ಭಟ್ಕಳ: ಪಟ್ಟಣದ ಸರ್ಕಾರಿ ಅಸ್ಪತ್ರೆಯಲ್ಲಿ ದಿನಕಳೆದಂತೆ ಹೊರಜಿಲ್ಲೆಯ ರೋಗಿಗಳ ದಾಖಲಾತಿ ಹೆಚ್ಚಾಗುತ್ತಿದ್ದು ಇದಕ್ಕೆ ಅಲ್ಲಿಂದ ಕರೆತರುವ ಅಂಬ್ಯುಲೆನ್ಸ್ ಡ್ರೈವರ್ಗಳ ಡೀಲಿಂಗ್ ಪ್ರಮುಖ ಕಾರಣ ಎನ್ನುವ ಆತಂಕಕಾರಿ ಸುದ್ದಿ ಬೆಳಕಿಗೆ ಬಂದಿದೆ..ಭಟ್ಕಳದ ಸರ್ಕಾರಿ ಅಸ್ಪತ್ರೆಗೆ ಪ್ರತಿದಿನ ಸಾಗರ, ಶಿವಮೊಗ್ಗ, ಭದ್ರಾವತಿ, ಹಾವೇರಿ, ದಾವಣಗೆರೆ, ಉಡುಪಿ, ಕುಂದಾಪುರ ಕಡೆಗಳಿಂದ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮೊದಮೊದಲು ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸೌಲಭ್ಯ, … [Read more...] about ಆಂಬ್ಯುಲೆನ್ಸ್ ಡ್ರೈವರ್ಗಳ ಡೀಲಿಂಗ್! ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿದ ಹೊರರೋಗಿಗಳ ಸಂಖ್ಯೆ
ದಾವಣಗೆರೆ
ಪ್ರೋ. ಪ್ರವೀಣ ಮಾಹಾಭಲೇಶ್ವರ ಆನಂದಕಂದರಿಗೆ ಪಿ.ಎಚ್.ಡಿ ಪದವಿ
ಕಾರವಾರ: ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂದಿ ವಿಭಾಗ ಮುಖ್ಯಸ್ಥ, ಮೂಲತ ನಗರದ ಹರಿಕಂತ್ರವಾಡ ನಿವಾಸಿಯಾಗಿರುವ ಪ್ರೋ. ಪ್ರವೀಣ ಮಾಹಾಭಲೇಶ್ವರ ಆನಂದಕಂದರಿಗೆ ಕುವೆಂಪು ವಿಶ್ವ ವಿದ್ಯಾಲಯ ಪಿ.ಎಚ್.ಡಿ ಪದವಿ ನೀಡಿದೆ. "ಡಾ. ಸರಗು ಕೃಷ್ಣಮೂರ್ತಿಯವರ ಕಾವ್ಯ ಕೃತಿಯಲ್ಲಿ ಸಾಮಾಜಿಕ ಚಿಂಥನೆ" ವಿಷಯವಾಗಿ ಇವರು ಮಂಡಿಸಿದ ಪ್ರಬಂಧಕ್ಕೆ ಪದವಿ ಲಭಿಸಿದೆ. ಕುವೆಂಪು ವಿಶ್ವ ವಿದ್ಯಾಲಯದ ಸಹ್ಯಾದ್ರಿ ಕಲಾ ಕಾಲೇಜಿನ ಹಿಂದಿ ಮುಖ್ಯಸ್ಥ ಡಾ.ಬಿಸಿ ಬೂದಿನಾಯ್ಕ ಇವರಿಗೆ … [Read more...] about ಪ್ರೋ. ಪ್ರವೀಣ ಮಾಹಾಭಲೇಶ್ವರ ಆನಂದಕಂದರಿಗೆ ಪಿ.ಎಚ್.ಡಿ ಪದವಿ
ಬಾಲ ಮಂದಿರದಲ್ಲಿ ನಡೆದ ಶಿಕ್ಷಕರ ನೇಮಕಾತಿ
ಕಾರವಾರ:ನಗರದ ಬಾಲ ಮಂದಿರದಲ್ಲಿ ಖಾಸಗಿ ವಿದ್ಯಾಸಂಸ್ಥೆಗಳ ಶಿಕ್ಷಕರ ನೇಮಕಾತಿಗೆ ಭಾನುವಾರ ನೇರ ಸಂದರ್ಶನ ನಡೆದಿದ್ದು, 40ಕ್ಕೂ ಅಧಿಕ ಸಂಸ್ಥೆಗಳು ಹಾಗೂ 500ಕ್ಕೂ ಅಧಿಕ ಅಭ್ಯರ್ಥಿಗಳು ಹಾಜರಾಗಿದ್ದರು. ಸಂಘಟಕರ ಲೆಕ್ಕದ ಪ್ರಕಾರ 150 ಅಭ್ಯರ್ಥಿಗಳು ಆಯ್ಕೆಯಾದರು.* ಶಿಕ್ಷಕರ ಕೊರತೆ ನೀಗಿಸದ ಮೇಳ ಖಾಸಗಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತಪ್ಪಿಸಲು ಈ ಮೇಳವನ್ನು ಆಯೋಜಿಸಲಾಗಿತ್ತು. ಅನುಭವಿ ಶಿಕ್ಷಕರು ಹಾಗೂ ಉದ್ಯೋಗಕ್ಕಾಗಿ ಅಲೆದಾಡುತ್ತಿರುವ ನಿರುದ್ಯೋಗಿಗಳ … [Read more...] about ಬಾಲ ಮಂದಿರದಲ್ಲಿ ನಡೆದ ಶಿಕ್ಷಕರ ನೇಮಕಾತಿ
ಕಾಡಿಗೆ ಬಿಟ್ಟುರೂ ಜನವಸತಿ ಪ್ರದೇಶಕ್ಕೇ ಬರುವ ಜಿಂಕೆ ಮರಿ
ಮುಂಡಗೋಡ: ಕಾಡಿಗೆ ಬಿಟ್ಟು ಬಂದರೂ ಮತ್ತೆ ಮತ್ತೆ ಜನವಸತಿ ಪ್ರದೇಶಕ್ಕೇ ಬರುತ್ತಿದ್ದ ಜಿಂಕೆ ಮರಿಯೊಂದನ್ನು ಬುಧವಾರ ದಾವಣಗೆರೆ ಬಳಿಯ ಆನಗೋಡ ಪ್ರಾಣಿ ಸಂಗ್ರಹಾಲಯಕ್ಕೆ ಬಿಡಲಾಗಿದೆ.ಹದಿನೈದು ದಿನಗಳ ಹಿಂದೆ ತಾಲ್ಲೂಕಿನ ವಡಗಟ್ಟಾ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಈ ಜಿಂಕೆ ಮರಿ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಅದನ್ನು ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕೆಲದಿನಗಳವರೆಗೆ ಆರೈಕೆ ಮಾಡಿ, ಚೇತರಿಸಿಕೊಂಡ ನಂತರ ಕಾಡಿಗೆ ಬಿಟ್ಟಿದ್ದರು. ಆದರೆ, … [Read more...] about ಕಾಡಿಗೆ ಬಿಟ್ಟುರೂ ಜನವಸತಿ ಪ್ರದೇಶಕ್ಕೇ ಬರುವ ಜಿಂಕೆ ಮರಿ