ಹೊನ್ನಾವರ:
ವಿಶ್ವ ಜಲ ಮತ್ತು ಮಹಿಳಾ ದಿನಾಚರಣೆ ನಿಮಿತ್ತ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಮಂಕಿ ಹಳೇಮಠ ಹಾಗೂ ಸಮುದಾಯ ಅಭಿವೃದ್ಧಿ ಯೋಜನೆ ಮುರ್ಡೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದು
ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಜಿಲ್ಲಾ ಪಂಚಯತ್ ಸದಸ್ಯರಾದ ವನಿತಾ ನಾಯ್ಕ ಮಾತನಾಡ್ತಿ ಜೀವ ಜಲ ರಕ್ಷಣೆ ನಮ್ಮೇಲ್ಲರ ಹೋಣೆ ಪ್ರತಿಯೊಬ್ಬರು ನೀರಿನ ಮಹತ್ವವನ್ನು ಅರಿತು ನೀರನ್ನು ವೃಥ್ಯವಾಗದಂತೆ ಸರಿಯಾಗಿ ಬಳಸಿ ಎಂದು ಮಹಿಳೆಯರಿಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆರ್.ಎನ್.ಎಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಎಂ.ವಿ.ಹೆಗಡೆಯವರು ಮಾತನಾಡಿ ಮಹಿಳೆಯರು ಇಂದು ಎಲ್ಲಾ ರಂಗದಲ್ಲಿಯೂ ಮುಂಚುಣಿಯಲ್ಲಿದ್ದಾರೆ ಅದೇ ರೀತಿಯು ನೀರಿನ ಹಾಹಾಕಾರವನ್ನು ತಪ್ಪಿಸಲು ಪ್ರಕೃತಿಯನ್ನು ರಕ್ಷಿಸಿಸಲು ಮುಂದಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಹಳೇಮಠ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಾಹೀಲ್ ಕಲೀಲ್ ಶೇಖ್ ಮಾತನಾಡಿ ನೀರು ಮತ್ತು ಮಹಿಳೆಗೆ ಅವಿನಾಭಾವ ಸಂಬಂಧವಿದೆ, ನೀರನ್ನು ಹಿತಮಿತವಾಗಿ ಬಳುಸುವದರ ಜೊತೆಗೆ ನೀರಿನ ಸುಂರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಬೇಕೆಂದು ತಿಳಿಸಿದರು.
ಯೋಜನೆಯ ಸಂಯೋಜಾಧಿಕಾರಿಯರಾದ ಕೆ.ಮರಿಸ್ವಾಮಿಯವರು ಮಾತನಾಡಿ ಅಂತರ್ಜಲ ಪ್ರತಿ ವರ್ಷ ಪಾತಾಳಕ್ಕೆ ಕುಸಿಯುವ ಕಾರಣ ಅರಣ್ಯ ನಾಶ ಎಲ್ಲೆಡೆ ಕಾಂಕ್ರಿಟ್ ಕಟ್ಟಡಗಳ ಉದಯ , ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ ಪ್ರತಿವರ್ಷ ಕೋಟ್ಯಾಂತರ ಮರಗಳ ಮಾರಣ ಹೋಮ , ಕೇವಲ ಬೆಳಣಿಕೆಯಷ್ಟು ಸಸ್ಯಗÀಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ವೇದಿಕೆ ಮೇಲೆ ಹಳೇಮಠ ಗ್ರಾಮ ಪಂಚಾಯತ್ ಉಪಾದ್ಯಕ್ಷರಾದ ಸುರೇಶ ಖಾರ್ವಿ , ಗುಳದಕೇರಿ ಗ್ರಾ.ಪಂ ಉಪಾದ್ಯಕ್ಷರಾದ ಉಷಾ ನಾಯ್ಕ , ಶಿಕ್ಷಕಿಯರಾದ ಮರಿಯಾ ಎಂ. ಪರ್ನಾಂಡಿಸ್ ಹಾಗೂ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಉದ್ಯಮಿ ಹಾಗೂ ಜಲ ಶೋಧಕರಾದ ಎಂ.ಡಿ.ಮ್ಯಾಥ್ಯೂ ವಿವಿಧ ರೀತಿಯ ಜಲಶೋಧದ ವಿಧಾನವನ್ನು ಸಾರ್ವಜನಿಕರಿಗೆ ತೋರಿಸಿಕೊಟ್ಟರು.
ಕಾರ್ಯಕ್ರಮದ ಮೊದಲಿಗೆ ಪವಿತ್ರಾ ಪ್ರಾರ್ಥಿಸಿದರು, ಪ್ರಕಾಶ ಜೆ.ಸಿ ಸ್ವಾಗತಿಸಿದರು, ಅಕ್ಷತಾ ವಂದಸಿದರು
Leave a Comment