ಹೊನ್ನಾವರ ;
ತಾಲೂಕಿನ ಕುಳಕೋಡದ ಶರಾವತಿ ಕೋಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ 9 ಸಾವಿರ ರೂ. ಮೌಲ್ಯದ ಮರಳು ಹಾಗೂ ಸಾಗಾಟಕ್ಕೆ ಬಳಸಲಾದ ಎರಡು ಯಾಂತ್ರಿಕೃತ ದೋಣಿಗಳನ್ನು ಭಟ್ಕಳ ಉಪವಿಭಾಗಾಧಿಕಾರಿ ಎನ್.ಎಮ್.ಮಂಜುನಾಥ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಹಾಗು ಪೊಲೀಸ್ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ.
ಕುಳಕೋಡದ ವೆಂಕಟ್ರಮಣ ದತ್ತ ಹೆಗಡೆ ಎಂಬುವರ ಮಾಲ್ಕಿ ಜಾಗದಲ್ಲಿ ಅಕ್ರಮವಾಗಿ ಮರಳನ್ನು ಸಂಗ್ರಹಿಸಿಟ್ಟಿದ್ದರು. ಅಧಿ
ಕಾರಿಗಳು ತಂಡ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ದೋಣಿ ಮಾಲೀಕರು ಹಾಗೂ ಕಾರ್ಮಿಕರು ಪರಾರಿಯಾಗಿದ್ದು ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.ಮರಳು ಸಾಗಾಟಕ್ಕೆ ಬಳಸಲಾದ ಲಕ್ಷಾಂತರ ರೂ. ಮೌಲ್ಯದ ಎರಡು ದೋಣಿಗಳು ಹೊನ್ನಾವರ ಪೊಲೀಸರ ವಶದಲ್ಲಿದ್ದು ಮರಳು ಸಂಗ್ರಹಣಾ ಜಾಗದ ಮಾಲೀಕ ವೆಂಕಟ್ರಮಣ ದತ್ತ ಹೆಗಡೆ ಹಾಗೂ ದೋಣಿ ಮಾಲೀಕನ ವಿರುದ್ಧ ಹೊನ್ನಾವರ ಠಾಣೆಯಲಿ ಪ್ರಕರಣ ದಾಖಲಾಗಿದೆ.
Leave a Comment