ಹೊನ್ನಾವರ:
ಮನುಷ್ಯನ ಆತ್ಮರಕ್ಷಣೆಗೆ ಹಾಗೂ ಕಾಡುಪ್ರಾಣಿಗಳಿಂದ ಬೆಳೆ ಸಂರಕ್ಷಣೆಗೆ ಬಂದೂಕಿನ ಬಳಕೆ ಅತೀ ಅವಶ್ಯವಿದ್ದು ಅದರ ತರಬೇತಿಯನ್ನು ಪ್ರತಿಯೊಬ್ಬರೂ ಪಡೆದುಕೊಳ್ಳುವುದು ಅವಶ್ಯ ಎಂದು ಭಟ್ಕಳ ಉಪವಿಭಾಗಾಧಿಕಾರಿ ಮಂಜುನಾಥ ಹೇಳಿದರು.
ಪಟ್ಟಣದ ಶರಾವತಿ ಕಲಾಮಂದಿರದ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಭಟ್ಕಳ ಉಪವಿಭಾಗದ ವ್ಯಾಪ್ತಿಯ ನಾಗರಿಕರಿಗೆ ಬಂದೂಕು ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಂದೂಕು ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಈ ಪ್ರಮಾಣ ಪತ್ರದಿಂದ ಬಂದೂಕು ಲೈಸೆನ್ಸ್ ಪಡೆಯುವಲ್ಲಿ ಅನುಕೂಲವಾಗುತ್ತದೆ. ಎಲ್ಲರೂ ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ನಿವೃತ್ತ ಪೊಲೀಸ್ ಅಧಿಕಾರಿ ವಿ.ಎಸ್.ನಾಯ್ಕ ಮಾತನಾಡಿ ಶಿಬಿರದ ಮುಖ್ಯ ಉದ್ದೇಶ. ನಾಗರೀಕರ ಮತ್ತು ಪೊಲೀಸರ ನಡುವೆ ಉತ್ತಮ ಬಾಂಧವ್ಯ ಗಟ್ಟಿಗೊಳಿಸುವುದು. ಪ್ರತಿಯೊಬ್ಬ ನಾಗರೀಕನು ಸತ್ಯಶೋಧಕ್ಕೆ ಹೊರಟ ಕಂದಾಯ ಇಲಾಖೆಯ ಅಧಿಕಾರಿ ಮತ್ತು ಪೊಲೀಸರ ತನಿಖೆಯಲ್ಲಿ ಸಹಕರಿಸಬೇಕು. ತರಬೇತಿ ಪಡೆದ ವ್ಯಕ್ತಿ ದೇಶಕ್ಕೆ ಅವಶ್ಯವಿದ್ದಾಗ ಸೇವೆ ನೀಡಲು ಬದ್ಧರಾಗಿರಬೇಕು. ಸರಿಯಾಗಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ .22 ರೈಪಲ್ ಪರವಾನಿಗೆ ನೀಡಲಾಗುವುದು. ಇದನ್ನು ಜವಬ್ದಾರಿಯಿಂದ ಬಳಸುವುದು ಅವಶ್ಯವಿದೆ ಎಂದರು.
ಭಟ್ಕಳ ಡಿವೈಎಸ್ಪಿ ಶಿವಕುಮಾರ ಮಾತನಾಡಿ ಮನುಷ್ಯನ ಮೇಲೆ ನಡೆಯುವ ಮಾನಸಿಕ, ದೈಹಿಕ ಹಲ್ಲೆ ನಡೆಯಲು ಈ ತರಬೇತಿ ಸಹಕಾರಿಯಾಗುತ್ತದೆ, ಎಲ್ಲರೂ ಒಂದು ವಾರಗಳ ಕಾಲ ನಡೆಯುವ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಶಶ್ತ್ರ ಪಡೆಯ ನಾಗಪ್ಪ ನಾಯ್ಕ ಬಂದೂಕು ಬಳಕೆಯ ಕುರಿತು ಮಾಹಿತಿ ನೀಡಿದರು.
ಕುಮಟಾ ಸಿಪಿಐ ನರಸಿಂಹಮೂರ್ತಿ, ಭಟ್ಕಳ ಸಿಪಿಐ ಸುರೇಶ ನಾಯ್ಕ, ಕುಮಟಾ ಪಿಎಸ್ಐ ಸಶಿಕುಮಾರ, ಗೋಕರ್ಣ ಪಿಎಸ್ಐ ಗೋವಿಂದ, ಕ್ರೈಂ ಪಿಎಸ್ಐ ಗಣೇಶ ಜೋಗಳೇಕರ್ ಉಪಸ್ಥಿತರಿದ್ದರು. ಹೊನ್ನಾವರ ಸಿಪಿಐ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಪಿಎಸ್ಐ ಆನಂದಮೂರ್ತಿ ಕಾರ್ಯಕ್ರಮ ನಿರೂಪಿಸಿದ
Leave a Comment