ಹೊನ್ನಾವರ :ತಾಲೂಕಿನ ಪಾವಿನಕುರ್ವಾ, ತೊಪ್ಪಲಕೇರಿಯಲ್ಲಿ ಕಡಲಕೊರೆತದ ಕೂಗು ಮತ್ತೆ ಕೇಳಿ ಬಂದಿದೆ. ಕಳೆದ 2 ದಿನಗಳಿಂದ ಬೀಸುತ್ತಿರುವ ಅಬ್ಬರದ ಮಳೆಗಾಳಿಗೆ ಸಮುದ್ರ ಉಬ್ಬರಿಸಿ, ತೆರೆಗಳೆದ್ದು ತಡೆಗೋಡೆಗಳನ್ನು ಕೆಡವಿ ಮತ್ತೆ ತೋಟಕ್ಕೆ ನುಗ್ಗಿದೆ. ತೊಪ್ಪಲಕೇರಿಯ 500 ಮೀಟರ್ ತಡೆಗೋಡೆ ಕುಸಿದಿದ್ದು ಅನಂತ ನಾರಾಯಣ ನಾಯ್ಕ, ಶಂಕರ ದುರ್ಗಪ್ಪ ನಾಯ್ಕ, ಗಂಗು ಉಮೇಶ ನಾಯ್ಕ ಮತ್ತು ಕೆಲವರ ಮನೆಗೆ, ತೋಟಕ್ಕೆ ನೀರು ನುಗ್ಗಿದೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕಿ ಶಾರದಾ ಮೋಹನ … [Read more...] about ಸಮುದ್ರ ಕೊರೆತ :ತೋಟ ಮತ್ತು ಮನೆಗಳಿಗೆ ಹಾನಿ
ಕಮಟೆಹಿತ್ಲ
ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
ಹೊನ್ನಾವರ : ತನ್ನ ಮನೆಯ ಮುಂದಿನ ಮರವೊಂದಕ್ಕೆ ಸೀರೆಯಿಂದ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಮಟೆಹಿತ್ಲದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕಮಟೆಹಿತ್ಲದ ವೆಂಕಟೇಶ ವಿಠೋಬ ಮೇಸ್ತ (45) ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೃತನ ಪತ್ನಿ ಇಲ್ಲಿನ ಪೋಲಿಸರಿಗೆ ದೂರು ನೀಡಿದ್ದಾರೆ. ಟೆಂಪೋ ಚಾಲಕ ವೃತ್ತಿಯಲ್ಲಿದ್ದ ವೆಂಕಟೇಶ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ … [Read more...] about ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ