ್ಯಾಪ್ತಿಯ ನಾಗೋಡಾ ಕಾಡಿನಲ್ಲಿ ಕಿಡಿಗೇಡಿಗಳು ಎರಡು ಗಂಧದ ಮರ ಕತ್ತರಿಸಿ ಪರಾರಿಯಾದ ಘಟನೆ ನಡೆದಿದೆ.
ಜೋಯಿಡಾ ವಲಯ ಅರಣ್ಯಾಧಿಕಾರಿಯವರ ಕಾರ್ಯದಕ್ಷತೆಯನ್ನು ಅರಿತಿದ್ದ ಈ ಆರೋಪಿಗಳು ಎರಡು ಗಂಧದ ಮರಗಳನ್ನು ಕಡಿದು ನಾಗೋಡಾದ ಕಾಡಿನಲ್ಲಿಯೇ ಒಣಗಲು ಬಿಟ್ಟಿದ್ದರು, ಮರ ಕತ್ತರಿಸಿದ್ದನ್ನು ಗಮನಿಸಿದ ಇಲ್ಲಿನ ಅರಣ್ಯ ಸಿಬ್ಬಂದಿಗಳು ಕೂಡಲೇ ಕಾರ್ಯಗತವಾಗಿ ಮರ ಕಡಿದವರನ್ನು ಹುಡುಕಾಡಿದ್ದಾರೆ, ಆದರೆ ಆರೋಪಿಗಳು ಪರಾರಿಯಾಗಿದ್ದು ಕೂಡಲೇ ಅವರನ್ನು ಹಿಡಿಯುವ ಭರವಸೇ ನೀಡಿದ್ದಾರೆ.
ಸುಮಾರು 10 ರಿಂದ 12 ವರ್ಷದ ಎರಡು ಗಂಧದ ಮರಗಳನ್ನು ಕಡಿದ್ದಿದ್ದು ಇದರ ಮೌಲ್ಯ 2 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ, ಕರ್ನಾಟಕ ಅರಣ್ಯ ಇಲಾಕೆಯ ವತಿಯಿಂದ ಕೇಸ್ ದಾಕಲಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.
ಮಹೀಮ್ ಜನ್ನು – ವಲಯ ಅರಣ್ಯಾಧಿಕಾರಿ ಜೋಯಿಡಾ
ಜೋಯಿಡಾ ಅರಣ್ಯ ವ್ಯಾಪ್ತಿಯ ನಾಗೋಡಾ ಅರಣ್ಯದಲ್ಲಿ 2 ಗಂಧದ ಮರವನ್ನು ಕಡಿಯಲಾಗಿದೆ, ಕೂಡಲೇ ಆರೋಪಿಗಳನ್ನು ಸೆರೆ ಹಿಡಿಯುವ ಪ್ರಯತ್ನ ಮಾಡುತ್ತೇವೆ, ನಮ್ಮ ಅರಣ್ಯ ಇಲಾಖಾ ತಂಡ ಆರೋಪಿಗಳನ್ನು ಹುಡುಕುವ ಪ್ರಯತ್ನ ನಡೆಸಿದ್ದು, ಪ್ರಕರಣವನ್ನು ದಾಖಲಿಸಿದ್ದೇವೆ,
Leave a Comment